ಬೆಳಗಾವಿ ಹಾಗೂ ಗಂಗಾವತಿಯ ಆ ಇಬ್ಬರೂ ಮಹಿಳೆಯರು ಮನಬಂದಂತೆ ಮಾತಾಡಿದ್ದಾರೆ. ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ರಾಜ್ಯದ ಪೀಠಾಧಿಪತಿಗಳನ್ನೂ ನಿಂದಿಸಿದ್ದಾರೆ. ‘ಎಲ್ಲರೂ ಲಫಂಗರು’ ಎಂಬ ಪದ ಬಳಸಿದ್ದಾರೆ. ಆಡಿಯೊದಲ್ಲಿ ನೇಗಿನಹಾಳ ಶ್ರೀಗಳ ಹೆಸರನ್ನೂ ಬಳಸಿದ್ದಾರೆ. ಅದೇ ಕಾರಣಕ್ಕೆ ಶ್ರೀಗಳು ಮನನೊಂದು ನೇಣಿಗೆ ಶರಣಾಗಿದ್ದಾರೆ. ಈ ಸಾವಿಗೆ ಆಡಿಯೊ ಹರಿಬಿಟ್ಟ ಮಹಿಳೆಯರೇ ಕಾರಣ. ಅವರನ್ನು ಬಂಧಿಸಿದ ನಂತರವೇ ಸ್ವಾಮೀಜಿ ಪಾರ್ಥಿವ ಶರೀರ ಮುಟ್ಟಲು ಬಿಡುತ್ತೇವೆ’ ಎಂದೂ ಮಹಿಳೆಯರು ಪಟ್ಟು ಹಿಡಿದಿದ್ದಾರೆ.