<p><strong>ಬೆಳಗಾವಿ: </strong>‘ಪೌರಕಾರ್ಮಿಕರ ವಸತಿ ಗೃಹಗಳಲ್ಲಿ ವಾಸ ಮಾಡುತ್ತಿರುವವರು ಬೇರೆ ಯೋಜನೆಗಳಲ್ಲಿ ಪಡೆದುಕೊಂಡಿರುವ ನಿವೇಶನವನ್ನು ಬಿಟ್ಟುಕೊಟ್ಟರೆ, ಅವರಿಗೆ ಒಂದು ವಾರದೊಳಗೆ ಹಕ್ಕುಪತ್ರ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.</p>.<p>ನಗರದಲ್ಲಿ ಬುಧವಾರ ನಡೆದ ಸಫಾಯಿ ಕರ್ಮಚಾರಿಗಳ ಕುರಿತ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಕೆಲವರು ಪೌರಕಾರ್ಮಿಕರ ವಸತಿ ಗೃಹಗಳಲ್ಲಿ ಇದ್ದುಕೊಂಡೂ ಬೇರೆ ನಿವೇಶನ ಪಡೆದಿದ್ದಾರೆ. ಅಂಥವರು ಹಕ್ಕುಪತ್ರ ಪಡೆಯಲು ಆಗುವುದಿಲ್ಲ’ ಎಂದರು.</p>.<p>‘ಬೆಳಗಾವಿ ನಗರದ ಪಿ.ಕೆ ವಸತಿಗೃಹಗಳಲ್ಲಿ ಸದ್ಯಕ್ಕೆ ಇರುವ ಕುಟುಂಬಗಳ ಸಮೀಕ್ಷೆ ನಡೆಸಬೇಕು. ಸಮಗ್ರ ಸಮೀಕ್ಷೆ ಬಳಿಕ ಸರ್ಕಾರದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಬಹುದು’ ಎಂದು ತಿಳಿಸಿದರು.</p>.<p>‘1973ಕ್ಕಿಂತ ಮುಂಚೆಯಿಂದಲೂ ಇರುವ ವಸತಿಗೃಹದಲ್ಲಿ ವಾಸಿಸುತ್ತಿರುವ ಪೌರಕಾರ್ಮಿಕರಿಗೆ ನಿಯಮಾವಳಿ ಪ್ರಕಾರ ವಸತಿಗೃಹದ ಹಕ್ಕುಪತ್ರ ನೀಡಬೇಕು. ಒಂದು ವೇಳೆ ನಿವೃತ್ತ ಪೌರಕಾರ್ಮಿಕರು ನಿಧನರಾಗಿದ್ದರೆ ಅವರ ವಾರಸುದಾರರಿಗೆ ನೀಡಲಾಗುವುದು’ ಎಂದರು.</p>.<p>‘ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ ಮ್ಯಾನ್ಯುವಲ್ ಸ್ಕ್ಯಾವೆಂಜರ್ ಇಲ್ಲ. ಇಂಥವರಿಗೆ ಗುರುತಿನಚೀಟಿ ನೀಡಲು ಅವಕಾಶವಿಲ್ಲ. ಒಂದು ವೇಳೆ ಅಂಥವರು ಇದ್ದರೆ ಅವರನ್ನು ಕರೆತಂದು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.</p>.<p>‘ಸ್ವಚ್ಛತಾ ಗುತ್ತಿಗೆ ನೀಡುವಾಗ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಗುತ್ತಿಗೆದಾರರಿಗೆ ನೀಡಬೇಕು ಎಂದು ಸರ್ಕಾರದ ನಿರ್ದೇಶನ ಇಲ್ಲ. ನಿವೃತ್ತ ಪೌರಕಾರ್ಮಿಕರು ಸರ್ಕಾರಿ ವಸತಿಗೃಹಗಳಲ್ಲಿ ಇರುವಂತಿಲ್ಲ. ಆದ್ದರಿಂದ ಈ ಬಗ್ಗೆ ಪರಿಶೀಲಿಸಬೇಕು’ ಎಂದೂ ಪಾಲಿಕೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.</p>.<p>‘1973ಕ್ಕಿಂತ ಮುಂಚೆಯಿಂದಲೂ ಪೌರಕಾರ್ಮಿಕ ಆಗಿರುವವರಿಗೆ ಪಿ.ಕೆ ವಸತಿಗೃಹಗಳಲ್ಲಿ ಮನೆ ಒದಗಿಸಲು ಅವಕಾಶವಿದ್ದರೆ ಒದಗಿಸಬೇಕು. ಕೆಲವು ಪೌರಕಾರ್ಮಿಕರು ಎರಡು ಮೂರು ಯೋಜನೆಗಳಲ್ಲಿ ಸೌಲಭ್ಯಗಳನ್ನು ಪಡೆದುಕೊಂಡಿದ್ದರೆ ನಿಯಮಾವಳಿ ಪ್ರಕಾರ ಪರಿಶೀಲಿಸಿ, ಸೌಲಭ್ಯ ಮುಂದುವರಿಸಬೇಕು’ ಎಂದು ಸಲಹೆ ನೀಡಿದರು.</p>.<p>‘ಗುರುತಿನ ಚೀಟಿ ಇಲ್ಲದ ಪೌರ ಕಾರ್ಮಿಕರಿಗೆ ತಕ್ಷಣ ಗುರುತಿನ ಚೀಟಿ ವಿತರಣೆ ಮಾಡಬೇಕು. ಮಳೆಗಾಲದಲ್ಲಿ ರೇನ್ಕೋಟ್ ನೀಡಬೇಕು. ಟೆಂಡರ್ ಮೂಲಕ ಬೇಗ ಗುರುತಿನ ಚೀಟಿ ಒದಗಿಸಲು ಸಾಧ್ಯವಾಗದೆ ಇದ್ದಲ್ಲಿ, ಪಾಲಿಕೆಯ ಮೂಲಕ ಒದಗಿಸಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.</p>.<p>ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ದರ್ಶನ್ ಎಚ್.ವಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಉಮಾ ಸಾಲಿಗೌಡರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.</p>.<p>*</p>.<p>ಕುಡಿಯುವ ನೀರಿನ ಸಂಪರ್ಕ ನೀಡಿ</p>.<p>‘ನಗರದ ಆನಂದ ವಾಡಿಯಲ್ಲಿ ಜಿಮ್, ಗ್ರಂಥಾಲಯ ನಿರ್ಮಾಣ ಮಾಡಲು ಕಾಮಗಾರಿಗೆ ಟೆಂಡರ್ಗಳನ್ನು ಕರೆಯಲಾಗಿದೆ. ಸದ್ಯದಲ್ಲೇ ಕುಡಿಯುವ ನೀರಿನ ಸಂಪರ್ಕಗಳನ್ನು ಕೂಡ ಕಲ್ಪಿಸಲಾಗುವುದು’ ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ ತಿಳಿಸಿದರು.</p>.<p>‘ಪೌರಕಾರ್ಮಿಕರ ವಸತಿಗೃಹದ ಅವರಣದಲ್ಲಿ ಸದ್ಯದ ಮಟ್ಟಿಗೆ ಬೋರ್ವೆಲ್ ವ್ಯವಸ್ಥೆ ಕಲ್ಪಿಸಿ, ತಕ್ಷಣ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: </strong>‘ಪೌರಕಾರ್ಮಿಕರ ವಸತಿ ಗೃಹಗಳಲ್ಲಿ ವಾಸ ಮಾಡುತ್ತಿರುವವರು ಬೇರೆ ಯೋಜನೆಗಳಲ್ಲಿ ಪಡೆದುಕೊಂಡಿರುವ ನಿವೇಶನವನ್ನು ಬಿಟ್ಟುಕೊಟ್ಟರೆ, ಅವರಿಗೆ ಒಂದು ವಾರದೊಳಗೆ ಹಕ್ಕುಪತ್ರ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.</p>.<p>ನಗರದಲ್ಲಿ ಬುಧವಾರ ನಡೆದ ಸಫಾಯಿ ಕರ್ಮಚಾರಿಗಳ ಕುರಿತ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಕೆಲವರು ಪೌರಕಾರ್ಮಿಕರ ವಸತಿ ಗೃಹಗಳಲ್ಲಿ ಇದ್ದುಕೊಂಡೂ ಬೇರೆ ನಿವೇಶನ ಪಡೆದಿದ್ದಾರೆ. ಅಂಥವರು ಹಕ್ಕುಪತ್ರ ಪಡೆಯಲು ಆಗುವುದಿಲ್ಲ’ ಎಂದರು.</p>.<p>‘ಬೆಳಗಾವಿ ನಗರದ ಪಿ.ಕೆ ವಸತಿಗೃಹಗಳಲ್ಲಿ ಸದ್ಯಕ್ಕೆ ಇರುವ ಕುಟುಂಬಗಳ ಸಮೀಕ್ಷೆ ನಡೆಸಬೇಕು. ಸಮಗ್ರ ಸಮೀಕ್ಷೆ ಬಳಿಕ ಸರ್ಕಾರದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಬಹುದು’ ಎಂದು ತಿಳಿಸಿದರು.</p>.<p>‘1973ಕ್ಕಿಂತ ಮುಂಚೆಯಿಂದಲೂ ಇರುವ ವಸತಿಗೃಹದಲ್ಲಿ ವಾಸಿಸುತ್ತಿರುವ ಪೌರಕಾರ್ಮಿಕರಿಗೆ ನಿಯಮಾವಳಿ ಪ್ರಕಾರ ವಸತಿಗೃಹದ ಹಕ್ಕುಪತ್ರ ನೀಡಬೇಕು. ಒಂದು ವೇಳೆ ನಿವೃತ್ತ ಪೌರಕಾರ್ಮಿಕರು ನಿಧನರಾಗಿದ್ದರೆ ಅವರ ವಾರಸುದಾರರಿಗೆ ನೀಡಲಾಗುವುದು’ ಎಂದರು.</p>.<p>‘ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ ಮ್ಯಾನ್ಯುವಲ್ ಸ್ಕ್ಯಾವೆಂಜರ್ ಇಲ್ಲ. ಇಂಥವರಿಗೆ ಗುರುತಿನಚೀಟಿ ನೀಡಲು ಅವಕಾಶವಿಲ್ಲ. ಒಂದು ವೇಳೆ ಅಂಥವರು ಇದ್ದರೆ ಅವರನ್ನು ಕರೆತಂದು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.</p>.<p>‘ಸ್ವಚ್ಛತಾ ಗುತ್ತಿಗೆ ನೀಡುವಾಗ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಗುತ್ತಿಗೆದಾರರಿಗೆ ನೀಡಬೇಕು ಎಂದು ಸರ್ಕಾರದ ನಿರ್ದೇಶನ ಇಲ್ಲ. ನಿವೃತ್ತ ಪೌರಕಾರ್ಮಿಕರು ಸರ್ಕಾರಿ ವಸತಿಗೃಹಗಳಲ್ಲಿ ಇರುವಂತಿಲ್ಲ. ಆದ್ದರಿಂದ ಈ ಬಗ್ಗೆ ಪರಿಶೀಲಿಸಬೇಕು’ ಎಂದೂ ಪಾಲಿಕೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.</p>.<p>‘1973ಕ್ಕಿಂತ ಮುಂಚೆಯಿಂದಲೂ ಪೌರಕಾರ್ಮಿಕ ಆಗಿರುವವರಿಗೆ ಪಿ.ಕೆ ವಸತಿಗೃಹಗಳಲ್ಲಿ ಮನೆ ಒದಗಿಸಲು ಅವಕಾಶವಿದ್ದರೆ ಒದಗಿಸಬೇಕು. ಕೆಲವು ಪೌರಕಾರ್ಮಿಕರು ಎರಡು ಮೂರು ಯೋಜನೆಗಳಲ್ಲಿ ಸೌಲಭ್ಯಗಳನ್ನು ಪಡೆದುಕೊಂಡಿದ್ದರೆ ನಿಯಮಾವಳಿ ಪ್ರಕಾರ ಪರಿಶೀಲಿಸಿ, ಸೌಲಭ್ಯ ಮುಂದುವರಿಸಬೇಕು’ ಎಂದು ಸಲಹೆ ನೀಡಿದರು.</p>.<p>‘ಗುರುತಿನ ಚೀಟಿ ಇಲ್ಲದ ಪೌರ ಕಾರ್ಮಿಕರಿಗೆ ತಕ್ಷಣ ಗುರುತಿನ ಚೀಟಿ ವಿತರಣೆ ಮಾಡಬೇಕು. ಮಳೆಗಾಲದಲ್ಲಿ ರೇನ್ಕೋಟ್ ನೀಡಬೇಕು. ಟೆಂಡರ್ ಮೂಲಕ ಬೇಗ ಗುರುತಿನ ಚೀಟಿ ಒದಗಿಸಲು ಸಾಧ್ಯವಾಗದೆ ಇದ್ದಲ್ಲಿ, ಪಾಲಿಕೆಯ ಮೂಲಕ ಒದಗಿಸಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.</p>.<p>ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ದರ್ಶನ್ ಎಚ್.ವಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಉಮಾ ಸಾಲಿಗೌಡರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.</p>.<p>*</p>.<p>ಕುಡಿಯುವ ನೀರಿನ ಸಂಪರ್ಕ ನೀಡಿ</p>.<p>‘ನಗರದ ಆನಂದ ವಾಡಿಯಲ್ಲಿ ಜಿಮ್, ಗ್ರಂಥಾಲಯ ನಿರ್ಮಾಣ ಮಾಡಲು ಕಾಮಗಾರಿಗೆ ಟೆಂಡರ್ಗಳನ್ನು ಕರೆಯಲಾಗಿದೆ. ಸದ್ಯದಲ್ಲೇ ಕುಡಿಯುವ ನೀರಿನ ಸಂಪರ್ಕಗಳನ್ನು ಕೂಡ ಕಲ್ಪಿಸಲಾಗುವುದು’ ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ ತಿಳಿಸಿದರು.</p>.<p>‘ಪೌರಕಾರ್ಮಿಕರ ವಸತಿಗೃಹದ ಅವರಣದಲ್ಲಿ ಸದ್ಯದ ಮಟ್ಟಿಗೆ ಬೋರ್ವೆಲ್ ವ್ಯವಸ್ಥೆ ಕಲ್ಪಿಸಿ, ತಕ್ಷಣ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>