‘ಇಲ್ಲಿ ಮೂವತ್ತು ಕುಟುಂಬಗಳಿವೆ. ಆದರೆ, ಕುಡಿಯುವ ನೀರಿಲ್ಲದೇ ತೊಂದರೆ ಅನುಭವಿಸುತ್ತಿದ್ದೇವೆ. ಇಪ್ಪತ್ತೈದು ದಿನಗಳ ಹಿಂದೆ ಕೊಳವೆಬಾವಿ ಕೆಟ್ಟಿದೆ. ಅಕ್ಕ ಪಕ್ಕದಲ್ಲೂ ನೀರಿನ ಮೂಲವಿಲ್ಲದೆ ಪರದಾಡುತ್ತಿದ್ದೇವೆ. ಗ್ರಾಮ ಪಂಚಾಯಿತಿಗೆ ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ. ಪಿಡಿಒ ನಿರ್ಲಕ್ಷ್ಯ ಮಾಡುತ್ತಿದ್ದಾರೆ’ ಎಂದು ನಿವಾಸಿ ಸಂಜೀವ ಶಿವನೂರ ಆರೋಪಿಸಿದರು.