<p><strong>ಭಾರತಿನಗರ:</strong> ಸಮೀಪದ ದೊಡ್ಡರಸಿನಕೆರೆ ‘ದೇವಾಲಯಗಳ ತವರೂರು’ ಎಂದೇ ಖ್ಯಾತಿ ಹೊಂದಿದೆ. ಗ್ರಾಮದಲ್ಲಿ 25ಕ್ಕೂ ಹೆಚ್ಚು ಐತಿಹಾಸಿಕ ಹಿನ್ನೆಲೆಯುಳ್ಳ ದೇವಾಲಯಗಳಿರುವುದೇ ಇದಕ್ಕೆ ಕಾರಣ.</p>.<p>ಸರ್ವ ಜನಾಂಗದ ಭಾವೈಕ್ಯಕ್ಕೆ ಗ್ರಾಮದ ದೇವಾಲಯಗಳು ನಾಂದಿ ಹಾಡಿವೆ ಎಂದರೆ ತಪ್ಪಾಗಲಾರದು. ಗ್ರಾಮದ ಕೀರ್ತಿಯನ್ನು ಮತ್ತಷ್ಟು ಬೆಳಗಿಸಲು ಗ್ರಾಮದ ಅಂಗಳದಲ್ಲಿ ಜೀರ್ಣೋದ್ಧಾರ ಗೊಂಡು ಕಂಗೊಳಿಸುತ್ತಿರುವ ಪುರಾತನ ಇತಿಹಾಸವುಳ್ಳ ಸಪ್ತ ದೇಗುಲಗಳು ಫೆ. 2ರಂದು ಲೋಕಾರ್ಪಣೆಗೊಳ್ಳುತ್ತಿವೆ.</p>.<p>ಗ್ರಾಮ ದೇವತೆ ಕಾಳಿಕಾಂಬಾದೇವಿ, ಆಂಜನೇಯ, ಈಶ್ವರ, ಶನಿಮಹಾತ್ಮ, ರಾಮಮಂದಿರ, ವೀರಭದ್ರ ಹಾಗೂ ನವಗ್ರಹ ದೇವಾಲಯಗಳು ಪುರಾತನ ಇತಿಹಾಸವುಳ್ಳ ಸಪ್ತ ದೇವಾಲಯಗಳು. ಈ ದೇವಾಲಯಗಳನ್ನು ಸರ್ಕಾರದ ಅನುದಾನದ ಜತೆ ಶಾಸಕ ಡಿ.ಸಿ.ತಮ್ಮಣ್ಣ ತಮ್ಮ ಸ್ವಂತ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿಸಿದ್ದಾರೆ.</p>.<p>ಜೀರ್ಣೋದ್ಧಾರ ಗೊಂಡಿರುವ ದೇವಾಲಯಗಳು ಹಲವು ವೈಶಿಷ್ಟ್ಯ ಗಳನ್ನು ಹೊಂದಿವೆ. ದೇಗುಲಗಳನ್ನು ಗ್ರಾನೈಟ್ನಿಂದ ಮರು ನಿರ್ಮಾಣ ಮಾಡಲಾಗಿದೆ. ವಿಶಾಲವಾದ ಪ್ರಾಂಗಣಗಳನ್ನು ದೇವಾಲಯಗಳು ಹೊಂದಿವೆ.</p>.<p>ಕಲ್ಲಿನ ಕಂಬಗಳು, ಆಕರ್ಷಕ ಗರ್ಭಗುಡಿ, ನೆಲಹಾಸು ಗಮನ ಸೆಳೆಯುತ್ತವೆ. ಕಲ್ಲಿನಿಂದ ಕೂಡಿರುವ ಅಪರೂಪದ ಕೆತ್ತನೆಯುಳ್ಳ ಮೂರ್ತಿಗಳು, ಶಿಲ್ಪಕಲಾಕೃತಿಗಳು ದೇವಾಲಯದ ಸೌಂದರ್ಯ ಹೆಚ್ಚಿಸಿವೆ. ದೇವಾಲಯಗಳಿಗೆ ಅತ್ಯುತ್ತಮ ಗುಣಮಟ್ಟದ, ಬಿಸಿಲು ಮಳೆಗೆ ಮಾಸದ ಪೇಂಟ್ ಮಾಡಿಸಲಾಗಿದೆ. ವಿಶೇಷ ಅಲಂಕಾರಗಳಿಂದ ಕಂಗೊಳಿಸುತ್ತವೆ.</p>.<p>‘ದೇವಾಲಯಗಳ ಜೀರ್ಣೋ ದ್ಧಾರಕ್ಕೆ ನನ್ನ ಮಾತೃಶ್ರೀ ಕಾಡಮ್ಮ ಅವರ ಪ್ರೇರಣೆ, ಗ್ರಾಮಸ್ಥರ ಸಹಕಾರ ಇದೆ. ಗ್ರಾಮದ ದೇವಾಲಯಗಳು ಹಲವು ಗ್ರಾಮಗಳ ಜನರ ಆರಾಧ್ಯ ದೈವವೂ ಆಗಿದೆ. ಜನರ ಸಾಮರಸ್ಯಕ್ಕೆ ನಾಂದಿ ಹಾಡಿದೆ’ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳುತ್ತಾರೆ.</p>.<p>ದೇಗುಲಗಳ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಬರುವ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಿದೆ. 30 ಸಾವಿರಕ್ಕೂ ಹೆಚ್ಚು ಮಂದಿ ಪ್ರಸಾದ ಸ್ವೀಕರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.</p>.<p><strong>ಕಾರ್ಯಕ್ರಮ ಉದ್ಘಾಟನೆ</strong></p>.<p>ಶುಕ್ರವಾರ ಬೆಳಿಗ್ಗೆ 11ಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಜೀರ್ಣೋದ್ಧಾರಗೊಂಡಿರುವ ದೇಗುಲಗಳನ್ನು ಉದ್ಘಾಟಿಸಿ, ಕಳಸ ಪ್ರತಿಷ್ಠಾಪನೆ ನೆರವೇರಿಸುವರು.</p>.<p>ಜಿಲ್ಲಾ ಉಸ್ತುವಾರಿ ಸಚಿವ ಎಂ. ಕೃಷ್ಣಪ್ಪ, ಸಂಸದ ಸಿ.ಎಸ್.ಪುಟ್ಟರಾಜು, ಮಾಜಿ ಸಚಿವ ಅಂಬರೀಷ್, ವಿಧಾನ ಪರಿಷತ್ ಉಪಾಸಭಾಪತಿ ಮರಿತಿಬ್ಬೇಗೌಡ, ವಿಧಾನ ಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ ಭಾಗವಹಿಸುವರು.</p>.<p>ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದು, ಶಾಸಕ ಡಿ.ಸಿ.ತಮ್ಮಣ್ಣ ಅಧ್ಯಕ್ಷತೆ ವಹಿಸುವರು.</p>.<p>* * </p>.<p>ದೇವಾಲಯಗಳು ಜನರಲ್ಲಿ ಶಾಂತಿ, ನೆಮ್ಮದಿ, ಪರಸ್ಪರ ಬಾಂಧವ್ಯ, ಸಾಮರಸ್ಯ ತರುವ ತಾಣ. ದೇವರಲ್ಲಿನ ಭಕ್ತಿ ಭಾವನೆಗಳು ಮನುಷ್ಯನನ್ನು ಪರಿಪೂರ್ಣನನ್ನಾಗಿಸುತ್ತವೆ<br /> <strong>ಡಿ.ಸಿ.ತಮ್ಮಣ್ಣ</strong>, ಶಾಸಕ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾರತಿನಗರ:</strong> ಸಮೀಪದ ದೊಡ್ಡರಸಿನಕೆರೆ ‘ದೇವಾಲಯಗಳ ತವರೂರು’ ಎಂದೇ ಖ್ಯಾತಿ ಹೊಂದಿದೆ. ಗ್ರಾಮದಲ್ಲಿ 25ಕ್ಕೂ ಹೆಚ್ಚು ಐತಿಹಾಸಿಕ ಹಿನ್ನೆಲೆಯುಳ್ಳ ದೇವಾಲಯಗಳಿರುವುದೇ ಇದಕ್ಕೆ ಕಾರಣ.</p>.<p>ಸರ್ವ ಜನಾಂಗದ ಭಾವೈಕ್ಯಕ್ಕೆ ಗ್ರಾಮದ ದೇವಾಲಯಗಳು ನಾಂದಿ ಹಾಡಿವೆ ಎಂದರೆ ತಪ್ಪಾಗಲಾರದು. ಗ್ರಾಮದ ಕೀರ್ತಿಯನ್ನು ಮತ್ತಷ್ಟು ಬೆಳಗಿಸಲು ಗ್ರಾಮದ ಅಂಗಳದಲ್ಲಿ ಜೀರ್ಣೋದ್ಧಾರ ಗೊಂಡು ಕಂಗೊಳಿಸುತ್ತಿರುವ ಪುರಾತನ ಇತಿಹಾಸವುಳ್ಳ ಸಪ್ತ ದೇಗುಲಗಳು ಫೆ. 2ರಂದು ಲೋಕಾರ್ಪಣೆಗೊಳ್ಳುತ್ತಿವೆ.</p>.<p>ಗ್ರಾಮ ದೇವತೆ ಕಾಳಿಕಾಂಬಾದೇವಿ, ಆಂಜನೇಯ, ಈಶ್ವರ, ಶನಿಮಹಾತ್ಮ, ರಾಮಮಂದಿರ, ವೀರಭದ್ರ ಹಾಗೂ ನವಗ್ರಹ ದೇವಾಲಯಗಳು ಪುರಾತನ ಇತಿಹಾಸವುಳ್ಳ ಸಪ್ತ ದೇವಾಲಯಗಳು. ಈ ದೇವಾಲಯಗಳನ್ನು ಸರ್ಕಾರದ ಅನುದಾನದ ಜತೆ ಶಾಸಕ ಡಿ.ಸಿ.ತಮ್ಮಣ್ಣ ತಮ್ಮ ಸ್ವಂತ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿಸಿದ್ದಾರೆ.</p>.<p>ಜೀರ್ಣೋದ್ಧಾರ ಗೊಂಡಿರುವ ದೇವಾಲಯಗಳು ಹಲವು ವೈಶಿಷ್ಟ್ಯ ಗಳನ್ನು ಹೊಂದಿವೆ. ದೇಗುಲಗಳನ್ನು ಗ್ರಾನೈಟ್ನಿಂದ ಮರು ನಿರ್ಮಾಣ ಮಾಡಲಾಗಿದೆ. ವಿಶಾಲವಾದ ಪ್ರಾಂಗಣಗಳನ್ನು ದೇವಾಲಯಗಳು ಹೊಂದಿವೆ.</p>.<p>ಕಲ್ಲಿನ ಕಂಬಗಳು, ಆಕರ್ಷಕ ಗರ್ಭಗುಡಿ, ನೆಲಹಾಸು ಗಮನ ಸೆಳೆಯುತ್ತವೆ. ಕಲ್ಲಿನಿಂದ ಕೂಡಿರುವ ಅಪರೂಪದ ಕೆತ್ತನೆಯುಳ್ಳ ಮೂರ್ತಿಗಳು, ಶಿಲ್ಪಕಲಾಕೃತಿಗಳು ದೇವಾಲಯದ ಸೌಂದರ್ಯ ಹೆಚ್ಚಿಸಿವೆ. ದೇವಾಲಯಗಳಿಗೆ ಅತ್ಯುತ್ತಮ ಗುಣಮಟ್ಟದ, ಬಿಸಿಲು ಮಳೆಗೆ ಮಾಸದ ಪೇಂಟ್ ಮಾಡಿಸಲಾಗಿದೆ. ವಿಶೇಷ ಅಲಂಕಾರಗಳಿಂದ ಕಂಗೊಳಿಸುತ್ತವೆ.</p>.<p>‘ದೇವಾಲಯಗಳ ಜೀರ್ಣೋ ದ್ಧಾರಕ್ಕೆ ನನ್ನ ಮಾತೃಶ್ರೀ ಕಾಡಮ್ಮ ಅವರ ಪ್ರೇರಣೆ, ಗ್ರಾಮಸ್ಥರ ಸಹಕಾರ ಇದೆ. ಗ್ರಾಮದ ದೇವಾಲಯಗಳು ಹಲವು ಗ್ರಾಮಗಳ ಜನರ ಆರಾಧ್ಯ ದೈವವೂ ಆಗಿದೆ. ಜನರ ಸಾಮರಸ್ಯಕ್ಕೆ ನಾಂದಿ ಹಾಡಿದೆ’ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳುತ್ತಾರೆ.</p>.<p>ದೇಗುಲಗಳ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಬರುವ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಿದೆ. 30 ಸಾವಿರಕ್ಕೂ ಹೆಚ್ಚು ಮಂದಿ ಪ್ರಸಾದ ಸ್ವೀಕರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.</p>.<p><strong>ಕಾರ್ಯಕ್ರಮ ಉದ್ಘಾಟನೆ</strong></p>.<p>ಶುಕ್ರವಾರ ಬೆಳಿಗ್ಗೆ 11ಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಜೀರ್ಣೋದ್ಧಾರಗೊಂಡಿರುವ ದೇಗುಲಗಳನ್ನು ಉದ್ಘಾಟಿಸಿ, ಕಳಸ ಪ್ರತಿಷ್ಠಾಪನೆ ನೆರವೇರಿಸುವರು.</p>.<p>ಜಿಲ್ಲಾ ಉಸ್ತುವಾರಿ ಸಚಿವ ಎಂ. ಕೃಷ್ಣಪ್ಪ, ಸಂಸದ ಸಿ.ಎಸ್.ಪುಟ್ಟರಾಜು, ಮಾಜಿ ಸಚಿವ ಅಂಬರೀಷ್, ವಿಧಾನ ಪರಿಷತ್ ಉಪಾಸಭಾಪತಿ ಮರಿತಿಬ್ಬೇಗೌಡ, ವಿಧಾನ ಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ ಭಾಗವಹಿಸುವರು.</p>.<p>ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದು, ಶಾಸಕ ಡಿ.ಸಿ.ತಮ್ಮಣ್ಣ ಅಧ್ಯಕ್ಷತೆ ವಹಿಸುವರು.</p>.<p>* * </p>.<p>ದೇವಾಲಯಗಳು ಜನರಲ್ಲಿ ಶಾಂತಿ, ನೆಮ್ಮದಿ, ಪರಸ್ಪರ ಬಾಂಧವ್ಯ, ಸಾಮರಸ್ಯ ತರುವ ತಾಣ. ದೇವರಲ್ಲಿನ ಭಕ್ತಿ ಭಾವನೆಗಳು ಮನುಷ್ಯನನ್ನು ಪರಿಪೂರ್ಣನನ್ನಾಗಿಸುತ್ತವೆ<br /> <strong>ಡಿ.ಸಿ.ತಮ್ಮಣ್ಣ</strong>, ಶಾಸಕ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>