‘ರೈತರ ಬವಣೆಯ ಬದುಕು ಬದಲಾಗಬೇಕು. ಅವರು ಆಶಾದಾಯಕ ಜೀವನ ಸಾಗಿಸುವಂತಾಗಬೇಕು. ಸರ್ಕಾರಿ ನೌಕರನಿಗೆ ತಿಂಗಳ ವೇತನ ಬರುವಂತೆ ರೈತರಿಗೂ ತಿಂಗಳ ಆದಾಯ ಬರುವಂತ ರೀತಿಯಲ್ಲಿ ಕೈತುಂಬಾ ಕೆಲಸ ಇರಬೇಕು. ಅವರಿಗೆ ವರ್ಷವಿಡೀ ಆದಾಯ ಬರುವಂತ ಯೋಜನೆ ಜಾರಿಗೆ ತರಬೇಕು ಎಂಬ ಮಹತ್ವಾಕಾಂಕ್ಷೆಯಿಂದಾಗಿ ನಾನು ರಾಜಕೀಯಕ್ಕೆ ಬಂದೆ. ಈ ನಿಟ್ಟಿನಲ್ಲಿ ಶ್ರಮ ವಹಿಸುತ್ತಿದ್ದೇನೆ. ನನೆಗುದಿಗೆ ಬಿದ್ದಿದ್ದ ಹಿಪ್ಪರಗಿ ಆಣೆಕಟ್ಟು ಯೋಜನೆ, ಕರಿಮಸೂತಿ ಏತ ನೀರಾವರಿ ಯೋಜನೆಗೆ ಜಾರಿಗೆ ತರುವಲ್ಲಿ ಸಫಲನಾಗಿದ್ದೇನೆ’ ಎಂದು ತಿಳಿಸಿದರು.