<p><strong>ತೆಲಸಂಗ (ಬೆಳಗಾವಿ ಜಿಲ್ಲೆ): </strong>‘ಕೋವಿಡ್ ಅಲೆಯಲ್ಲಿ ಸೇವೆ ಮಾಡಿದ್ದಕ್ಕೆ ಜನರು ನಮ್ಮನ್ನು ದೇವರೆಂದು ಕರೆದರು. ಇದಕ್ಕಿಂತ ಹೆಚ್ಚಿನದು ಇನ್ನೇನು ಬೇಕು? ವೈದ್ಯೆಯಾಗಿರುವುದಕ್ಕೆ ಜೀವನ ಸಾರ್ಥಕವಾಯಿತು’ ಎಂದು ವೈದ್ಯಾಧಿಕಾರಿ ಡಾ.ವಾಸಂತಿ ಹೇಳಿದರು.</p>.<p>ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಜನರ ಸೇವೆ ಮಾಡುವುದು ವೈದ್ಯರ ಕರ್ತವ್ಯ. ರೈತ ಬಿತ್ತಿ ಬೆಳೆದರೆ, ಕೂಲಿ ಮಾಡುವವರು ದುಡಿಮೆ ಮೂಲಕ ಸಹಾಯ ಮಾಡುವರು. ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ಸೇವೆ ಮಾಡುವರು. ಅವರವರ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ಪ್ರಮುಖವಾಗುತ್ತದೆ. ನಮ್ಮಿಂದಲೇ ಎನ್ನುವ ಅಹಂಕಾರ ಸಲ್ಲದು’ ಎಂದರು.</p>.<p>ಡಾ.ಭರಮಣ್ಣ ಕಾಮನ್, ಡಾ.ಎಸ್.ಐ. ಇಂಚಗೇರಿ, ಡಾ.ಪ್ರಕಾಶ ಕೋಡ್ನಿ, ಡಾ.ಶೈಲಾ ಇಂಚಗೇರಿ, ಸುಜಾತಾ ದೀಕ್ಷೀತ್, ವಿನೋದ ಪಾಟೀಲ, ಗೀತಾ, ಅಮೀತ, ಗೌರಿ ಕುಂಬಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಲಸಂಗ (ಬೆಳಗಾವಿ ಜಿಲ್ಲೆ): </strong>‘ಕೋವಿಡ್ ಅಲೆಯಲ್ಲಿ ಸೇವೆ ಮಾಡಿದ್ದಕ್ಕೆ ಜನರು ನಮ್ಮನ್ನು ದೇವರೆಂದು ಕರೆದರು. ಇದಕ್ಕಿಂತ ಹೆಚ್ಚಿನದು ಇನ್ನೇನು ಬೇಕು? ವೈದ್ಯೆಯಾಗಿರುವುದಕ್ಕೆ ಜೀವನ ಸಾರ್ಥಕವಾಯಿತು’ ಎಂದು ವೈದ್ಯಾಧಿಕಾರಿ ಡಾ.ವಾಸಂತಿ ಹೇಳಿದರು.</p>.<p>ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಜನರ ಸೇವೆ ಮಾಡುವುದು ವೈದ್ಯರ ಕರ್ತವ್ಯ. ರೈತ ಬಿತ್ತಿ ಬೆಳೆದರೆ, ಕೂಲಿ ಮಾಡುವವರು ದುಡಿಮೆ ಮೂಲಕ ಸಹಾಯ ಮಾಡುವರು. ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ಸೇವೆ ಮಾಡುವರು. ಅವರವರ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ಪ್ರಮುಖವಾಗುತ್ತದೆ. ನಮ್ಮಿಂದಲೇ ಎನ್ನುವ ಅಹಂಕಾರ ಸಲ್ಲದು’ ಎಂದರು.</p>.<p>ಡಾ.ಭರಮಣ್ಣ ಕಾಮನ್, ಡಾ.ಎಸ್.ಐ. ಇಂಚಗೇರಿ, ಡಾ.ಪ್ರಕಾಶ ಕೋಡ್ನಿ, ಡಾ.ಶೈಲಾ ಇಂಚಗೇರಿ, ಸುಜಾತಾ ದೀಕ್ಷೀತ್, ವಿನೋದ ಪಾಟೀಲ, ಗೀತಾ, ಅಮೀತ, ಗೌರಿ ಕುಂಬಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>