ದೊಡವಾಡ, ಉಡಿಕೇರಿ, ಮಲ್ಲಮ್ಮನ ಬೆಳವಡಿ ಸೇರಿದಂತೆ ಸುತ್ತಲಿನ ಗ್ರಾಮಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಕಾಳು ಬೆಳೆಯುವ ಗ್ರಾಮ ಎಂಬ ಖ್ಯಾತಿ ಹೊಂದಿವೆ. ಈ ಬಾರಿ ದಾಖಲೆ ಪ್ರಮಾಣದಲ್ಲಿ ಹೆಸರು ಬರುವ ನಿರೀಕ್ಷೆ ಇತ್ತು. ಆದರೆ ರೈತರ ಕನಸು ಮಳೆ ನೀರಿನಲ್ಲೆ ಕೊಚ್ಚಿ ಹೋಗಿದೆ. ಜಮೀನುಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆ ನೀರು ಸಂಗ್ರಹವಾಗಿದೆ. ಇದರಿಂದ ಹೆಸರು ಕಾಳು ಮಾತ್ರವಲ್ಲದೇ ಹುರಳಿ, ಹತ್ತಿ, ಸೋಯಾಅವರೆಯೂ ಹಾಳಾಗುತ್ತಿದೆ.