<p><strong>ಬೆಳಗಾವಿ</strong>: ಗಡಿನಾಡಿನ ರಾಜ್ಯೋತ್ಸವಕ್ಕಾಗಿ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಬಿಡುಗಡೆ ಮಾಡಿದ ₹50 ಲಕ್ಷ ಅನುದಾನದಲ್ಲಿ ಅದ್ದೂರಿ ಸಂಗೀತ ವೈಭವ ನಡೆಯಿತು.</p><p>ಮಂಗಳವಾರ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಜನರ ಮಧ್ಯೆ ಖ್ಯಾತ ಹಿನ್ನೆಲೆ ಗಾಯಕರಾದ ವಿಜಯಪ್ರಕಾಶ್, ಅನುರಾಧ ಭಟ್ ಅವರು, ಕನ್ನಡಿಗರ ನೆಚ್ಚಿನ ಗೀತೆಗಳನ್ನು ಹಾಡಿ ರಂಜಿಸಿದರು.</p><p>ವರ್ಣರಂಜಿತ ವೇದಿಕೆಯಿಂದ ಒಂದಾದ ಮೇಲೊಂದರಂತೆ ಚಿತ್ರಗೀತೆಗಳು, ಸುಮಧುರ ಯುಗಳ ಗೀತೆಗಳು, ಜನಪದ ಗೀತೆಗಳು ಹಾಗೂ ಕನ್ನಡ ನಾಡು–ನುಡಿಯ ವೈಭವ ಸಾರುವ ಗೀತೆಗಳು ಮೂಡಿಬಂದವು. ಕಲಾವಿದರ ತಂಡ ಖುಷಿಯಿಂದ ನೃತ್ಯ ಮಾಡಿ, ಯುವಪಡೆ ರಂಜಿಸಿತು.</p><p>ಇತ್ತ ವೇದಿಕೆ ಮುಂಭಾಗದಲ್ಲಿ ಯುವಜನರು ಕುಣಿದು ಕುಪ್ಪಳಿಸಿದರು. ವಿಜಯಪ್ರಕಾಶ್ ತಂಡದವರು ಇಳಿಸಂಜೆಯಲ್ಲಿ ಸಂಗೀತದ ರಸದೌತಣ ಉಣಬಡಿಸಿದರು.</p><p>ದಶಕಗಳ ಹೋರಾಟದ ಬಳಿಕ ಕನ್ನಡ ಸಂಘಟನೆಗಳ ಕೋರಿಕೆ ಮೇರೆಗೆ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ₹50 ಲಕ್ಷ ಅನುದಾನವನ್ನು ಪ್ರತ್ಯೇಕವಾಗಿ ಬೆಳಗಾವಿಯ ರಾಜ್ಯೋತ್ಸವಕ್ಕೆ ಬಿಡುಗಡೆ ಮಾಡಿದ್ದರು. ಈ ಅನುದಾನ ರಾಜ್ಯೋತ್ಸವ ಹೊಸ್ತಿಲಲ್ಲೇ ಬಿಡುಗಡೆಯಾದ ಕಾರಣ, ಆಗ ಬಳಕೆಯಾಗಿರಲಿಲ್ಲ. ಈಗ ಅದೇ ಅನುದಾನದಲ್ಲಿ ಸಾಂಸ್ಕೃತಿಕ ರಸದೌತಣದ ಉಣಬಡಿಸಿ, ಯುವ ಮನಸ್ಸುಗಳನ್ನು ರಂಜಿಸಲಾಯಿತು.</p><p>ಮೂರುವರೆ ತಿಂಗಳ ಬಳಿಕವೂ ರಾಜ್ಯೋತ್ಸವದ ವಾತಾವರಣ ಕಳೆಗಟ್ಟಿತು. ತುಂತುರು ಮಳೆ ಇದ್ದರೂ ಅಪಾರ ಸಂಖ್ಯೆಯ ಜನ ಸೇರಿ ಸಂಭ್ರಮಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಗಡಿನಾಡಿನ ರಾಜ್ಯೋತ್ಸವಕ್ಕಾಗಿ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಬಿಡುಗಡೆ ಮಾಡಿದ ₹50 ಲಕ್ಷ ಅನುದಾನದಲ್ಲಿ ಅದ್ದೂರಿ ಸಂಗೀತ ವೈಭವ ನಡೆಯಿತು.</p><p>ಮಂಗಳವಾರ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಜನರ ಮಧ್ಯೆ ಖ್ಯಾತ ಹಿನ್ನೆಲೆ ಗಾಯಕರಾದ ವಿಜಯಪ್ರಕಾಶ್, ಅನುರಾಧ ಭಟ್ ಅವರು, ಕನ್ನಡಿಗರ ನೆಚ್ಚಿನ ಗೀತೆಗಳನ್ನು ಹಾಡಿ ರಂಜಿಸಿದರು.</p><p>ವರ್ಣರಂಜಿತ ವೇದಿಕೆಯಿಂದ ಒಂದಾದ ಮೇಲೊಂದರಂತೆ ಚಿತ್ರಗೀತೆಗಳು, ಸುಮಧುರ ಯುಗಳ ಗೀತೆಗಳು, ಜನಪದ ಗೀತೆಗಳು ಹಾಗೂ ಕನ್ನಡ ನಾಡು–ನುಡಿಯ ವೈಭವ ಸಾರುವ ಗೀತೆಗಳು ಮೂಡಿಬಂದವು. ಕಲಾವಿದರ ತಂಡ ಖುಷಿಯಿಂದ ನೃತ್ಯ ಮಾಡಿ, ಯುವಪಡೆ ರಂಜಿಸಿತು.</p><p>ಇತ್ತ ವೇದಿಕೆ ಮುಂಭಾಗದಲ್ಲಿ ಯುವಜನರು ಕುಣಿದು ಕುಪ್ಪಳಿಸಿದರು. ವಿಜಯಪ್ರಕಾಶ್ ತಂಡದವರು ಇಳಿಸಂಜೆಯಲ್ಲಿ ಸಂಗೀತದ ರಸದೌತಣ ಉಣಬಡಿಸಿದರು.</p><p>ದಶಕಗಳ ಹೋರಾಟದ ಬಳಿಕ ಕನ್ನಡ ಸಂಘಟನೆಗಳ ಕೋರಿಕೆ ಮೇರೆಗೆ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ₹50 ಲಕ್ಷ ಅನುದಾನವನ್ನು ಪ್ರತ್ಯೇಕವಾಗಿ ಬೆಳಗಾವಿಯ ರಾಜ್ಯೋತ್ಸವಕ್ಕೆ ಬಿಡುಗಡೆ ಮಾಡಿದ್ದರು. ಈ ಅನುದಾನ ರಾಜ್ಯೋತ್ಸವ ಹೊಸ್ತಿಲಲ್ಲೇ ಬಿಡುಗಡೆಯಾದ ಕಾರಣ, ಆಗ ಬಳಕೆಯಾಗಿರಲಿಲ್ಲ. ಈಗ ಅದೇ ಅನುದಾನದಲ್ಲಿ ಸಾಂಸ್ಕೃತಿಕ ರಸದೌತಣದ ಉಣಬಡಿಸಿ, ಯುವ ಮನಸ್ಸುಗಳನ್ನು ರಂಜಿಸಲಾಯಿತು.</p><p>ಮೂರುವರೆ ತಿಂಗಳ ಬಳಿಕವೂ ರಾಜ್ಯೋತ್ಸವದ ವಾತಾವರಣ ಕಳೆಗಟ್ಟಿತು. ತುಂತುರು ಮಳೆ ಇದ್ದರೂ ಅಪಾರ ಸಂಖ್ಯೆಯ ಜನ ಸೇರಿ ಸಂಭ್ರಮಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>