‘ಬೆಳಿಗ್ಗೆ 8ರವರೆಗೆ ಕೇವಲ 21 ಬಸ್ಗಳ ಕಾರ್ಯಾಚರಣೆಯಷ್ಟೆ ಆಗಿದೆ. ನೌಕರರು ಮುಷ್ಕರ ನಡೆಸುವುದಾಗಿ ನಮಗೆ ಮುಂಚಿತವಾಗಿ ಮಾಹಿತಿ ನೀಡಿರಲಿಲ್ಲ. ಕೇಂದ್ರ ಸಂಘಟನೆಯವರಿಂದ ಸೂಚನೆ ಬಂತು ಎಂದು ಹೇಳುತ್ತಿದ್ದಾರೆ. ಬೆಳಿಗ್ಗೆ 8ರ ನಂತರ ಇಲ್ಲಿಂದ ಗೋವಾ ಮತ್ತು ಮಹಾರಾಷ್ಟ್ರ ಸೇರಿದಂತೆ ಬೇರೆ ಕಡೆಗಳಿಗೆ ಹಾಗೂ ಇತರ ಕಡೆಗಳಿಂದ ಇಲ್ಲಿಗೆ ಬಸ್ಗಳು ಬಂದಿಲ್ಲ. ಇದರಿಂದ ಎಷ್ಟು ನಷ್ಟ ಉಂಟಾಗಿದೆ ಎನ್ನುವ ಅಂದಾಜು ಶನಿವಾರ ಗೊತ್ತಾಗಲಿದೆ’ ಎಂದು ಮಾಹಿತಿ ನೀಡಿದರು.