ಯರಗಟ್ಟಿ: ರೈತ ಹುತಾತ್ಮರ ದಿನಾಚರಣೆ ಅಂಗವಾಗಿ, ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿಕರ್ನಾಟಕ ರೈತ ಸಂಘ, ಹಸಿರು ಸೇನೆ, ದಲಿತ ಸ್ವಾಭಿಮಾನ ಸೇನೆ ಹಾಗೂ ಕನ್ನಡ ಪರ ಸಂಘಟನೆಗಳಿಂದ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ರೈತ ಸಂಘದ ರಾಜ್ಯ ಅದ್ಯಕ್ಷ ಕೊಡಿಹಳ್ಳಿ ಚಂದ್ರಶೇಖರ ಮಾತನಾಡಿ ಮಹಾದಾಯಿ ಯೋಜನೆ ಶೀಘ್ರ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಹೋಟೆಲ್ ಉದ್ಯಮಿ ಜೆ.ರತ್ನಾಕರಶೆಟ್ಟಿ ಮಾತನಾಡಿ, ‘ಯರಗಟ್ಟಿ ತಾಲ್ಲೂಕು ರಚನೆ ಮಾಡಿದರೂ ಕಚೇರಿಗಳು ಪ್ರಾರಂಭವಾಗಿಲ್ಲ. ಶೀಘ್ರ ಪ್ರಾರಂಭಿಸಬೇಕು. ಮತ್ತು ಯರಗಟ್ಟಿ ಸಮಗ್ರ ಅಭಿವೃದ್ದಿಗೆ ಎಲ್ಲರು ಕೈಜೋಡಿಸಬೇಕು’ ಎಂದು ಹೇಳಿದರು.
ಸೋಮು ರೈನಾಪೂರ, ವೆಂಕಣ್ಣ ಹುರಕ್ನವರ ಯೆಕ್ಕರಪ್ಪ ತಳವಾರ, ರಂಗಪ್ಪ ಗಂಗರಡ್ಡಿ ಸತ್ಯಪ್ಪ ಬಾಜನ್ನವರ, ರಾಮಕೃಷ್ಣ ಎಳಮ್ಮಿ, ಮಾರುತಿಕುರಿ, ಭೀಮಶಿ ಗಡಾದಿ, ಶೇಖರ ಕೀಲಾರಿ ಇದ್ದರು,
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.