<p><strong>ಅಥಣಿ:</strong> ‘ರಸ್ತೆ ಅಪಘಾತಗಳು ಸವಾರರು ಹಾಗೂ ಚಾಲಕರ ನಿರ್ಲಕ್ಷ್ಯದಿಂದ ಹೆಚ್ಚಾಗುತ್ತಿವೆಯೇ ಹೊರತು, ವಾಹನಗಳ ಸಮಸ್ಯೆಯಿಂದ ಸಂಭವಿಸುವುದಿಲ್ಲ’ ಎಂದು ಡಿವೈಎಸ್ಪಿ ಎಸ್.ವಿ. ಗಿರೀಶ ಹೇಳಿದರು.</p>.<p>ಇಲ್ಲಿನ ಕೆ.ಎ. ಲೋಕಾಪುರ ಪದವಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ಹಾಗೂ ರಾಜ್ಯಶಾಸ್ತ್ರ ವಿಭಾಗದಿಂದ ನೂತನ ನಿಯಮಗಳ ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಯುವಕರು ಬೇಕಾಬಿಟ್ಟಿಯಾಗಿ ವಾಹನಗಳನ್ನು ಓಡಿಸುತ್ತಾರೆ. ಅವರಿಗೆ ಸಂಚಾರ ನಿಯಮಗಳ ಅರಿವಿಲ್ಲ. ಹೀಗಾಗಿ, ಅಪಘಾತಗಳು ಹೆಚ್ಚುತ್ತಿವೆ. ಇದನ್ನು ತಡೆಯುವುದಕ್ಕಾಗಿ ನಿಯಮಗಳನ್ನು ಪಾಲಿಸಬೇಕು. ದಂಡ ಕಟ್ಟುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ವಿಮೆ ಮಾಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<p>ಪಿಎಸ್ಐ ಉಸ್ಮಾನ್ ಅವಟಿ, ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಆರ್.ಎಂ. ದೇವರಡ್ಡಿ, ಉಪ ಪ್ರಾಚಾರ್ಯ ಗಿರೀಶ ಕುಲಕರ್ಣಿ ಮಾತನಾಡಿದರು.</p>.<p>ಪ್ರೊಬೆಷನರಿ ಪಿಎಸ್ಐ ಸಿ.ಕೆ. ಆನಂದ, ಅರ್ಥಶಾಸ್ತ್ರ ವಿಭಾಗದ ವಿ.ಎಂ. ದೇಶಪಾಂಡೆ, ಎಸ್.ಎ. ಗಡಗೆ, ರಾಜ್ಯಶಾಸ್ತ್ರ ವಿಭಾಗದ ಎಸ್.ಎಸ್. ಕಟಗೇರಿ, ಅರ್ಚನಾ ಪೂಜಾರಿ, ರಾಜಕುಮಾರ ಕಾಂಬಳೆ, ವಿಠೋಬಾ ತೋರತ್, ಸಂತೋಷ ಬಡಕಂಬಿ ಇದ್ದರು.</p>.<p>ದೀಪಾ ಮಾಳಿ ನಿರೂಪಿಸಿದರು. ಎಸ್.ಎ. ಗಡಗೆ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಥಣಿ:</strong> ‘ರಸ್ತೆ ಅಪಘಾತಗಳು ಸವಾರರು ಹಾಗೂ ಚಾಲಕರ ನಿರ್ಲಕ್ಷ್ಯದಿಂದ ಹೆಚ್ಚಾಗುತ್ತಿವೆಯೇ ಹೊರತು, ವಾಹನಗಳ ಸಮಸ್ಯೆಯಿಂದ ಸಂಭವಿಸುವುದಿಲ್ಲ’ ಎಂದು ಡಿವೈಎಸ್ಪಿ ಎಸ್.ವಿ. ಗಿರೀಶ ಹೇಳಿದರು.</p>.<p>ಇಲ್ಲಿನ ಕೆ.ಎ. ಲೋಕಾಪುರ ಪದವಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ಹಾಗೂ ರಾಜ್ಯಶಾಸ್ತ್ರ ವಿಭಾಗದಿಂದ ನೂತನ ನಿಯಮಗಳ ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಯುವಕರು ಬೇಕಾಬಿಟ್ಟಿಯಾಗಿ ವಾಹನಗಳನ್ನು ಓಡಿಸುತ್ತಾರೆ. ಅವರಿಗೆ ಸಂಚಾರ ನಿಯಮಗಳ ಅರಿವಿಲ್ಲ. ಹೀಗಾಗಿ, ಅಪಘಾತಗಳು ಹೆಚ್ಚುತ್ತಿವೆ. ಇದನ್ನು ತಡೆಯುವುದಕ್ಕಾಗಿ ನಿಯಮಗಳನ್ನು ಪಾಲಿಸಬೇಕು. ದಂಡ ಕಟ್ಟುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ವಿಮೆ ಮಾಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<p>ಪಿಎಸ್ಐ ಉಸ್ಮಾನ್ ಅವಟಿ, ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಆರ್.ಎಂ. ದೇವರಡ್ಡಿ, ಉಪ ಪ್ರಾಚಾರ್ಯ ಗಿರೀಶ ಕುಲಕರ್ಣಿ ಮಾತನಾಡಿದರು.</p>.<p>ಪ್ರೊಬೆಷನರಿ ಪಿಎಸ್ಐ ಸಿ.ಕೆ. ಆನಂದ, ಅರ್ಥಶಾಸ್ತ್ರ ವಿಭಾಗದ ವಿ.ಎಂ. ದೇಶಪಾಂಡೆ, ಎಸ್.ಎ. ಗಡಗೆ, ರಾಜ್ಯಶಾಸ್ತ್ರ ವಿಭಾಗದ ಎಸ್.ಎಸ್. ಕಟಗೇರಿ, ಅರ್ಚನಾ ಪೂಜಾರಿ, ರಾಜಕುಮಾರ ಕಾಂಬಳೆ, ವಿಠೋಬಾ ತೋರತ್, ಸಂತೋಷ ಬಡಕಂಬಿ ಇದ್ದರು.</p>.<p>ದೀಪಾ ಮಾಳಿ ನಿರೂಪಿಸಿದರು. ಎಸ್.ಎ. ಗಡಗೆ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>