ಬೆಳಗಾವಿ: ಇಲ್ಲಿನ ಉತ್ತರ ವಿಧಾನಸಭಾ ಕ್ಷೇತ್ರದ ಶಿವಾಜಿ ರಸ್ತೆ, ಮುಜಾವರ ಗಲ್ಲಿ, ಪಾಟೀಲ ಮಾಳ, ಭಾಂಧುರ್ ಗಲ್ಲಿ, ತಹಶೀಲ್ದಾರ್ ಗಲ್ಲಿ, ಫುಲಬಾಗ್ ಗಲ್ಲಿ, ಪಾಟೀಲ ಗಲ್ಲಿ, ಮಠ ಗಲ್ಲಿ, ಭಾತಖಾಂಡೆ ಗಲ್ಲಿ ಮತ್ತಿತರ ಬಡಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಗುರುವಾರ ಮತಯಾಚಿಸಿದರು.
‘ಸ್ಥಳೀಯ ಅಭ್ಯರ್ಥಿ ಬಿಟ್ಟು ಬೇರೆಯವರಿಗೆ ಮತ ನೀಡಲು ನಮ್ಮ ಮನಸ್ಸು ಒಪ್ಪುವುದಿಲ್ಲ. ಪ್ರತಿಯೊಬ್ಬರಿಗೂ ಸ್ವಾಭಿಮಾನ ಮುಖ್ಯ. ನಾವು ನಮ್ಮೂರಿನ ಉಮೇದುವಾರನನ್ನೇ ಬೆಂಬಲಿಸುತ್ತೇವೆ ಎಂದು ಜನರು ಹೇಳುತ್ತಿದ್ದಾರೆ. ಇದರಿಂದಾಗಿ ನನ್ನ ಉತ್ಸಾಹ, ವಿಶ್ವಾಸ ಇಮ್ಮಡಿಯಾಗಿದೆ’ ಎಂದು ಅವರು ತಿಳಿಸಿದರು. ಹಲವು ಮುಖಂಡರು ಪಾಲ್ಗೊಂಡಿದ್ದರು.