ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಿಂದ ಮಂಗಳವಾರ ಬೆಂಗಳೂರಿಗೆ ತೆರಳುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಭೆ ಇದೆ ಬೆಂಗಳೂರಿಗೆ ಬಾ ಎಂದು ಮುಖ್ಯಮಂತ್ರಿ ಕರೆ ಮಾಡಿದ್ದರು. ಹೀಗಾಗಿ ಹೋಗುತ್ತಿದ್ದೇನೆ. ವಾರದಲ್ಲಿ 2–3 ಬಾರಿ ಮುಖ್ಯಮಂತ್ರಿ ಕರೆ ಮಾಡುತ್ತಿರುತ್ತಾರೆ; ಏನೇನೋ ಮಾತನಾಡುತ್ತಿರುತ್ತೇವೆ. ಅದನ್ನೆಲ್ಲಾ ಹೇಳುವುದಕ್ಕೆ ಬರುವುದಿಲ್ಲ’ ಎಂದರು.