ಬೆಳಗಾವಿ ತಾಲ್ಲೂಕಿನ ಹೊನಗಾ ಗ್ರಾಮದ ಬಳಿ ನಿಯಮ ಉಲಂಘಿಸಿ ಸಾಗಿಸುತ್ತಿದ್ದ ₹ 4 ಲಕ್ಷ ಮೌಲ್ಯದ 6,675 ಕೆ.ಜಿ. ಸ್ಫೋಟಕ ವಸ್ತು
ಗಳನ್ನು ಕಾಕತಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ‘ಚಿಕ್ಕೋಡಿಯ ಬೊಬಲವಾಡದ ರಮೇಶ ರಾಯಪ್ಪ ಲಕ್ಕೊಟಿ, ರಾಜು ಈಶ್ವರ ಶಿರಗಾಂವಿ, ಮುಗಳಿಯ ಅರುಣ ಶ್ರೀಶೈಲ ಮಠದ ಬಂಧಿಸಲಾಗಿದೆ. ಮಾಲೀಕರನ್ನು ಬಂಧಿಸಬೇಕಾಗಿದೆ’ ಎಂದು ಡಿಪಿಸಿ ವಿಕ್ರಂ ಅಮಟೆ ತಿಳಿಸಿದ್ದಾರೆ.