ಮೂಡಲಗಿ, ಗೋಕಾಕ, ಹುಕ್ಕೇರಿ, ಚಿಕ್ಕೋಡಿ, ರಾಯಭಾಗ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಈ ಸಮಸ್ಯೆ ನೀಗಿಸಲು ಹಿಡಕಲ್ ಜಲಾಶಯದಿಂದ ಜಿಎಲ್ಬಿಸಿಗೆ 2 ಸಾವಿರ ಕ್ಯುಸೆಕ್, ಜಿಆರ್ಬಿಸಿಗೆ 2 ಸಾವಿರ ಕ್ಯುಸೆಕ್ ಮತ್ತು ಸಿಬಿಸಿಗೆ 500 ಕ್ಯುಸೆಕ್ ನೀರನ್ನು ನಿತ್ಯ ಹರಿಸುವಂತೆ ಒತ್ತಾಯಿಸಿದ್ದಾರೆ.