<p><strong>ಬೈಲಹೊಂಗಲ</strong>: ಸಾವಿರಾರು ಎಕರೆ ಭೂಮಿಯಲ್ಲಿ ಎದೆ ಎತ್ತರಕ್ಕೆ ಬೆಳೆದಿದ್ದ ಹೆಸರು ಕಾಳು ಬೆಳೆ ಸತತ ಮಳೆಯಿಂದಾಗಿ ಈ ಬಾರಿಯೂ ನೀರು ಪಾಲಾಗಿದೆ.</p>.<p>ದೊಡವಾಡ, ಉಡಿಕೇರಿ, ಮಲ್ಲಮ್ಮನ ಬೆಳವಡಿ ಸೇರಿದಂತೆ ಸುತ್ತಲಿನ ಗ್ರಾಮಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಕಾಳು ಬೆಳೆಯುವ ಗ್ರಾಮ ಎಂಬ ಖ್ಯಾತಿ ಹೊಂದಿವೆ. ಈ ಬಾರಿ ದಾಖಲೆ ಪ್ರಮಾಣದಲ್ಲಿ ಹೆಸರು ಬರುವ ನಿರೀಕ್ಷೆ ಇತ್ತು. ಆದರೆ ರೈತರ ಕನಸು ಮಳೆ ನೀರಿನಲ್ಲೆ ಕೊಚ್ಚಿ ಹೋಗಿದೆ. ಜಮೀನುಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆ ನೀರು ಸಂಗ್ರಹವಾಗಿದೆ. ಇದರಿಂದ ಹೆಸರು ಕಾಳು ಮಾತ್ರವಲ್ಲದೇ ಹುರಳಿ, ಹತ್ತಿ, ಸೋಯಾಅವರೆಯೂ ಹಾಳಾಗುತ್ತಿದೆ.</p>.<p>‘ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿದೆ. ಪದೇ, ಪದೇ ಬೆಳೆ ಹಾನಿ ಆಗುತ್ತಿದ್ದರೆ ಒಕ್ಕಲುತನ ಹೇಗೆ ಮುಂದುವರಿಸಬೇಕು? ಹಾನಿ ಅನುಭವಿಸಿದ ಎಲ್ಲ ರೈತರಿಗೆ ತುರ್ತು ಪರಿಹಾರ ನೀಡಬೇಕು’ ಎಂದು ಹೊಸೂರಿನ ರೈತ ಎಫ್.ಎಸ್.ಸಿದ್ಧನಗೌಡರ ಆಗ್ರಹಿಸುತ್ತಾರೆ.</p>.<p>***</p>.<p><strong>ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿದೆ. ಪದೇ, ಪದೇ ಬೆಳೆ ಹಾನಿ ಆಗುತ್ತಿದ್ದರೆ ಒಕ್ಕಲುತನ ಹೇಗೆ ಮುಂದುವರಿಸಬೇಕು? ಹಾನಿ ಅನುಭವಿಸಿದ ಎಲ್ಲ ರೈತರಿಗೆ ತುರ್ತು ಪರಿಹಾರ ನೀಡಬೇಕು</strong></p>.<p><strong>-ಎಫ್.ಎಸ್.ಸಿದ್ಧನಗೌಡರ, ರೈತ, ಹೊಸೂರ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೈಲಹೊಂಗಲ</strong>: ಸಾವಿರಾರು ಎಕರೆ ಭೂಮಿಯಲ್ಲಿ ಎದೆ ಎತ್ತರಕ್ಕೆ ಬೆಳೆದಿದ್ದ ಹೆಸರು ಕಾಳು ಬೆಳೆ ಸತತ ಮಳೆಯಿಂದಾಗಿ ಈ ಬಾರಿಯೂ ನೀರು ಪಾಲಾಗಿದೆ.</p>.<p>ದೊಡವಾಡ, ಉಡಿಕೇರಿ, ಮಲ್ಲಮ್ಮನ ಬೆಳವಡಿ ಸೇರಿದಂತೆ ಸುತ್ತಲಿನ ಗ್ರಾಮಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಕಾಳು ಬೆಳೆಯುವ ಗ್ರಾಮ ಎಂಬ ಖ್ಯಾತಿ ಹೊಂದಿವೆ. ಈ ಬಾರಿ ದಾಖಲೆ ಪ್ರಮಾಣದಲ್ಲಿ ಹೆಸರು ಬರುವ ನಿರೀಕ್ಷೆ ಇತ್ತು. ಆದರೆ ರೈತರ ಕನಸು ಮಳೆ ನೀರಿನಲ್ಲೆ ಕೊಚ್ಚಿ ಹೋಗಿದೆ. ಜಮೀನುಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆ ನೀರು ಸಂಗ್ರಹವಾಗಿದೆ. ಇದರಿಂದ ಹೆಸರು ಕಾಳು ಮಾತ್ರವಲ್ಲದೇ ಹುರಳಿ, ಹತ್ತಿ, ಸೋಯಾಅವರೆಯೂ ಹಾಳಾಗುತ್ತಿದೆ.</p>.<p>‘ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿದೆ. ಪದೇ, ಪದೇ ಬೆಳೆ ಹಾನಿ ಆಗುತ್ತಿದ್ದರೆ ಒಕ್ಕಲುತನ ಹೇಗೆ ಮುಂದುವರಿಸಬೇಕು? ಹಾನಿ ಅನುಭವಿಸಿದ ಎಲ್ಲ ರೈತರಿಗೆ ತುರ್ತು ಪರಿಹಾರ ನೀಡಬೇಕು’ ಎಂದು ಹೊಸೂರಿನ ರೈತ ಎಫ್.ಎಸ್.ಸಿದ್ಧನಗೌಡರ ಆಗ್ರಹಿಸುತ್ತಾರೆ.</p>.<p>***</p>.<p><strong>ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿದೆ. ಪದೇ, ಪದೇ ಬೆಳೆ ಹಾನಿ ಆಗುತ್ತಿದ್ದರೆ ಒಕ್ಕಲುತನ ಹೇಗೆ ಮುಂದುವರಿಸಬೇಕು? ಹಾನಿ ಅನುಭವಿಸಿದ ಎಲ್ಲ ರೈತರಿಗೆ ತುರ್ತು ಪರಿಹಾರ ನೀಡಬೇಕು</strong></p>.<p><strong>-ಎಫ್.ಎಸ್.ಸಿದ್ಧನಗೌಡರ, ರೈತ, ಹೊಸೂರ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>