‘ನೂರಾರು ಮಂದಿ ಪಾಲ್ಗೊಳ್ಳಲಿದ್ದೇವೆ. ಕೇಂದ್ರ ಸಚಿವರು ರೈತರಾದ ನಮ್ಮಲ್ಲಿರುವ ಗೊಂದಲಗಳನ್ನು ನಿವಾರಣೆ ಮಾಡದಿದ್ದಲ್ಲಿ ಮತ್ತು ಸಮಜಾಯಿಷಿ ನೀಡದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು. ಚರ್ಚೆಯೋ, ಹೋರಾಟವೋ ಎನ್ನುವುದನ್ನು ಅವರೆ ನಿರ್ಧರಿಸಲಿ. ನಾವು ಅಂದು ವಿಭಿನ್ನವಾದ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎಂದರು.