<p><strong>ಬೆಳಗಾವಿ</strong>: ಈ ಬಡಾವಣೆಗಳಿಗೆ ನಿತ್ಯ ಸಂಚರಿಸುವುದು ಸಾರಿಗೆ ಸಂಸ್ಥೆಯ ಒಂದೇ ಬಸ್. ಒಂದೆಡೆ ಸಮರ್ಪಕ ಬಸ್ ಸೌಕರ್ಯವಿಲ್ಲ. ಮತ್ತೊಂದೆಡೆ ಬಸ್ಗಾಗಿ ಕಾಯುತ್ತ ನಿಲ್ಲಲು ಒಂದೂ ತಂಗುದಾಣ ಇಲ್ಲ.</p>.<p>ನಗರದ ಹೊರವಲಯದ ಬಸವನ ಕುಡಚಿಯ ದೇವರಾಜ ಅರಸು ಕಾಲೊನಿ ಮತ್ತು ಕರ್ನಾಟಕ ಹೌಸಿಂಗ್ ಬೋರ್ಡ್(ಕೆಎಚ್ಬಿ) ಕಾಲೊನಿ ನಿವಾಸಿಗಳಿಗೆ ಎದುರಾಗಿರುವ ಸಂಕಷ್ಟವಿದು.</p>.<p>ಬೆಳಗಾವಿಯಿಂದ ಐದಾರು ಕಿ.ಮೀ ದೂರದಲ್ಲಿರುವ ಈ ಬಡಾವಣೆಗಳಲ್ಲಿ ಸಾವಿರಾರು ಜನರು ವಾಸಿಸುತ್ತಿದ್ದು, ಮಧ್ಯಮ ವರ್ಗದ ಜನರೇ ಹೆಚ್ಚಿದ್ದಾರೆ. ಕಲಿಕೆ ಮತ್ತು ದುಡಿಮೆಗಾಗಿ ಹಲವರು ಬೆಳಗಾವಿ ನಗರವನ್ನೇ ಅವಲಂಬಿಸಿದ್ದಾರೆ. </p>.<p>‘ನಗರ ಬಸ್ ನಿಲ್ದಾಣ(ಸಿಬಿಟಿ)ದಿಂದ ದೇವರಾಜ ಅರಸ್ ಕಾಲೊನಿ, ಕೆಎಚ್ಬಿ ಕಾಲೊನಿಗೆ ಒಂದೇ ಬಸ್ ಸಂಚರಿಸುತ್ತದೆ. ಬೆಳಗಾವಿ–ಬಾಗಲಕೋಟೆ ಹೆದ್ದಾರಿಯಿಂದ 2 ಕಿ.ಮೀ. ಒಳಗಿರುವ ನಮ್ಮ ಬಡಾವಣೆಗಳಿಗೆ ಇದೊಂದೇ ಬಸ್ ಆಸರೆ. ಸಂಚಾರ ಸಮಸ್ಯೆ ಕಾರಣದಿಂದ ಬಸ್ ಸಕಾಲಕ್ಕೆ ಬಾರದ್ದರಿಂದ ಸಮಸ್ಯೆಯಾಗುತ್ತಿದೆ’ ಎಂದು ಸ್ಥಳೀಯ ಸುಭಾಷಚಂದ್ರ ಮುಷ್ಟಗಿ ಹೇಳಿದರು.</p>.<p>‘ಸಿಬಿಟಿಯಿಂದ ನಮ್ಮ ಬಡಾವಣೆಗಳಿಗೆ ರಾತ್ರಿ 8.45ಕ್ಕೆ ಕೊನೇ ಬಸ್ ಹೊರಡುತ್ತದೆ. ಆ ನಂತರ ಬೇರೆ ಬಸ್ನಲ್ಲಿ ಬೆಳಗಾವಿ–ಬಾಗಲಕೋಟೆ ಹೆದ್ದಾರಿಯವರೆಗೆ ಬಂದು, ಅಲ್ಲಿಂದ ನಡೆದು ಬರುವುದು ಅನಿವಾರ್ಯವಾಗಿದೆ. ಹಾಗಾಗಿ, ಸಿಬಿಟಿಯಿಂದ ರಾತ್ರಿ 9.30ಕ್ಕೆ ಕೊನೇ ಬಸ್ ಸಂಚರಿಸಲು ವ್ಯವಸ್ಥೆ ಮಾಡಬೇಕು’ ಎಂದು ಮಹೇಶ ಹಿರೇಮಠ ಒತ್ತಾಯಿಸಿದರು.</p>.<p>‘ನಮ್ಮ ಬಡಾವಣೆಗಳಿಗೆ ಎರಡು ಬಸ್ ಸಂಚರಿಸಬೇಕು. ಕನಿಷ್ಠ ಅರ್ಧ ತಾಸಿಗೊಂದು ಬಸ್ ಕಾರ್ಯಾಚರಣೆಗೆ ಕ್ರಮ ವಹಿಸುವಂತೆ ಹಲವು ಬಾರಿ ಸಾರಿಗೆ ಸಂಸ್ಥೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ, ಸ್ಪಂದನೆ ಸಿಕ್ಕಿಲ್ಲ’ ಎಂದು ಶೇಖರಯ್ಯ ಕೊರಗಲ್ಲಮಠ ಬೇಸರ ವ್ಯಕ್ತಪಡಿಸಿದರು.</p>.<p>‘ನಮ್ಮ ಬಡಾವಣೆಗಳು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿವೆ. ಹಾಗಾಗಿ, ಪಾಲಿಕೆಯೊಂದಿಗೆ ಸ್ಮಾರ್ಟ್ಸಿಟಿ ಯೋಜನೆಯಡಿ ಸಹ ಇಲ್ಲಿ ಬಸ್ ತಂಗುದಾಣಗಳನ್ನು ನಿರ್ಮಿಸಬಹುದು’ ಎಂದು ದುಂಡಯ್ಯ ರೋಗಿಮಠ ತಿಳಿಸಿದರು.</p>.<p>ಸಮರ್ಪಕವಾಗಿ ಬಸ್ ಸೌಕರ್ಯ ತಂಗುದಾಣಗಳನ್ನೂ ನಿರ್ಮಿಸಸಿದಿದ್ದರೆ ಬೆಳಗಾವಿ–ಬಾಗಲಕೋಟೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಬೇಕಾಗುತ್ತದೆ ಮಹಾಂತೇಶ ರಣಗಟ್ಟಿಮಠ ಸ್ಥಳೀಯ ಕೆಎಚ್ಬಿ ಕಾಲೊನಿ</p>.<p>ದೇವರಾಜ ಅರಸ್ ಕಾಲೊನಿ ಕೆಎಚ್ಬಿ ಕಾಲೊನಿಯಲ್ಲಿ ಬಸ್ ತಂಗುದಾಣಗಳನ್ನು ನಿರ್ಮಿಸುವ ಕುರಿತಾಗಿ ಪರಿಶೀಲಿಸಿ ಕ್ರಮ ವಹಿಸುತ್ತೇವೆ ಬಿ.ಶುಭ ಆಯುಕ್ತೆ ಮಹಾನಗರ ಪಾಲಿಕೆ</p> <p><strong>‘ಮಳೆ ಬಿಸಿಲಲ್ಲೇ ಕಾಯಬೇಕು’</strong></p><p>‘ದೇವರಾಜ ಅರಸ್ ಕಾಲೊನಿ ಮತ್ತು ಕೆಎಚ್ಬಿ ಕಾಲೊನಿಯಲ್ಲಿ ಬಸ್ಗಾಗಿ ಆರು ನಿಲುಗಡೆ ಸ್ಥಳಗಳಿವೆ. ಆದರೆ ಒಂದು ಕಡೆಯೂ ತಂಗುದಾಣವಿಲ್ಲ. ಹಾಗಾಗಿ ಮಳೆ ಬಿಸಿಲಲ್ಲೇ ಬಸ್ಗಾಗಿ ಕಾಯುತ್ತ ನಿಲ್ಲುವಂತಾಗಿದೆ’ ಎಂದು ಸಿದ್ಧಾರ್ಥ ಕೆರೂರಕರ ಅಸಹಾಯಕತೆ ವ್ಯಕ್ತಪಡಿಸಿದರು. ಪರ್ಯಾಯ ರಸ್ತೆ: ‘ಸಿಬಿಟಿಯಿಂದ ಬರುವ ಬಸ್ ಬಸವನ ಕುಡಚಿಯ ಕಲ್ಮೇಶ್ವರ ಹಾಗೂ ಬಸವೇಶ್ವರ ದೇವಸ್ಥಾನ ಮಾರ್ಗವಾಗಿ ನಮ್ಮ ಬಡಾವಣೆಗಳಿಗೆ ಬರುತ್ತದೆ. ಪ್ರತಿವರ್ಷ ಈ ದೇವಸ್ಥಾನದಲ್ಲಿ ಒಂದು ವಾರ ಜಾತ್ರೆ ನಡೆದಾಗ ನಮ್ಮ ಬಡಾವಣೆಗಳಿಗೆ ಬಸ್ಸೇ ಬರುವುದಿಲ್ಲ. ಹಾಗಾಗಿ ಬೆಳಗಾವಿ ನಗರಕ್ಕೆ ತೆರಳಲು ಪರ್ಯಾಯ ರಸ್ತೆ ನಿರ್ಮಿಸಬೇಕೆಂಬ ಬೇಡಿಕೆಯೂ ಇದೆ’ ಎಂದು ಆನಂದ ಶಿವಯೋಗಿಮಠ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಈ ಬಡಾವಣೆಗಳಿಗೆ ನಿತ್ಯ ಸಂಚರಿಸುವುದು ಸಾರಿಗೆ ಸಂಸ್ಥೆಯ ಒಂದೇ ಬಸ್. ಒಂದೆಡೆ ಸಮರ್ಪಕ ಬಸ್ ಸೌಕರ್ಯವಿಲ್ಲ. ಮತ್ತೊಂದೆಡೆ ಬಸ್ಗಾಗಿ ಕಾಯುತ್ತ ನಿಲ್ಲಲು ಒಂದೂ ತಂಗುದಾಣ ಇಲ್ಲ.</p>.<p>ನಗರದ ಹೊರವಲಯದ ಬಸವನ ಕುಡಚಿಯ ದೇವರಾಜ ಅರಸು ಕಾಲೊನಿ ಮತ್ತು ಕರ್ನಾಟಕ ಹೌಸಿಂಗ್ ಬೋರ್ಡ್(ಕೆಎಚ್ಬಿ) ಕಾಲೊನಿ ನಿವಾಸಿಗಳಿಗೆ ಎದುರಾಗಿರುವ ಸಂಕಷ್ಟವಿದು.</p>.<p>ಬೆಳಗಾವಿಯಿಂದ ಐದಾರು ಕಿ.ಮೀ ದೂರದಲ್ಲಿರುವ ಈ ಬಡಾವಣೆಗಳಲ್ಲಿ ಸಾವಿರಾರು ಜನರು ವಾಸಿಸುತ್ತಿದ್ದು, ಮಧ್ಯಮ ವರ್ಗದ ಜನರೇ ಹೆಚ್ಚಿದ್ದಾರೆ. ಕಲಿಕೆ ಮತ್ತು ದುಡಿಮೆಗಾಗಿ ಹಲವರು ಬೆಳಗಾವಿ ನಗರವನ್ನೇ ಅವಲಂಬಿಸಿದ್ದಾರೆ. </p>.<p>‘ನಗರ ಬಸ್ ನಿಲ್ದಾಣ(ಸಿಬಿಟಿ)ದಿಂದ ದೇವರಾಜ ಅರಸ್ ಕಾಲೊನಿ, ಕೆಎಚ್ಬಿ ಕಾಲೊನಿಗೆ ಒಂದೇ ಬಸ್ ಸಂಚರಿಸುತ್ತದೆ. ಬೆಳಗಾವಿ–ಬಾಗಲಕೋಟೆ ಹೆದ್ದಾರಿಯಿಂದ 2 ಕಿ.ಮೀ. ಒಳಗಿರುವ ನಮ್ಮ ಬಡಾವಣೆಗಳಿಗೆ ಇದೊಂದೇ ಬಸ್ ಆಸರೆ. ಸಂಚಾರ ಸಮಸ್ಯೆ ಕಾರಣದಿಂದ ಬಸ್ ಸಕಾಲಕ್ಕೆ ಬಾರದ್ದರಿಂದ ಸಮಸ್ಯೆಯಾಗುತ್ತಿದೆ’ ಎಂದು ಸ್ಥಳೀಯ ಸುಭಾಷಚಂದ್ರ ಮುಷ್ಟಗಿ ಹೇಳಿದರು.</p>.<p>‘ಸಿಬಿಟಿಯಿಂದ ನಮ್ಮ ಬಡಾವಣೆಗಳಿಗೆ ರಾತ್ರಿ 8.45ಕ್ಕೆ ಕೊನೇ ಬಸ್ ಹೊರಡುತ್ತದೆ. ಆ ನಂತರ ಬೇರೆ ಬಸ್ನಲ್ಲಿ ಬೆಳಗಾವಿ–ಬಾಗಲಕೋಟೆ ಹೆದ್ದಾರಿಯವರೆಗೆ ಬಂದು, ಅಲ್ಲಿಂದ ನಡೆದು ಬರುವುದು ಅನಿವಾರ್ಯವಾಗಿದೆ. ಹಾಗಾಗಿ, ಸಿಬಿಟಿಯಿಂದ ರಾತ್ರಿ 9.30ಕ್ಕೆ ಕೊನೇ ಬಸ್ ಸಂಚರಿಸಲು ವ್ಯವಸ್ಥೆ ಮಾಡಬೇಕು’ ಎಂದು ಮಹೇಶ ಹಿರೇಮಠ ಒತ್ತಾಯಿಸಿದರು.</p>.<p>‘ನಮ್ಮ ಬಡಾವಣೆಗಳಿಗೆ ಎರಡು ಬಸ್ ಸಂಚರಿಸಬೇಕು. ಕನಿಷ್ಠ ಅರ್ಧ ತಾಸಿಗೊಂದು ಬಸ್ ಕಾರ್ಯಾಚರಣೆಗೆ ಕ್ರಮ ವಹಿಸುವಂತೆ ಹಲವು ಬಾರಿ ಸಾರಿಗೆ ಸಂಸ್ಥೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ, ಸ್ಪಂದನೆ ಸಿಕ್ಕಿಲ್ಲ’ ಎಂದು ಶೇಖರಯ್ಯ ಕೊರಗಲ್ಲಮಠ ಬೇಸರ ವ್ಯಕ್ತಪಡಿಸಿದರು.</p>.<p>‘ನಮ್ಮ ಬಡಾವಣೆಗಳು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿವೆ. ಹಾಗಾಗಿ, ಪಾಲಿಕೆಯೊಂದಿಗೆ ಸ್ಮಾರ್ಟ್ಸಿಟಿ ಯೋಜನೆಯಡಿ ಸಹ ಇಲ್ಲಿ ಬಸ್ ತಂಗುದಾಣಗಳನ್ನು ನಿರ್ಮಿಸಬಹುದು’ ಎಂದು ದುಂಡಯ್ಯ ರೋಗಿಮಠ ತಿಳಿಸಿದರು.</p>.<p>ಸಮರ್ಪಕವಾಗಿ ಬಸ್ ಸೌಕರ್ಯ ತಂಗುದಾಣಗಳನ್ನೂ ನಿರ್ಮಿಸಸಿದಿದ್ದರೆ ಬೆಳಗಾವಿ–ಬಾಗಲಕೋಟೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಬೇಕಾಗುತ್ತದೆ ಮಹಾಂತೇಶ ರಣಗಟ್ಟಿಮಠ ಸ್ಥಳೀಯ ಕೆಎಚ್ಬಿ ಕಾಲೊನಿ</p>.<p>ದೇವರಾಜ ಅರಸ್ ಕಾಲೊನಿ ಕೆಎಚ್ಬಿ ಕಾಲೊನಿಯಲ್ಲಿ ಬಸ್ ತಂಗುದಾಣಗಳನ್ನು ನಿರ್ಮಿಸುವ ಕುರಿತಾಗಿ ಪರಿಶೀಲಿಸಿ ಕ್ರಮ ವಹಿಸುತ್ತೇವೆ ಬಿ.ಶುಭ ಆಯುಕ್ತೆ ಮಹಾನಗರ ಪಾಲಿಕೆ</p> <p><strong>‘ಮಳೆ ಬಿಸಿಲಲ್ಲೇ ಕಾಯಬೇಕು’</strong></p><p>‘ದೇವರಾಜ ಅರಸ್ ಕಾಲೊನಿ ಮತ್ತು ಕೆಎಚ್ಬಿ ಕಾಲೊನಿಯಲ್ಲಿ ಬಸ್ಗಾಗಿ ಆರು ನಿಲುಗಡೆ ಸ್ಥಳಗಳಿವೆ. ಆದರೆ ಒಂದು ಕಡೆಯೂ ತಂಗುದಾಣವಿಲ್ಲ. ಹಾಗಾಗಿ ಮಳೆ ಬಿಸಿಲಲ್ಲೇ ಬಸ್ಗಾಗಿ ಕಾಯುತ್ತ ನಿಲ್ಲುವಂತಾಗಿದೆ’ ಎಂದು ಸಿದ್ಧಾರ್ಥ ಕೆರೂರಕರ ಅಸಹಾಯಕತೆ ವ್ಯಕ್ತಪಡಿಸಿದರು. ಪರ್ಯಾಯ ರಸ್ತೆ: ‘ಸಿಬಿಟಿಯಿಂದ ಬರುವ ಬಸ್ ಬಸವನ ಕುಡಚಿಯ ಕಲ್ಮೇಶ್ವರ ಹಾಗೂ ಬಸವೇಶ್ವರ ದೇವಸ್ಥಾನ ಮಾರ್ಗವಾಗಿ ನಮ್ಮ ಬಡಾವಣೆಗಳಿಗೆ ಬರುತ್ತದೆ. ಪ್ರತಿವರ್ಷ ಈ ದೇವಸ್ಥಾನದಲ್ಲಿ ಒಂದು ವಾರ ಜಾತ್ರೆ ನಡೆದಾಗ ನಮ್ಮ ಬಡಾವಣೆಗಳಿಗೆ ಬಸ್ಸೇ ಬರುವುದಿಲ್ಲ. ಹಾಗಾಗಿ ಬೆಳಗಾವಿ ನಗರಕ್ಕೆ ತೆರಳಲು ಪರ್ಯಾಯ ರಸ್ತೆ ನಿರ್ಮಿಸಬೇಕೆಂಬ ಬೇಡಿಕೆಯೂ ಇದೆ’ ಎಂದು ಆನಂದ ಶಿವಯೋಗಿಮಠ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>