‘ಆರ್ಸಿಎಸ್-ಉಡಾನ್ ಅಡಿ 2ನೇ ಮತ್ತು 3ನೇ ಹಂತದ ನಗರಗಳನ್ನು ಸಂಪರ್ಕಿಸಲು ನಮಗೆ ಹೆಮ್ಮೆಯಾಗುತ್ತದೆ. ಇದು ಗ್ರಾಮೀಣ ಭಾರತವನ್ನು ಸಂಪರ್ಕಿಸುವ ನಮ್ಮ ನಿಜವಾದ ಧ್ಯೇಯವನ್ನು ಪ್ರತಿಫಲಿಸುತ್ತದೆ. ಅಜ್ಮೇರ್ (ಕೃಷ್ಣಗಢ) ಮಾರ್ಗಕ್ಕೆ ಸ್ವೀಕರಿಸಿದ ಅಪಾರ ಪ್ರತಿಕ್ರಿಯೆಯು, ಇತರ ನಗರಗಳಿಗೆ ಸಂಪರ್ಕಿಸಲು ಪ್ರೋತ್ಸಾಹಿಸಿದೆ. ಜೋಧಪುರ ಮಾರ್ಗವು ಈ ನಿಟ್ಟಿನಲ್ಲಿ ಒಂದು ಮಹತ್ವದ್ದಾಗಿದೆ. ಉಡಾನ್ ಯೋಜನೆಯಲ್ಲಿ ಕಾರ್ಯನಿರ್ವಹಿಸುವುದರಿಂದ ಇದು ಅತ್ಯಂತ ಕೈಗೆಟಕುವ ಬೆಲೆಯಲ್ಲಿದೆ. ಕೇವಲ 2 ಗಂಟೆಗಳಲ್ಲಿ ಇಲ್ಲಿಂದ ಜೋಧಪುರಕ್ಕೆ ತಲುಪಬಹುದು’ ಎಂದು ಮಾಹಿತಿ ನೀಡಿದ್ದಾರೆ.