‘ಗ್ರಾಮದಲ್ಲಿ ಅನಧಿಕೃತವಾಗಿ ಕೆಲವರು ಶಿವಾಜಿ ಪ್ರತಿಮೆ ಪ್ರತಿಷ್ಠಾಪಿಸಿದ್ದರು. ಅದನ್ನು ಹಿರಿಯರು ಹಾಗೂ ಸಮಾಜದ ಮುಖಂಡರು ಕೂಡಿ ತೆರವುಗೊಳಿಸಿದ್ದಾರೆ. ಆದರೆ, ಈ ಬಗ್ಗೆ ಆರೋಪಿಯು ಭಾಷೆಗಳು, ಜಾತಿಗಳ ನಡುವೆ ದ್ವೇಷ, ವೈಮನಸ್ಸು ಉಂಟು ಮಾಡುವ ಅಥವಾ ಬೆಳೆಸುವಂತಹ ವದಂತಿ ಹಬ್ಬಿಸುವ ಅಥವಾ ಅಪಾಯ ಭೀತಿ ಹುಟ್ಟಿಸುವ ಪೋಸ್ಟ್ ಮಾಡಿದ್ದರು. ಶಾಂತಿ ಹಾಗೂ ಸೌಹಾರ್ದಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.