<p><strong>ಬೆಳಗಾವಿ</strong>: ‘ಹುಕ್ಕೇರಿ ತಾಲ್ಲೂಕಿನ ಇಂಗಳಿಯಲ್ಲಿ ಶ್ರೀರಾಮ ಸೇನೆಯ ಐವರು ಕಾರ್ಯಕರ್ತನ್ನು ಮರಕ್ಕೆ ಕಟ್ಟಿ ಥಳಿಸಿದ ಎಲ್ಲ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು. ಇಲ್ಲದಿದ್ದರೆ ಜುಲೈ 3ರಂದು ‘ಚಲೋ ಇಂಗಳಿ’ ಹೋರಾಟ ಕೈಗೊಳ್ಳುತ್ತೇವೆ’ ಎಂದು ಶ್ರೀರಾಮ ಸೇನೆ ರಾಜ್ಯ ಘಟಕದ ಅಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.</p>.<p>ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಲೋ ಇಂಗಳಿ ಹೋರಾಟ ಎಲ್ಲಿಂದ ಆರಂಭಿಸಬೇಕು ಎಂದು ಚರ್ಚಿಸಿ ತೀರ್ಮಾನಿಸುತ್ತೇವೆ. ವಿವಿಧ ಮಠಾಧೀಶರು, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮತ್ತಿತರ ನಾಯಕರು ಪಾಲ್ಗೊಳ್ಳುವರು’ ಎಂದರು.</p>.<p>‘ಇಂಗಳಿಯಲ್ಲಿನ ಅಮಾನವೀಯ ಘಟನೆ ಬಗ್ಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರು ಮಾತನಾಡುವುದನ್ನು ಗಮನಿಸಿದರೆ, ಅವರೊಬ್ಬ ಅಧಿಕಾರಿಯೋ, ರಾಜಕೀಯ ವ್ಯಕ್ತಿಯೋ ಅಥವಾ ಹಲ್ಲೆ ಮಾಡಿದವರ ಪರವಾಗಿ ಇರುವವರೋ ಎಂಬುದು ಗೊತ್ತಾಗುತ್ತಿಲ್ಲ’ ಎಂದು ದೂರಿದರು.</p>.<p>‘ನಮ್ಮ ಸಂಘಟನೆಯ ಕಾರ್ಯಕರ್ತನಿಗೆ ರೌಡಿಶೀಟರ್ ಎನ್ನುವ ಗುಳೇದ ಅವರು, ಬೇರೆ ಬೇರೆ ಪ್ರಕರಣಗಳಲ್ಲಿ ಯಾವ ರೀತಿಯಲ್ಲಿ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡಿದ್ದಾರೆ ಎಂಬುದು ಗೊತ್ತಿದೆ’ ಎಂದು ಹೇಳಿದರು.</p>.<p>ಮುಖಂಡರಾದ ವಿಠ್ಠಲ ಗಡ್ಡಿ, ವಿನಯ ಅಂಗ್ರೊಳ್ಳಿ, ರವಿಕುಮಾರ ಕೋಕಿತಕರ ಇದ್ದರು.</p>.<h2>‘ಹೊರಗಿನವರು ನಮ್ಮೂರಿಗೆ ಬರುವ ಅಗತ್ಯವಿಲ್ಲ’</h2>.<p>ಇಂಗಳಿಯ ಲಕ್ಷ್ಮೀದೇವರ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಎಲ್ಲ ಸಮುದಾಯಗಳ ಹಿರಿಯರು ಸಭೆ ನಡೆಸಿದರು.</p>.<p>‘ನಮ್ಮೂರಿನಲ್ಲಿ ಹಿಂದೂ– ಮುಸ್ಲಿಮರು ಒಗ್ಗಟ್ಟಿನಿಂದ ಇದ್ದೇವೆ. ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಗ್ರಾಮದಲ್ಲಿ ಹಿರಿಯರಿದ್ದಾರೆ. ಹಾಗಾಗಿ ಹೊರಗಿನವರು ನಮ್ಮೂರಿಗೆ ಬರುವ ಅವಶ್ಯಕತೆ ಇಲ್ಲ’ ಎಂದು ಹೇಳಿದರು.</p>.<p>‘ನಮ್ಮ ಸಂಘಟನೆ ಕಾರ್ಯಕರ್ತರನ್ನು ಹೊಡೆಯುವಾಗ ಗ್ರಾಮದ ಮುಖಂಡರು ಎಲ್ಲಿದ್ದರು? ಹೊರಗಿನವರು ನಮ್ಮೂರಿಗೆ ಬರಬೇಡಿ ಎನ್ನಲು ಇವರ್ಯಾರು’ ಎಂದು ಗಂಗಾಧರ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.</p>.ಇಂಗಳಿ ಘಟನೆ ಕೋಮು ಸಂಘರ್ಷವಲ್ಲ: ಎಸ್ಪಿ ಡಾ.ಭೀಮಾಶಂಕರ ಗುಳೇದ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ‘ಹುಕ್ಕೇರಿ ತಾಲ್ಲೂಕಿನ ಇಂಗಳಿಯಲ್ಲಿ ಶ್ರೀರಾಮ ಸೇನೆಯ ಐವರು ಕಾರ್ಯಕರ್ತನ್ನು ಮರಕ್ಕೆ ಕಟ್ಟಿ ಥಳಿಸಿದ ಎಲ್ಲ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು. ಇಲ್ಲದಿದ್ದರೆ ಜುಲೈ 3ರಂದು ‘ಚಲೋ ಇಂಗಳಿ’ ಹೋರಾಟ ಕೈಗೊಳ್ಳುತ್ತೇವೆ’ ಎಂದು ಶ್ರೀರಾಮ ಸೇನೆ ರಾಜ್ಯ ಘಟಕದ ಅಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.</p>.<p>ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಲೋ ಇಂಗಳಿ ಹೋರಾಟ ಎಲ್ಲಿಂದ ಆರಂಭಿಸಬೇಕು ಎಂದು ಚರ್ಚಿಸಿ ತೀರ್ಮಾನಿಸುತ್ತೇವೆ. ವಿವಿಧ ಮಠಾಧೀಶರು, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮತ್ತಿತರ ನಾಯಕರು ಪಾಲ್ಗೊಳ್ಳುವರು’ ಎಂದರು.</p>.<p>‘ಇಂಗಳಿಯಲ್ಲಿನ ಅಮಾನವೀಯ ಘಟನೆ ಬಗ್ಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರು ಮಾತನಾಡುವುದನ್ನು ಗಮನಿಸಿದರೆ, ಅವರೊಬ್ಬ ಅಧಿಕಾರಿಯೋ, ರಾಜಕೀಯ ವ್ಯಕ್ತಿಯೋ ಅಥವಾ ಹಲ್ಲೆ ಮಾಡಿದವರ ಪರವಾಗಿ ಇರುವವರೋ ಎಂಬುದು ಗೊತ್ತಾಗುತ್ತಿಲ್ಲ’ ಎಂದು ದೂರಿದರು.</p>.<p>‘ನಮ್ಮ ಸಂಘಟನೆಯ ಕಾರ್ಯಕರ್ತನಿಗೆ ರೌಡಿಶೀಟರ್ ಎನ್ನುವ ಗುಳೇದ ಅವರು, ಬೇರೆ ಬೇರೆ ಪ್ರಕರಣಗಳಲ್ಲಿ ಯಾವ ರೀತಿಯಲ್ಲಿ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡಿದ್ದಾರೆ ಎಂಬುದು ಗೊತ್ತಿದೆ’ ಎಂದು ಹೇಳಿದರು.</p>.<p>ಮುಖಂಡರಾದ ವಿಠ್ಠಲ ಗಡ್ಡಿ, ವಿನಯ ಅಂಗ್ರೊಳ್ಳಿ, ರವಿಕುಮಾರ ಕೋಕಿತಕರ ಇದ್ದರು.</p>.<h2>‘ಹೊರಗಿನವರು ನಮ್ಮೂರಿಗೆ ಬರುವ ಅಗತ್ಯವಿಲ್ಲ’</h2>.<p>ಇಂಗಳಿಯ ಲಕ್ಷ್ಮೀದೇವರ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಎಲ್ಲ ಸಮುದಾಯಗಳ ಹಿರಿಯರು ಸಭೆ ನಡೆಸಿದರು.</p>.<p>‘ನಮ್ಮೂರಿನಲ್ಲಿ ಹಿಂದೂ– ಮುಸ್ಲಿಮರು ಒಗ್ಗಟ್ಟಿನಿಂದ ಇದ್ದೇವೆ. ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಗ್ರಾಮದಲ್ಲಿ ಹಿರಿಯರಿದ್ದಾರೆ. ಹಾಗಾಗಿ ಹೊರಗಿನವರು ನಮ್ಮೂರಿಗೆ ಬರುವ ಅವಶ್ಯಕತೆ ಇಲ್ಲ’ ಎಂದು ಹೇಳಿದರು.</p>.<p>‘ನಮ್ಮ ಸಂಘಟನೆ ಕಾರ್ಯಕರ್ತರನ್ನು ಹೊಡೆಯುವಾಗ ಗ್ರಾಮದ ಮುಖಂಡರು ಎಲ್ಲಿದ್ದರು? ಹೊರಗಿನವರು ನಮ್ಮೂರಿಗೆ ಬರಬೇಡಿ ಎನ್ನಲು ಇವರ್ಯಾರು’ ಎಂದು ಗಂಗಾಧರ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.</p>.ಇಂಗಳಿ ಘಟನೆ ಕೋಮು ಸಂಘರ್ಷವಲ್ಲ: ಎಸ್ಪಿ ಡಾ.ಭೀಮಾಶಂಕರ ಗುಳೇದ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>