ರಾಯಬಾಗ: ತಾಲ್ಲೂಕಿನ ಹುಲ್ಯಾಳ ಕೆರೆ 16 ವರ್ಷಗಳ ನಂತರ ತುಂಬಿದ್ದರಿಂದ ಸ್ಥಳೀಯ ವಸಂತರಾವ ಪಾಟೀಲ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪ್ರತಾಪರಾವ ಪಾಟೀಲ ಅವರು ಕೆರೆಗೆ ಬಾಗಿನ ಅರ್ಪಿಸಿದರು.
ನಂತರ ಮಾತನಾಡಿದ ಅವರು, ‘ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಕೆರೆ ತುಂಬಿದ್ದರಿಂದ ಪ್ರಸಕ್ತ ಸಾಲಿನ ನೀರಿನ ಸಮಸ್ಯೆ ಇಲ್ಲದಂತಾಗುತ್ತದೆ’ ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹಾದೇವ ಕೊಕಾಟೆ, ಕಲ್ಲಪ್ಪ ಹಳಿಂಗಳೆ, ಪಟ್ಟಣ ಪಂಚಾಯ್ತಿ ಸದಸ್ಯರಾದ ಚಂದ್ರಕಾಂತ ಕೋರೆ, ಬಿ.ಎಸ್. ಗಡ್ಡೆ, ರಾಜು ಪೂಜೇರಿ, ಜಾವೇದ್ ಮೋಮಿನ್, ರವಿ ತರಾಳ, ಬೀರಪ್ಪ ಕುರಿ ಇದ್ದರು.