ಸಬ್ ಜೂನಿಯರ್ ತಂಡದ ಶ್ಲೋಕ ಮತ್ತು ರೋಹಿತ್ ನೇತೃತ್ವದಲ್ಲಿ ಮೂಡಿಬಂದ ‘ಸಂಪೂರ್ಣ ರಾಮಾಯಣ’ ಪ್ರೇಕ್ಷಕರ ಮನ
ಗೆದ್ದಿತು. ನಿನಾದ್ ಅಶೋಕ್ ಹಾಗೂ ಕಿರಿಯರ ತಂಡದ ವಚನ, ವಿದುಷಿ ರೇಖಾ ಅಶೋಕ ಹೆಗಡೆ ಅವರ ದೇವರನಾಮ, ಋತ್ವಿಕ್ ಅಶೋಕ ಹಾಗೂ ಹಿರಿಯರ ತಂಡದ ಪದಂ, ಸಮೀಕ್ಷಾ ಆರ್. ಕಾರಂತ ಹಾಗೂ ಹಿರಿಯರ ತಂಡವು ಪ್ರಸ್ತುತಪಡಿಸಿದ ಏಕತೆ ಮತ್ತು ವೈವಿಧ್ಯತೆ ಪ್ರಾಕಾರಗಳು ಮನೋಜ್ಞವಾಗಿದ್ದವು.