ರೈತರ ಮಗ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ನಮ್ಮಿಂದ ಮನವಿ ಸ್ವೀಕರಿಸಿ ಅಹವಾಲು ಆಲಿಸುವ ಕಾಳಜಿ ತೋರಿಸಬೇಕಿತ್ತು. ನಿನ್ನೆ ಮನವಿ ಕೊಡಲು ಹೋದಾಗಲೂ ನೀವು ಹೇಳಿದಷ್ಟು ಪರಿಹಾರ ಕೊಡಲಾಗದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೂಡ ರೇಗಾಡಿದರು. ಹೀಗಾದರೆ ಹೇಗೆ? ಸರ್ಕಾರದ ಬಳಿ ಹಣ ಇಲ್ಲವಾದರೆ ಸಂತ್ರಸ್ತರನ್ನು ಭೇಟಿಯಾಗುವ ನಾಟಕವನ್ನೇಕೆ ಮಾಡುತ್ತಿದ್ದಾರೆ ಎಂದು ಜಯಶ್ರೀ ಕೇಳಿದರು.