<p><strong>ಗೋಕಾಕ</strong>: ಜಮ್ಮು– ಕಾಶ್ಮೀರ ಕಣಿವೆಯ ಕಾರ್ಗಿಲ್ ಪ್ರದೇಶದಲ್ಲಿ ಸಂಭವಿಸಿದ ಅವಘಡದಲ್ಲಿ ತಲೆಮೇಲೆ ಕಲ್ಲುಬಂಡೆ ಉರುಳಿ ಪ್ರಾಣ ಕಳೆದುಕೊಂಡ, ತಾಲ್ಲೂಕಿನ ಈರನಟ್ಟಿ ಗ್ರಾಮದ ನಿವಾಸಿ, ಯೋಧ ಮಹೇಶ ನಿಂಗಪ್ಪ ವಾಲಿ (24) ಅವರ ಅಂತ್ಯಸಂಸ್ಕಾರ ಮಂಗಳವಾರ ನೆರವೇರಿತು.</p>.<p>ಮಹೇಶ ಅವರ ತಂದೆ ನಿಂಗಪ್ಪ ಕೂಡ ನಿವೃತ್ತ ಯೋಧರು. ಮಹೇಶ ಕೂಡ ತಮ್ಮ 18 ವರ್ಷ ತುಂಬುವಷ್ಟರಲ್ಲಿ ಮದ್ರಾಸ್ ಎಂಜಿನಿಯರಿಂಗ್ ರೆಜಿಮೆಂಟ್ನಲ್ಲಿ ನೌಕರಿ ಸೇರಿದ್ದರು. 6 ತಿಂಗಳ ಹಿಂದಷ್ಟೇ ಜಮ್ಮು– ಕಾಶ್ಮೀರ ಕಣಿವೆಯ ಕಾರ್ಗಿಲ್ಗೆ ವರ್ಗವಾಗಿದ್ದರು.</p>.<p>ಡಿ.14ರಂದು ಕಾರ್ಗಿಲ್ ದುರ್ಗಮ ಪ್ರದೇಶದಲ್ಲಿ ಬುಲ್ಡೋಜರ್ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಬಂಡೆಗಲ್ಲು ಅವರ ತಲೆ ಮೇಲೆ ಬಿದ್ದಿತ್ತು. ಅವರು ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ಮಿಲಿಟರಿ ಮೂಲಗಳು ತಿಳಿಸಿವೆ. ಬುಧವಾರ ಮೃತದೇಹ ಗ್ರಾಮಕ್ಕೆ ಬಂದ ನಂತರ ದುಃಖದ ವಾತಾವರಣ ಮಡುಗಟ್ಟಿತ್ತು.</p>.<p>ಅಂಕಲಗಿ ಪಟ್ಟಣದಿಂದ 6 ಕಿ.ಮೀ. ದೂರದಲ್ಲಿರುವ ಈರನಟ್ಟಿ ಗ್ರಾಮದವರೆಗೆ ಮೆರವಣಿಗೆ ಮಾಡಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಶಾಲಾ– ಕಾಲೇಜು ವಿದ್ಯಾರ್ಥಿಗಳು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಕಂಬನಿ ಮಿಡಿದರು.</p>.<p>ತಹಶೀಲ್ದಾರ್ ಮೋಹನ ಭಸ್ಮೆ, ಪೊಲೀಸ್ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಕಾಕ</strong>: ಜಮ್ಮು– ಕಾಶ್ಮೀರ ಕಣಿವೆಯ ಕಾರ್ಗಿಲ್ ಪ್ರದೇಶದಲ್ಲಿ ಸಂಭವಿಸಿದ ಅವಘಡದಲ್ಲಿ ತಲೆಮೇಲೆ ಕಲ್ಲುಬಂಡೆ ಉರುಳಿ ಪ್ರಾಣ ಕಳೆದುಕೊಂಡ, ತಾಲ್ಲೂಕಿನ ಈರನಟ್ಟಿ ಗ್ರಾಮದ ನಿವಾಸಿ, ಯೋಧ ಮಹೇಶ ನಿಂಗಪ್ಪ ವಾಲಿ (24) ಅವರ ಅಂತ್ಯಸಂಸ್ಕಾರ ಮಂಗಳವಾರ ನೆರವೇರಿತು.</p>.<p>ಮಹೇಶ ಅವರ ತಂದೆ ನಿಂಗಪ್ಪ ಕೂಡ ನಿವೃತ್ತ ಯೋಧರು. ಮಹೇಶ ಕೂಡ ತಮ್ಮ 18 ವರ್ಷ ತುಂಬುವಷ್ಟರಲ್ಲಿ ಮದ್ರಾಸ್ ಎಂಜಿನಿಯರಿಂಗ್ ರೆಜಿಮೆಂಟ್ನಲ್ಲಿ ನೌಕರಿ ಸೇರಿದ್ದರು. 6 ತಿಂಗಳ ಹಿಂದಷ್ಟೇ ಜಮ್ಮು– ಕಾಶ್ಮೀರ ಕಣಿವೆಯ ಕಾರ್ಗಿಲ್ಗೆ ವರ್ಗವಾಗಿದ್ದರು.</p>.<p>ಡಿ.14ರಂದು ಕಾರ್ಗಿಲ್ ದುರ್ಗಮ ಪ್ರದೇಶದಲ್ಲಿ ಬುಲ್ಡೋಜರ್ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಬಂಡೆಗಲ್ಲು ಅವರ ತಲೆ ಮೇಲೆ ಬಿದ್ದಿತ್ತು. ಅವರು ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ಮಿಲಿಟರಿ ಮೂಲಗಳು ತಿಳಿಸಿವೆ. ಬುಧವಾರ ಮೃತದೇಹ ಗ್ರಾಮಕ್ಕೆ ಬಂದ ನಂತರ ದುಃಖದ ವಾತಾವರಣ ಮಡುಗಟ್ಟಿತ್ತು.</p>.<p>ಅಂಕಲಗಿ ಪಟ್ಟಣದಿಂದ 6 ಕಿ.ಮೀ. ದೂರದಲ್ಲಿರುವ ಈರನಟ್ಟಿ ಗ್ರಾಮದವರೆಗೆ ಮೆರವಣಿಗೆ ಮಾಡಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಶಾಲಾ– ಕಾಲೇಜು ವಿದ್ಯಾರ್ಥಿಗಳು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಕಂಬನಿ ಮಿಡಿದರು.</p>.<p>ತಹಶೀಲ್ದಾರ್ ಮೋಹನ ಭಸ್ಮೆ, ಪೊಲೀಸ್ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>