‘ವಸತಿ ಶಾಲೆಗಳಿಗೆ ಬಡ ಮತ್ತು ಮಧ್ಯಮ ವರ್ಗಗಳ ಮಕ್ಕಳೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುತ್ತಾರೆ. ಹೀಗಾಗಿ, ಅವುಗಳನ್ನು ಬಂದ್ ಮಾಡಬೇಡಿ. ಮಕ್ಕಳು ಮನೆಗೆ ಹೋದರೆ ಮತ್ತೆ ಬರುವುದು ಅಥವಾ ಕರೆತರುವುದು ಕಷ್ಟ. ಅಲ್ಲದೆ, ಕುಟುಂಬದವರಿಗೂ ಅನಾನುಕೂಲ ಆಗುತ್ತದೆ. ಹೀಗಾಗಿ, ಅವರನ್ನು ವಸತಿ ಶಾಲೆಗಳಲ್ಲೇ ಇರಿಸಿಕೊಂಡು ಊಟೋಪಚಾರದ ವ್ಯವಸ್ಥೆ ಮಾಡಬೇಕು. ಕೋವಿಡ್ ಮಾರ್ಗಸೂಚಿ ಪಾಲಿಸಬೇಕು ಎಂದು ಸಚಿವರು ಸೂಚಿಸಿದ್ದರು. ಅದರಂತೆ, ಕ್ರಮ ವಹಿಸಲಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.