ಅಥಣಿ: ‘ಲಿಂಗ ತಾರತಮ್ಯ ಮಾಡದೆ ಸಮಾನವಾಗಿ ಕಂಡಾಗ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ‘ ಎಂದು ಬಣಜವಾಡ ಪಿಯು ಕಾಲೇಜಿನ ಉಪನ್ಯಾಸಕಿ ಡಾ.ರಾಗಿಣಿ ಬಿ. ಪಾಟೀಲ ಹೇಳಿದರು.
ಇಲ್ಲಿನ ಸ್ವಾಮಿ ವಿವೇಕಾನಂದ ವಿದ್ಯಾವಿಕಾಸ ಸಂಸ್ಥೆಯಲ್ಲಿ ಭಾರತೀಯ ಜೈನ ಸಂಘಟನೆ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ತಂತ್ರಜ್ಞಾನ ಬೆಳೆದಂತೆ ಇಂದಿನ ಮಹಿಳೆಯರು ಶಿಕ್ಷಣ ಪಡೆದು ಅನೇಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ, ಹಕ್ಕುಗಳನ್ನು ಪಡೆಯಲು ಹೋರಾಟ ಅನಿವಾರ್ಯವಾಗಿದೆ’ ಎಂದರು.
ಜಾಧವಜಿ ಪ.ಪೂ. ಕಾಲೇಜಿನ ಉಪನ್ಯಾಸಕಿ ಡಾ.ಪ್ರಿಯಂವದಾ ಹುಲಗಬಾಳಿ, ಅಧ್ಯಕ್ಷತೆ ವಹಿಸಿದ್ದ ಭಾರತೀಯ ಜೈನ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಡಿ. ಮೇಕನಮರಡಿ ಮತ್ತು ಭಾರತೀಯ ಜೈನ ಸಂಘಟನೆಯ ಜಿಲ್ಲಾ ಸಂಚಾಲಕ ಅರುಣ ಯಲಗುದ್ರಿ ಮಾತನಾಡಿದರು.
ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಅಭಿನಂದನ ಪಡನಾಡ, ನಿತಿನ ಗೊಂಗಡಿ, ಸುನಂದಾ ಪಡನಾಡ, ಜಯಶ್ರೀ ಕಿನಗಿ, ಲಲಿತಾ ಮೇಕನಮರಡಿ, ಗುಂಡು ಇಜಾರಿ, ಪದ್ಮರಾಜ ಮುಧೋಳ, ಜಯಂತ ಉಪಾಧ್ಯ, ಭರತೇಶ ಶಿರಹಟ್ಟಿ, ಸಂತೋಷ್ ಬೊಮ್ಮಣ್ಣವರ ಉಪಸ್ಥಿತರಿದ್ದರು.
ಅರುಣಾ ಬಿ. ಅಸ್ಕಿ ಸ್ವಾಗತಿಸಿದರು. ಸುನಂದಾ ಪಾಟೀಲ ನಿರೂಪಿಸಿದರು. ಪ್ರತಿಭಾ ಓಗಿ ವಂದಿಸಿದರು.