ರಣರಾಗಿಣಿ ಮಹಿಳಾ ಸಂಘದಿಂದ ನಿಪ್ಪಾಣಿಯ ಮುನ್ಸಿಪಲ್ ಪ್ರೌಢಶಾಲೆ ಮೈದಾನದಲ್ಲಿ ಬುಧವಾರ ರಾತ್ರಿ ಅರಿಸಿನ ಕುಂಕುಮ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಅವರೂ ಪಾಲ್ಗೊಂಡಿದ್ದರು. ವೇದಿಕೆ ಮೇಲೆ ಹಾಡು ಮೂಡಿಬಂದಾಗ ಬಿಜೆಪಿ ಚಿಹ್ನೆ ಹಾಗೂ ಧ್ವಜಗಳನ್ನು ಹಾರಿಸಲಾಯಿತು. ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಭಾವಚಿತ್ರನ್ನೂ ಪ್ರದರ್ಶಿಸಲಾಯಿತು. ರಾತ್ರಿ 10ರ ಸುಮಾರಿಗೆ ಅಪಾರ ಸಂಖ್ಯೆಯ ಮಹಿಳೆಯರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.