ಬೆಳಗಾವಿ: ಬಿಜೆಪಿ ಗೋಕಾಕ ನಗರ ಮಂಡಲದ ಅಧ್ಯಕ್ಷ ಭೀಮಶಿ ಭರಮಣ್ಣವರ ಅವರ ರಾಜಕೀಯ ಹಾಗೂ ಸಮಾಜ ಸೇವೆ ಗುರುತಿಸಿ ಬೇಡಕಿಹಾಳದ ಕೈ.ಬಸವಂತ ನಾಗು ಶಿಂಗಾಡೆ ಚಾರಿಟಬಲ್ ಟ್ರಸ್ಟ್ನವರು ‘ಆದರ್ಶ ಸಮಾಜ ಭೂಷಣ ಗೌರವ ಪ್ರಶಸ್ತಿ’ಯನ್ನು ಈಚೆಗೆ ಪ್ರದಾನ ಮಾಡಿದರು.
ನಿಪ್ಪಾಣಿ ತಾಲ್ಲೂಕಿನ ಬೇಡಕಿಹಾಳದ ಬಿ.ಎಸ್. ಸಂಯುಕ್ತ ಕಾಲೇಜನ ರತ್ನಪ್ಪ ಕುಂಬಾರ ಸಭಾಭವನದಲ್ಲಿ ಸಮಾರಂಭ ನಡೆಯಿತು.
ಹತ್ತರಗಿಯ ಗುರುಸಿದ್ಧೇಶ್ವರ ಸ್ವಾಮೀಜಿ, ಟ್ರಸ್ಟ್ ಸಂಸ್ಥಾಪಕ ಹಾಗೂ ಪತ್ರಕರ್ತ ವಿಕ್ರಮ ಶಿಂಗಾಡೆ, ಬಾಳು ಉದಗಟ್ಟಿ ಇದ್ದರು.