'ಕೃಷಿ ಉತ್ಪನ್ನ ಸಾಗಣೆಗೆ ನೀಡಲಾಗಿದ್ದ ಅವಕಾಶ ದುರ್ಬಳಕೆಗೆ ಅವರು ಯತ್ನಿಸಿದ್ದರು. ಹೀಗಾಗಿ ನಿಗಾ ವಹಿಸಲಾಗಿತ್ತು. ಈಗಲೂ ನಿತ್ಯವೂ ತಪಾಸಣೆ ನಡೆಸಲಾಗುತ್ತಿದೆ. ಕಬ್ಬಿಣ, ಕೊಬ್ಬರಿ, ಅಡಿಕೆ, ಏಲಕ್ಕಿ, ಸಿಮೆಂಟ್ ಮೊದಲಾದ ವಾಣಿಜ್ಯ ಉತ್ಪನ್ನಗಳನ್ನು ಸಾಗಿಸಿ ತೆರಿಗೆ ವಂಚಿಸಲು ಮುಂದಾಗಿದ್ದು ಕಂಡುಬಂದಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಹೊರ ರಾಜ್ಯಕ್ಕೆ ಹಾಗೂ ಮಹಾರಾಷ್ಟ್ರ, ಗುಜರಾತ್, ಗೋವಾದಿಂದ ಕರ್ನಾಟಕಕ್ಕೆ ಸಾಗಿಸಲು ಯತ್ನ ನಡೆದಿರುವುದನ್ನು ಗುರುತಿಸಿದ್ದೇವೆ. ಬೆಳಗಿನ ಜಾವದಲ್ಲೂ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಸಾಮಾನ್ಯ ದಿನಗಳಿಗಿಂತ ಲಾಕ್ ಡೌನ್ ಸಂದರದಭದಲ್ಲಿ ಹೆಚ್ಚು ದಂಡ ಸಂಗ್ರಹವಾಗಿದೆ' ಎಂದು ಮಾಹಿತಿ ನೀಡಿದರು.