ಕಳೆದ ಹತ್ತು ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಚಿರತೆ ಮತ್ತೆ ಪತ್ತೆಯಾಗಿಲ್ಲ. 10 ಕಡೆ ಬೋನು ಇಟ್ಟಿದ್ದು ಅವುಗಳ ಆಸುಪಾಸು ಸುಳಿದಿಲ್ಲ. 22 ಕಡೆ ಟ್ರ್ಯಾಪ್ ಕ್ಯಾಮೆರಾಗಳನ್ನು ಅವಡಿಸಿದ್ದು, ಹಗಲು- ರಾತ್ರಿಯೂ ಅದರಲ್ಲಿ ಚಿತ್ರ ಸೆರೆಯಾಗಿಲ್ಲ. ಮಳೆಯಿಂದಾಗಿ ಈ ಪ್ರದೇಶ ಕೆಸರುಮಯವಾಗಿದೆ. ಆದರೆ, ಎಲ್ಲಿಯೂ ಚಿರತೆ ಹೆಜ್ಜೆ ಗುರುತುಗಳೂ ಪತ್ತೆಯಾಗಿಲ್ಲ. ಹೀಗಾಗಿ, ಚಿರತೆ ಮರಳಿ ಕಾಡಿನ ಕಡೆಗೆ ಹೋಗಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.