<p><strong>ಬೆಳಗಾವಿ:</strong> ಸಂಜಯ್ ಘೋಡಾವತ್ ಸಮೂಹದ ವಿಮಾನ ಸೇವೆ ವಿಭಾಗವಾದ ಸ್ಟಾರ್ ಏರ್ ಜೋಧಪುರ-ಬೆಳಗಾವಿ ವಿಮಾನ ಕಾರ್ಯಾಚರಣೆಯನ್ನು ಫೆ. 16ರಿಂದ ಆರಂಭಿಸಲಿದೆ.</p>.<p>‘ಈ ವಿಮಾನಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮಾರ್ಗದಲ್ಲಿ ವಿಮಾನ ಘೋಷಿಸಿದಾಗಿನಿಂದಲೂ ಮಾಹಿತಿ ಕೋರಿ ಬಹಳ ಕರೆಗಳು ಬರುತ್ತಿವೆ. ಶೇ 100ರಷ್ಟು ಮುಂಗಡ ಬುಕಿಂಗ್ ಆಗಿದೆ’ ಎಂದು ಸಮೂಹದ ಅಧ್ಯಕ್ಷ ಸಂಜಯ್ ಘೋಡಾವತ್ ತಿಳಿಸಿದ್ದಾರೆ.</p>.<p>‘ಇಲ್ಲಿಂದ ಜೋಧಪುರ ತಲುಪಲು 1,440 ಕಿ.ಮೀ. ದೂರವನ್ನು 25 ಗಂಟೆ ಸಂಚರಿಸಬೇಕಿತ್ತು. ಜೋಧ್ಪುರ ಮತ್ತು ಬೆಳಗಾವಿ ಮಧ್ಯೆ ತಡೆರಹಿತ ವಿಮಾನ ಕಾರ್ಯಾಚರಣೆಯು ಪ್ರಾದೇಶಿಕ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ಮಾರ್ಗದಲ್ಲಿ ಯಾವುದೇ ಇತರ ವಿಮಾನಯಾನ ಸಂಸ್ಥೆಯು ಸೇವೆ ಒದಗಿಸುತ್ತಿಲ್ಲ’ ಎಂದು ಹೇಳಿದ್ದಾರೆ.</p>.<p>‘ಆರ್ಸಿಎಸ್-ಉಡಾನ್ ಅಡಿ 2ನೇ ಮತ್ತು 3ನೇ ಹಂತದ ನಗರಗಳನ್ನು ಸಂಪರ್ಕಿಸಲು ನಮಗೆ ಹೆಮ್ಮೆಯಾಗುತ್ತದೆ. ಇದು ಗ್ರಾಮೀಣ ಭಾರತವನ್ನು ಸಂಪರ್ಕಿಸುವ ನಮ್ಮ ನಿಜವಾದ ಧ್ಯೇಯವನ್ನು ಪ್ರತಿಫಲಿಸುತ್ತದೆ. ಅಜ್ಮೇರ್ (ಕೃಷ್ಣಗಢ) ಮಾರ್ಗಕ್ಕೆ ಸ್ವೀಕರಿಸಿದ ಅಪಾರ ಪ್ರತಿಕ್ರಿಯೆಯು, ಇತರ ನಗರಗಳಿಗೆ ಸಂಪರ್ಕಿಸಲು ಪ್ರೋತ್ಸಾಹಿಸಿದೆ. ಜೋಧಪುರ ಮಾರ್ಗವು ಈ ನಿಟ್ಟಿನಲ್ಲಿ ಒಂದು ಮಹತ್ವದ್ದಾಗಿದೆ. ಉಡಾನ್ ಯೋಜನೆಯಲ್ಲಿ ಕಾರ್ಯನಿರ್ವಹಿಸುವುದರಿಂದ ಇದು ಅತ್ಯಂತ ಕೈಗೆಟಕುವ ಬೆಲೆಯಲ್ಲಿದೆ. ಕೇವಲ 2 ಗಂಟೆಗಳಲ್ಲಿ ಇಲ್ಲಿಂದ ಜೋಧಪುರಕ್ಕೆ ತಲುಪಬಹುದು’ ಎಂದು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಸಂಜಯ್ ಘೋಡಾವತ್ ಸಮೂಹದ ವಿಮಾನ ಸೇವೆ ವಿಭಾಗವಾದ ಸ್ಟಾರ್ ಏರ್ ಜೋಧಪುರ-ಬೆಳಗಾವಿ ವಿಮಾನ ಕಾರ್ಯಾಚರಣೆಯನ್ನು ಫೆ. 16ರಿಂದ ಆರಂಭಿಸಲಿದೆ.</p>.<p>‘ಈ ವಿಮಾನಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮಾರ್ಗದಲ್ಲಿ ವಿಮಾನ ಘೋಷಿಸಿದಾಗಿನಿಂದಲೂ ಮಾಹಿತಿ ಕೋರಿ ಬಹಳ ಕರೆಗಳು ಬರುತ್ತಿವೆ. ಶೇ 100ರಷ್ಟು ಮುಂಗಡ ಬುಕಿಂಗ್ ಆಗಿದೆ’ ಎಂದು ಸಮೂಹದ ಅಧ್ಯಕ್ಷ ಸಂಜಯ್ ಘೋಡಾವತ್ ತಿಳಿಸಿದ್ದಾರೆ.</p>.<p>‘ಇಲ್ಲಿಂದ ಜೋಧಪುರ ತಲುಪಲು 1,440 ಕಿ.ಮೀ. ದೂರವನ್ನು 25 ಗಂಟೆ ಸಂಚರಿಸಬೇಕಿತ್ತು. ಜೋಧ್ಪುರ ಮತ್ತು ಬೆಳಗಾವಿ ಮಧ್ಯೆ ತಡೆರಹಿತ ವಿಮಾನ ಕಾರ್ಯಾಚರಣೆಯು ಪ್ರಾದೇಶಿಕ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ಮಾರ್ಗದಲ್ಲಿ ಯಾವುದೇ ಇತರ ವಿಮಾನಯಾನ ಸಂಸ್ಥೆಯು ಸೇವೆ ಒದಗಿಸುತ್ತಿಲ್ಲ’ ಎಂದು ಹೇಳಿದ್ದಾರೆ.</p>.<p>‘ಆರ್ಸಿಎಸ್-ಉಡಾನ್ ಅಡಿ 2ನೇ ಮತ್ತು 3ನೇ ಹಂತದ ನಗರಗಳನ್ನು ಸಂಪರ್ಕಿಸಲು ನಮಗೆ ಹೆಮ್ಮೆಯಾಗುತ್ತದೆ. ಇದು ಗ್ರಾಮೀಣ ಭಾರತವನ್ನು ಸಂಪರ್ಕಿಸುವ ನಮ್ಮ ನಿಜವಾದ ಧ್ಯೇಯವನ್ನು ಪ್ರತಿಫಲಿಸುತ್ತದೆ. ಅಜ್ಮೇರ್ (ಕೃಷ್ಣಗಢ) ಮಾರ್ಗಕ್ಕೆ ಸ್ವೀಕರಿಸಿದ ಅಪಾರ ಪ್ರತಿಕ್ರಿಯೆಯು, ಇತರ ನಗರಗಳಿಗೆ ಸಂಪರ್ಕಿಸಲು ಪ್ರೋತ್ಸಾಹಿಸಿದೆ. ಜೋಧಪುರ ಮಾರ್ಗವು ಈ ನಿಟ್ಟಿನಲ್ಲಿ ಒಂದು ಮಹತ್ವದ್ದಾಗಿದೆ. ಉಡಾನ್ ಯೋಜನೆಯಲ್ಲಿ ಕಾರ್ಯನಿರ್ವಹಿಸುವುದರಿಂದ ಇದು ಅತ್ಯಂತ ಕೈಗೆಟಕುವ ಬೆಲೆಯಲ್ಲಿದೆ. ಕೇವಲ 2 ಗಂಟೆಗಳಲ್ಲಿ ಇಲ್ಲಿಂದ ಜೋಧಪುರಕ್ಕೆ ತಲುಪಬಹುದು’ ಎಂದು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>