‘ಹೋರಾಟದ ಫಲವಾಗಿ, ಸರ್ಕಾರವು 2014ರಲ್ಲಿ 1500 ಹುದ್ದೆಗಳನ್ನು ವೇತನ ಅನುದಾನಕ್ಕೆ ಒಳಪಡಿಸಿದೆ. ಉಳಿದ 350 ಹುದ್ದೆಗಳು ಅನುದಾನಕ್ಕೆ ಒಳಪಟ್ಟಿಲ್ಲ. 2000ನೇ ಸಾಲಿನ ಪೂರ್ವದಲ್ಲಿ ನೇಮಕವಾದ ಎಲ್ಲ ಡಿ ಗ್ರೂಪ್ ನೌಕರರನ್ನು ಅನುದಾನಕ್ಕೆ ಒಳಪಡಿಸಬೇಕು. ಅಕಾಲಿನ ಮರಣ ಹೊಂದಿದವರು ಹಾಗೂ ನಿವೃತ್ತಿ ಹೊಂದಿದವರ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಬೇಕು’ ಎಂದು ಒತ್ತಾಯಿಸಿದರು.