<p><strong>ಬೆಳಗಾವಿ:</strong> ಇಲ್ಲಿನ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ 2023 ಮತ್ತು 2024ನೇ ಸಾಲಿನ ‘ಬಸವರಾಜ ಕಟ್ಟೀಮನಿ ಯುವ ಸಾಹಿತ್ಯ ಪುಸ್ತಕ ಪ್ರಶಸ್ತಿ’ ಪುರಸ್ಕೃತರ ವಿವರ ಪ್ರಕಟಿಸಿದೆ. </p>.<p>2023ನೇ ಸಾಲಿನ ಪ್ರಶಸ್ತಿಗೆ ಕತೆ ಪ್ರಕಾರದಲ್ಲಿ ಕಾಸರಗೋಡಿನ ಗೋವಿಂದರಾಜು ಕಲ್ಲೂರ ಅವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಕಥಾಸಂಕಲನ, ಕಾದಂಬರಿ ಪ್ರಕಾರದಲ್ಲಿ ಮಂಗಳೂರಿನ ಫೌಝಿಯಾ ಸಲೀಮ್ ಅವರ ‘ನೀ ದೂರ ಹೋದಾಗ’ ಕೃತಿ ಆಯ್ಕೆಯಾಗಿವೆ.</p>.<p>2024ನೇ ಸಾಲಿನ ಕತೆ ಪ್ರಕಾರದಲ್ಲಿ ಹುಬ್ಬಳ್ಳಿಯ ಕಾವ್ಯಾ ಕಡಮೆ ಅವರ ‘ತೊಟ್ಟು ಕ್ರಾಂತಿ’ ಕಥಾಸಂಕಲನ, ಕಾದಂಬರಿ ಪ್ರಕಾರದಲ್ಲಿ ಬೆಂಗಳೂರಿನ ಜಯರಾಮಚಾರಿ ಅವರ ‘ಕಿಲಿಗ್’ ಕೃತಿ ಆಯ್ಕೆಯಾಗಿವೆ. ಪ್ರಶಸ್ತಿ ತಲಾ ₹10 ಸಾವಿರ ನಗದು ಬಹುಮಾನ ಹೊಂದಿವೆ.</p>.<p>ಮಲ್ಲಿಕಾರ್ಜುನ ಹಿರೇಮಠ ಸ್ಥಾಪಿಸಿರುವ ದತ್ತಿನಿಧಿಯ ಬಸವರಾಜ ಕಟ್ಟೀಮನಿ ಆತ್ಮಕಥಾ ಪುಸ್ತಕ ಪ್ರಶಸ್ತಿಗೆ ಹುಬ್ಬಳ್ಳಿಯ ಅರುಣಕುಮಾರ ಹಬ್ಬು ಅವರ ‘ಬೊಗಸೆ ನೀರು’ ಕೃತಿ ಆಯ್ಕೆಯಾಗಿದೆ. ಇದು ₹20 ಸಾವಿರ ನಗದು ಬಹುಮಾನ ಒಳಗೊಂಡಿದೆ. ಧಾರವಾಡದಲ್ಲಿ ಜನವರಿ 18ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಇಲ್ಲಿನ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ 2023 ಮತ್ತು 2024ನೇ ಸಾಲಿನ ‘ಬಸವರಾಜ ಕಟ್ಟೀಮನಿ ಯುವ ಸಾಹಿತ್ಯ ಪುಸ್ತಕ ಪ್ರಶಸ್ತಿ’ ಪುರಸ್ಕೃತರ ವಿವರ ಪ್ರಕಟಿಸಿದೆ. </p>.<p>2023ನೇ ಸಾಲಿನ ಪ್ರಶಸ್ತಿಗೆ ಕತೆ ಪ್ರಕಾರದಲ್ಲಿ ಕಾಸರಗೋಡಿನ ಗೋವಿಂದರಾಜು ಕಲ್ಲೂರ ಅವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಕಥಾಸಂಕಲನ, ಕಾದಂಬರಿ ಪ್ರಕಾರದಲ್ಲಿ ಮಂಗಳೂರಿನ ಫೌಝಿಯಾ ಸಲೀಮ್ ಅವರ ‘ನೀ ದೂರ ಹೋದಾಗ’ ಕೃತಿ ಆಯ್ಕೆಯಾಗಿವೆ.</p>.<p>2024ನೇ ಸಾಲಿನ ಕತೆ ಪ್ರಕಾರದಲ್ಲಿ ಹುಬ್ಬಳ್ಳಿಯ ಕಾವ್ಯಾ ಕಡಮೆ ಅವರ ‘ತೊಟ್ಟು ಕ್ರಾಂತಿ’ ಕಥಾಸಂಕಲನ, ಕಾದಂಬರಿ ಪ್ರಕಾರದಲ್ಲಿ ಬೆಂಗಳೂರಿನ ಜಯರಾಮಚಾರಿ ಅವರ ‘ಕಿಲಿಗ್’ ಕೃತಿ ಆಯ್ಕೆಯಾಗಿವೆ. ಪ್ರಶಸ್ತಿ ತಲಾ ₹10 ಸಾವಿರ ನಗದು ಬಹುಮಾನ ಹೊಂದಿವೆ.</p>.<p>ಮಲ್ಲಿಕಾರ್ಜುನ ಹಿರೇಮಠ ಸ್ಥಾಪಿಸಿರುವ ದತ್ತಿನಿಧಿಯ ಬಸವರಾಜ ಕಟ್ಟೀಮನಿ ಆತ್ಮಕಥಾ ಪುಸ್ತಕ ಪ್ರಶಸ್ತಿಗೆ ಹುಬ್ಬಳ್ಳಿಯ ಅರುಣಕುಮಾರ ಹಬ್ಬು ಅವರ ‘ಬೊಗಸೆ ನೀರು’ ಕೃತಿ ಆಯ್ಕೆಯಾಗಿದೆ. ಇದು ₹20 ಸಾವಿರ ನಗದು ಬಹುಮಾನ ಒಳಗೊಂಡಿದೆ. ಧಾರವಾಡದಲ್ಲಿ ಜನವರಿ 18ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>