ಕಳೆದ ಮೂರು ದಶಕಗಳಿಂದ ಗಮಕ ಕಾವ್ಯ ವಾಚನಗಳಿಗೆ ವ್ಯಾಖ್ಯಾನ ನೀಡುವುದರ ಮೂಲಕ ಕುಮಾರ ವ್ಯಾಸ, ರಾಘವಾಂಕ ಲಕ್ಷ್ಮೀಶ, ನರಹರಿ ಮುಂತಾದವರ ಕಾವ್ಯಗಳನ್ನು ಇಂದಿನ ಜನರಿಗೆ ವಿವರಿಸಲು ಸಾಧ್ಯವಾಗಿದೆ. ಮಹಾಕಾವ್ಯಗಳನ್ನು ರಂಜನೀಯವಾಗಿ ಹೇಳುವುದರೊಂದಿಗೆ ಅದರ ಅಂತರಂಗವನ್ನು ಸರಿಯಾಗಿ ಗ್ರಹಿಸಿ, ಅವುಗಳಲ್ಲಿರುವ ಸಾಮಾಜಿಕ ಮೌಲ್ಯಗಳು, ತತ್ವ ವಿಚಾರಗಳನ್ನು ಕೇಳುಗರ ಮನ ಮುಟ್ಟುವಂತೆ ವ್ಯಾಖ್ಯಾನಿಸುವ ವಿಶೇಷತೆಯನ್ನು ರೂಢಿಸಿಕೊಂಡಿದ್ದೇನೆ. ಇದಕ್ಕಾಗಿ ಶಾಸ್ತ್ರ ಪುರಾಣಗಳನ್ನು ಆಳವಾದ ಅಧ್ಯಯನ ನಡೆಸುತ್ತಿದ್ದೇನೆ.