<p><strong>ಬೆಳಗಾವಿ: </strong>‘ಶರಣರು ನಡೆದು, ನುಡಿದು ತೋರಿದ ಜೀವನ ದರ್ಶನ ಅಪೂರ್ವವಾದುದು. ದರ್ಶನವೆಂದರೆ ಹೊರಗೆ ತೋರುವ ಜ್ಞಾನವಲ್ಲ. ಅದು ಅಂತರಂಗದ ದಿವ್ಯರೂಪ’ ಎಂದು ಪ್ರಾಧ್ಯಾಪಕ ಡಾ.ಬಸವರಾಜ ಧಾರವಾಡ ಹೇಳಿದರು.</p>.<p>ಇಲ್ಲಿನ ಲಿಂಗಾಯತ ಭವನದಲ್ಲಿ ವೀರಶೈವ ಮಹಾಸಭಾ ಗುರುವಾರ ಆಯೋಜಿಸಿದ್ದ ‘ಅನುಭಾವ ಗೋಷ್ಠಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ನಮ್ಮ ಜೀವನ ಸತ್ಯದ ರೂಪವಾಗಬೇಕಾದರೆ ನಮ್ಮ ನಡೆ ನುಡಿಗಳು ಒಂದೇ ಆಗಿರಬೇಕು. ಶರಣರು ಜೀವನದಲ್ಲಿ ತಾವು ಕಂಡುಕೊಂಡ ಸತ್ಯದರ್ಶನವನ್ನು ಅಂತರಂಗದಲ್ಲಿ ಅಳವಡಿಸಿಕೊಂಡರು. ತಮ್ಮ ನಡೆಯಲ್ಲಿ ಅನುಷ್ಠಾನಗೊಳಿಸಿದರು. ಸಮಾಜದಲ್ಲಿ ಸಮಾನತೆ ತರುವ ಮೂಲಕ ವ್ಯಕ್ತಿಯ ಕಲ್ಯಾಣಕ್ಕಾಗಿ ಶ್ರಮಿಸಿದರು. ಆ ಸಮಾಜಮುಖಿ ದರ್ಶನವನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ’ ಎಂದರು.</p>.<p>‘ಇಂದು ನಾವು ನಮ್ಮತನಗಳನ್ನು ಕಳೆದುಕೊಂಡು ಬದುಕುತ್ತಿರುವುದು ವಿಪರ್ಯಾಸ. ಆತ್ಮಮುಖಿ ಚಿಂತನೆ ಮಾತ್ರ ನಮ್ಮ ಬದುಕಿನ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯ. ವಚನಗಳನ್ನು ಓದುವ ಮೂಲಕ ಶರಣರ ಆತ್ಮದರ್ಶನಕ್ಕೆ ಯತ್ನಿಸಬೇಕು’ ಎಂದು ತಿಳಿಸಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ‘ಎಲ್ಲ ಧರ್ಮಗಳೂ ನಾವೆಲ್ಲರೂ ಒಗ್ಗೂಡಿ ಬಾಳಿ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದು ತಿಳಿಸುತ್ತವೆ. ಸೌಹಾರ್ದವೆ ಮಾನವ ಧರ್ಮ; ಅಸಹನೆಯೇ ಅಧರ್ಮ ಎನ್ನುವುದನ್ನು ಅರಿತು ಬಾಳಿದರೆ ಶರಣರ ಆಶೀರ್ವಾದ ದೊರೆಯುತ್ತದೆ’ ಎಂದರು.</p>.<p>ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ‘ಶರಣರು ನೀಡಿರುವ ಸಂದೇಶಗಳು ವಿಶ್ವಸತ್ಯಗಳಾಗಿವೆ. ಅವುಗಳನ್ನು ಅನುಕರಣೆಗೆ ತರುವುದೇ ನಾವು ಸಲ್ಲಿಸುವ ನಿಜವಾದ ಗೌರವವಾಗಿದೆ’ ಎಂದು ಹೇಳಿದರು.</p>.<p>ವಕೀಲ ಎಂ.ಬಿ. ಝಿರಲಿ, ಡಾ.ಎಫ್.ವಿ. ಮಾನ್ವಿ, ಗುರುಬಸಪ್ಪ ಚೊಣ್ಣದ, ಪ್ರೊ.ಎ.ಬಿ. ಕೊರಬು, ಪ್ರತಿಭಾ ಕಳ್ಳಿಮಠ, ಬೀನಾ ಕತ್ತಿ, ಡಾ.ಮಹಾದೇವಿ ಹಾಗರಗಿ, ಪ್ರೊ.ಸುಮಿತ್ರಾ ಚೋಬಾರಿ, ಜ್ಯೋತಿ ಭಾವಿಕಟ್ಟಿ, ಮಹಾದೇವಿ ವಿಭೂತಿ ಇದ್ದರು.</p>.<p>ಇಂದಿರಾ ಮೋಟೆ ಬೆನ್ನೂರ ಪ್ರಾರ್ಥಿಸಿದರು. ಸುಧಾ ಪಾಟೀಲ ವಚನ ವಿಶ್ಲೇಷಣೆ ಮಾಡಿದರು. ಸುಜಾತಾ ವಸ್ತ್ರದ ಭಕ್ತಿಗೀತೆ ನುಡಿಸಿದರು. ಆರ್.ಪಿ. ಪಾಟೀಲ ಸ್ವಾಗತಿಸಿದರು. ಸೋಮಲಿಂಗ ಮಾವಿನಕಟ್ಟಿ ಪರಿಚಯಿಸಿದರು. ಆಶಾ ಯಮಕನಮರಡಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: </strong>‘ಶರಣರು ನಡೆದು, ನುಡಿದು ತೋರಿದ ಜೀವನ ದರ್ಶನ ಅಪೂರ್ವವಾದುದು. ದರ್ಶನವೆಂದರೆ ಹೊರಗೆ ತೋರುವ ಜ್ಞಾನವಲ್ಲ. ಅದು ಅಂತರಂಗದ ದಿವ್ಯರೂಪ’ ಎಂದು ಪ್ರಾಧ್ಯಾಪಕ ಡಾ.ಬಸವರಾಜ ಧಾರವಾಡ ಹೇಳಿದರು.</p>.<p>ಇಲ್ಲಿನ ಲಿಂಗಾಯತ ಭವನದಲ್ಲಿ ವೀರಶೈವ ಮಹಾಸಭಾ ಗುರುವಾರ ಆಯೋಜಿಸಿದ್ದ ‘ಅನುಭಾವ ಗೋಷ್ಠಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ನಮ್ಮ ಜೀವನ ಸತ್ಯದ ರೂಪವಾಗಬೇಕಾದರೆ ನಮ್ಮ ನಡೆ ನುಡಿಗಳು ಒಂದೇ ಆಗಿರಬೇಕು. ಶರಣರು ಜೀವನದಲ್ಲಿ ತಾವು ಕಂಡುಕೊಂಡ ಸತ್ಯದರ್ಶನವನ್ನು ಅಂತರಂಗದಲ್ಲಿ ಅಳವಡಿಸಿಕೊಂಡರು. ತಮ್ಮ ನಡೆಯಲ್ಲಿ ಅನುಷ್ಠಾನಗೊಳಿಸಿದರು. ಸಮಾಜದಲ್ಲಿ ಸಮಾನತೆ ತರುವ ಮೂಲಕ ವ್ಯಕ್ತಿಯ ಕಲ್ಯಾಣಕ್ಕಾಗಿ ಶ್ರಮಿಸಿದರು. ಆ ಸಮಾಜಮುಖಿ ದರ್ಶನವನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ’ ಎಂದರು.</p>.<p>‘ಇಂದು ನಾವು ನಮ್ಮತನಗಳನ್ನು ಕಳೆದುಕೊಂಡು ಬದುಕುತ್ತಿರುವುದು ವಿಪರ್ಯಾಸ. ಆತ್ಮಮುಖಿ ಚಿಂತನೆ ಮಾತ್ರ ನಮ್ಮ ಬದುಕಿನ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯ. ವಚನಗಳನ್ನು ಓದುವ ಮೂಲಕ ಶರಣರ ಆತ್ಮದರ್ಶನಕ್ಕೆ ಯತ್ನಿಸಬೇಕು’ ಎಂದು ತಿಳಿಸಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ‘ಎಲ್ಲ ಧರ್ಮಗಳೂ ನಾವೆಲ್ಲರೂ ಒಗ್ಗೂಡಿ ಬಾಳಿ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದು ತಿಳಿಸುತ್ತವೆ. ಸೌಹಾರ್ದವೆ ಮಾನವ ಧರ್ಮ; ಅಸಹನೆಯೇ ಅಧರ್ಮ ಎನ್ನುವುದನ್ನು ಅರಿತು ಬಾಳಿದರೆ ಶರಣರ ಆಶೀರ್ವಾದ ದೊರೆಯುತ್ತದೆ’ ಎಂದರು.</p>.<p>ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ‘ಶರಣರು ನೀಡಿರುವ ಸಂದೇಶಗಳು ವಿಶ್ವಸತ್ಯಗಳಾಗಿವೆ. ಅವುಗಳನ್ನು ಅನುಕರಣೆಗೆ ತರುವುದೇ ನಾವು ಸಲ್ಲಿಸುವ ನಿಜವಾದ ಗೌರವವಾಗಿದೆ’ ಎಂದು ಹೇಳಿದರು.</p>.<p>ವಕೀಲ ಎಂ.ಬಿ. ಝಿರಲಿ, ಡಾ.ಎಫ್.ವಿ. ಮಾನ್ವಿ, ಗುರುಬಸಪ್ಪ ಚೊಣ್ಣದ, ಪ್ರೊ.ಎ.ಬಿ. ಕೊರಬು, ಪ್ರತಿಭಾ ಕಳ್ಳಿಮಠ, ಬೀನಾ ಕತ್ತಿ, ಡಾ.ಮಹಾದೇವಿ ಹಾಗರಗಿ, ಪ್ರೊ.ಸುಮಿತ್ರಾ ಚೋಬಾರಿ, ಜ್ಯೋತಿ ಭಾವಿಕಟ್ಟಿ, ಮಹಾದೇವಿ ವಿಭೂತಿ ಇದ್ದರು.</p>.<p>ಇಂದಿರಾ ಮೋಟೆ ಬೆನ್ನೂರ ಪ್ರಾರ್ಥಿಸಿದರು. ಸುಧಾ ಪಾಟೀಲ ವಚನ ವಿಶ್ಲೇಷಣೆ ಮಾಡಿದರು. ಸುಜಾತಾ ವಸ್ತ್ರದ ಭಕ್ತಿಗೀತೆ ನುಡಿಸಿದರು. ಆರ್.ಪಿ. ಪಾಟೀಲ ಸ್ವಾಗತಿಸಿದರು. ಸೋಮಲಿಂಗ ಮಾವಿನಕಟ್ಟಿ ಪರಿಚಯಿಸಿದರು. ಆಶಾ ಯಮಕನಮರಡಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>