ಸದ್ಯ ದನಕರುಗಳ ಸಾವು ನಿಯಂತ್ರಣಕ್ಕೆ ಬಂದಿದ್ದು, ಮೃತಪಟ್ಟಿರುವ ದನಗಳ ಮೆದುಳಿನ ಭಾಗವನ್ನು ಬೆಂಗಳೂರು ಮತ್ತು ಊಟಿಯಲ್ಲಿರುವ ರೆಬಿಸ್ ಕೇಂದ್ರಗಳಿಗೆ ಕಳುಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪಶು ಇಲಾಖೆಯ ಗೋಕಾಕ ಸಹ ನಿರ್ದೇಶಕ ಡಾ. ಎಂ.ವಿ. ಕಮತ, ಡಾ. ಎಂ.ಬಿ. ವಿಭೂತಿ, ಡಾ. ಬಿ.ಎಸ್. ಗೌಡರ, ಡಾ. ಪ್ರಶಾಂತ ಕುರಬೇಟ, ಎಂ.ಬಿ. ಹೊಸೂರ, ಸುರೇಶ ಆದಪ್ಪಗೋಳ ಮತ್ತು ಎಸ್.ಜಿ. ಮಿಲ್ಲಾನಟ್ಟಿ ಲಸಿಕೆ ನೀಡುತ್ತಿದ್ದಾರೆ.