'ಕಾಂಗ್ರೆಸ್ ಉಸಿರು ನಿಲ್ಲಿಸುತ್ತೇವೆ' ಎಂಬ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಎಂಬ ಹೇಳಿಕೆಗೆ,'ಪಾಪ ಅವರಿಗಾದ ನೋವಿನಿಂದ ಆ ರೀತಿ ಮಾತನಾಡುತ್ತಿದ್ದಾರೆ. ಬಿಜೆಪಿಯವರ ಮೇಲೆ ಹೇಳಕ್ಕಾಗಲ್ಲವಲ್ಲ? ದುಃಖ, ದುಮ್ಮಾನ, ದಾಳಿ, ಮಾನಸಿಕ ಹಿಂಸೆ, ರಾಜೀನಾಮೆ ಇವೆಲ್ಲಾ ಹೇಳಕ್ಕಾಗಲ್ಲವಲ್ಲ? ಅವರ ಕೋಪ ತಾಪ ಹೊರಗೆ ಹಾಕಬೇಕಲ್ಲ. ಕಾಂಗ್ರೆಸ್ನವರು ಉಚಿತವಾಗಿದ್ದೀವೆಂದು ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮನ್ನು ಶಾಶ್ವತವಾಗಿ ವಿರೋಧಪಕ್ಷದಲ್ಲಿ ಕೂರಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಬಿಜೆಪಿಯಲ್ಲಿ ಏನಾಗ್ತಿದೆ ಎಂದು ಅವರ ಸಚಿವರು ಹಾಗೂ ಶಾಸಕರೆಲ್ಲರಿಗೂ ಗೊತ್ತಿದೆ. ನಾನ್ಯಾಕೆ ಮಾತನಾಡಲಿ?' ಎಂದು ಕೇಳಿದರು.