ಅಂಜುಮನ್-ಇ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ ರಾಜು ಸೇಠ್ ಮಾತನಾಡಿ, ‘ಪ್ರತಿ ವರ್ಷ ಈದ್ ಉಲ್ ಫಿತ್ರ್ ಅಂಗವಾಗಿ ಈದ್ಗಾ ಮೈದಾನಗಳಲ್ಲಿ ಸಾಮಾಹಿಕ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಈ ಬಾರಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದಾಗಿ ಮನೆಯಲ್ಲೇ ಪ್ರಾರ್ಥಿಸಬೇಕು ಎಂದು ನಿರ್ಧರಿಸಲಾಗಿದೆ. ಇದನ್ನು ಎಲ್ಲರೂ ಪಾಲಿಸಬೇಕು. ಹಬ್ಬದ ಆಚರಣೆಗೆಂದು ವ್ಯಯಿಸುತ್ತಿದ್ದ ಹಣವನ್ನು ಸಮಾಜ ಸೇವಾ ಕೆಲಸಕ್ಕೆ ಬಳಸಬೇಕು. ಬಡವರಿಗೆ ದಾನ-ಧರ್ಮ ಮಾಡಬೇಕು. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಕೋವಿಡ್ನಿಂದ ಪಾರಾಗಬೇಕು’ ಎಂದು ತಿಳಿಸಿದರು.