<p><strong>ಚನ್ನಮ್ಮನ ಕಿತ್ತೂರು</strong>: ‘ನಾನೂ ಮೈಸೂರಿನವನು, ಅಲ್ಲಿಯ ಗರಡಿಯಲ್ಲಿ ಪಳಗಿದ್ದೇನೆ. ನಮ್ಮವರನ್ನು ಏಕವಚನದಲ್ಲಿ ಟೀಕಿಸಿದರೆ ಸಹಿಸುವುದುಂಟೆ’ ಎಂದು ಸಂಸದ ಅನಂತಕುಮಾರ ಹೆಗಡೆ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು.</p>.<p>ಇಲ್ಲಿಯ ಬಿಜೆಪಿ ಕಚೇರಿಯಲ್ಲಿ ಬುಧವಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಅಮ್ಮನ ಎದೆ ಹಾಲು ಕುಡಿದು ಬೆಳೆದಿದ್ದೇನೆ. ರಾಮ, ದೇವಸ್ಥಾನ ಮತ್ತು ಅಮ್ಮನ ಬಗ್ಗೆ ಮಾತನಾಡಿದರೆ ಸಹಿಸುವುದಿಲ್ಲ’ ಎಂದರು.</p>.<p>‘ಮಹಾಯುದ್ಧ (ಲೋಕಸಭೆ ಚುನಾವಣೆ) ಪ್ರಾರಂಭವಾಗಿದೆ. ಯುದ್ಧಭೂಮಿಯಲ್ಲಿ ಶಾಸ್ತ್ರೀಯ ಸಂಗೀತ ಅಥವಾ ಭರತನಾಟ್ಯಕ್ಕೆ ಅವಕಾಶವಿಲ್ಲ. ಹೇಗೆ ಮಾತನಾಡಬೇಕೊ ಹಾಗೆಯೇ ಮಾತನಾಡಬೇಕು’ ಎಂದರು.</p>.<p>‘ಚುನಾವಣೆಯಲ್ಲಿ ಹಣ ಕೊಟ್ಟು ನಾನು ಆಯ್ಕೆಯಾಗಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ 4.75 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದೆ. ಇದು ದಕ್ಷಿಣ ಭಾರತದಲ್ಲೇ ದಾಖಲೆಯಾಗಿದೆ. ಈ ಬಾರಿ ಯಾರೇ ಅಭ್ಯರ್ಥಿಯಾದರೂ ರಾಷ್ಟ್ರಮಟ್ಟದಲ್ಲಿ ದಾಖಲೆ ಆಗುವ ರೀತಿ ಗೆಲ್ಲಿಸಬೇಕು’ ಎಂದು ಅವರು ಕೋರಿದರು.</p>.<p>‘ಮಂದಿರಗಳನ್ನು ಕೆಡವಿ ಎಲ್ಲಿ ಮಸೀದಿ ನಿರ್ಮಿಸಿದ್ದಾರೋ, ಅಲ್ಲಿಯ ಕಲ್ಲುಗಳು ಪಿಸುಗುಡುತ್ತಿವೆ. ಅಲ್ಲಿ ಮತ್ತೆ ಹಿಂದೂ ದೇವಾಲಯ ನಿರ್ಮಿಸಬೇಕಿದೆ. ರಣಭೈರವ ಎದ್ದಾಗಿದೆ. ಸಾವಿರ ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಂಡಿದ್ದು, ಈಗ ಕಾಲ ಕೂಡಿ ಬರುತ್ತಿದೆ’ ಎಂದರು.</p>.<div><blockquote>ನನ್ನ ಬಳಿ ಬರುವವರಿಗೆ ರಾಜಕಾರಣ ಬಿಟ್ಟು ಬೇರೆ ವಿಷಯ ಮಾತನಾಡಲು ಹೇಳುತ್ತಿದ್ದೆ. ರಾಜಕಾರಣದಿಂದ ದೂರ ಸರಿಯಲು ಇಚ್ಛಿಸಿದ್ದೆ. ದೇವರ ಸಂಕಲ್ಪವಿದೆ. ಮತ್ತೆ ನಿಮ್ಮ ಮುಂದೆ ಬಂದು ನಿಂತಿರುವೆ</blockquote><span class="attribution">ಅನಂತಕುಮಾರ ಹೆಗಡೆ ಸಂಸದ ಉತ್ತರ ಕನ್ನಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಮ್ಮನ ಕಿತ್ತೂರು</strong>: ‘ನಾನೂ ಮೈಸೂರಿನವನು, ಅಲ್ಲಿಯ ಗರಡಿಯಲ್ಲಿ ಪಳಗಿದ್ದೇನೆ. ನಮ್ಮವರನ್ನು ಏಕವಚನದಲ್ಲಿ ಟೀಕಿಸಿದರೆ ಸಹಿಸುವುದುಂಟೆ’ ಎಂದು ಸಂಸದ ಅನಂತಕುಮಾರ ಹೆಗಡೆ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು.</p>.<p>ಇಲ್ಲಿಯ ಬಿಜೆಪಿ ಕಚೇರಿಯಲ್ಲಿ ಬುಧವಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಅಮ್ಮನ ಎದೆ ಹಾಲು ಕುಡಿದು ಬೆಳೆದಿದ್ದೇನೆ. ರಾಮ, ದೇವಸ್ಥಾನ ಮತ್ತು ಅಮ್ಮನ ಬಗ್ಗೆ ಮಾತನಾಡಿದರೆ ಸಹಿಸುವುದಿಲ್ಲ’ ಎಂದರು.</p>.<p>‘ಮಹಾಯುದ್ಧ (ಲೋಕಸಭೆ ಚುನಾವಣೆ) ಪ್ರಾರಂಭವಾಗಿದೆ. ಯುದ್ಧಭೂಮಿಯಲ್ಲಿ ಶಾಸ್ತ್ರೀಯ ಸಂಗೀತ ಅಥವಾ ಭರತನಾಟ್ಯಕ್ಕೆ ಅವಕಾಶವಿಲ್ಲ. ಹೇಗೆ ಮಾತನಾಡಬೇಕೊ ಹಾಗೆಯೇ ಮಾತನಾಡಬೇಕು’ ಎಂದರು.</p>.<p>‘ಚುನಾವಣೆಯಲ್ಲಿ ಹಣ ಕೊಟ್ಟು ನಾನು ಆಯ್ಕೆಯಾಗಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ 4.75 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದೆ. ಇದು ದಕ್ಷಿಣ ಭಾರತದಲ್ಲೇ ದಾಖಲೆಯಾಗಿದೆ. ಈ ಬಾರಿ ಯಾರೇ ಅಭ್ಯರ್ಥಿಯಾದರೂ ರಾಷ್ಟ್ರಮಟ್ಟದಲ್ಲಿ ದಾಖಲೆ ಆಗುವ ರೀತಿ ಗೆಲ್ಲಿಸಬೇಕು’ ಎಂದು ಅವರು ಕೋರಿದರು.</p>.<p>‘ಮಂದಿರಗಳನ್ನು ಕೆಡವಿ ಎಲ್ಲಿ ಮಸೀದಿ ನಿರ್ಮಿಸಿದ್ದಾರೋ, ಅಲ್ಲಿಯ ಕಲ್ಲುಗಳು ಪಿಸುಗುಡುತ್ತಿವೆ. ಅಲ್ಲಿ ಮತ್ತೆ ಹಿಂದೂ ದೇವಾಲಯ ನಿರ್ಮಿಸಬೇಕಿದೆ. ರಣಭೈರವ ಎದ್ದಾಗಿದೆ. ಸಾವಿರ ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಂಡಿದ್ದು, ಈಗ ಕಾಲ ಕೂಡಿ ಬರುತ್ತಿದೆ’ ಎಂದರು.</p>.<div><blockquote>ನನ್ನ ಬಳಿ ಬರುವವರಿಗೆ ರಾಜಕಾರಣ ಬಿಟ್ಟು ಬೇರೆ ವಿಷಯ ಮಾತನಾಡಲು ಹೇಳುತ್ತಿದ್ದೆ. ರಾಜಕಾರಣದಿಂದ ದೂರ ಸರಿಯಲು ಇಚ್ಛಿಸಿದ್ದೆ. ದೇವರ ಸಂಕಲ್ಪವಿದೆ. ಮತ್ತೆ ನಿಮ್ಮ ಮುಂದೆ ಬಂದು ನಿಂತಿರುವೆ</blockquote><span class="attribution">ಅನಂತಕುಮಾರ ಹೆಗಡೆ ಸಂಸದ ಉತ್ತರ ಕನ್ನಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>