<p><strong>ಘಟಪ್ರಭಾ:</strong> ಸಮೀಪದ ಗೋಕಾಕ್ ಫಾಲ್ಸ್ನಲ್ಲಿ ಜಕಣಾಚಾರಿಯಿಂದ ನಿರ್ಮಿತವಾದ ತಡಸಲ ಮಹಾಲಿಂಗೇಶ್ವರನ ಜಾತ್ರೆಯು ಶಿವರಾತ್ರಿ ಅಂಗವಾಗಿ ಮಾರ್ಚ್ 7ರಿಂದ ಮೂರು ದಿನ ವೈಭೌವದಿಂದ ನಡೆಯಲಿದೆ.</p>.<p>ದೇವಸ್ಥಾನದ ಪರಿಸರವನ್ನು ಶುಚಿಗೊಳಿಸಿ, ಮನೆಯಂಗಳದೆದುರು ರಂಗೋಲಿ, ತೋರಣಗಳಿಂದ ಅಲಂಕರಿಸಲಾಗಿದೆ. ಮಾರ್ಚ್ 8ರ ಸಂಜೆ ವೈಭವ ರಥೋತ್ಸವ ವಾದ್ಯಮೇಳ ಹಾಗೂ ಜಯಘೋಷಗಳಿಂದ ಪ್ರತಿ ಮನೆಯ ಮುಂದೆ ಸಾಗುತ್ತದೆ ಮಂದಿರಕ್ಕೆ ಮರಳುತ್ತದೆ.</p>.<p>ಮಾರ್ಚ್ 7ರಂದು ಸಂಜೆ 6 ಗಂಟೆಗೆ ಯರಗಲ್ಮಠದ ಅಭಿನಂದನ ಸ್ವಾಮೀಜಿ ಜಾತ್ರಾ ಮಹೋತ್ಸವ ಉದ್ಘಾಟಿಸಲಿದ್ದಾರೆ.</p>.<p>8ರಂದು ಬೆಳಿಗ್ಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ನೈವೇದ್ಯ, ನಂತರ ಭಜನೆ ನಡೆಯಲಿದೆ. ಸಂಜೆ 4.30ಕ್ಕೆ ಮರಡಿಮಠದ ಪವಾಡೇಶ್ವರಸ್ವಾಮಿ ಸಾನ್ನಿಧ್ಯದಲ್ಲಿ ನಡೆಯುವ ರಥೋತ್ಸವಕ್ಕೆ ಶಾಸಕ ರಮೇಶ ಜಾರಕಿಹೊಳಿ ಚಾಲನೆ ನೀಡಲಿದ್ದಾರೆ.</p>.<p>9ರಂದು ಬೆಳಗ್ಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ನೈವೇದ್ಯ ನಂತರ ಭಜನೆ ಹಾಗೂ ಪಲ್ಲಕ್ಕಿ ಉತ್ಸವವು ಶ್ರೀರಾಮ ಮಂದಿರದಿಂದ ಮಹಾಲಿಂಗೇಶ್ವರ ಗುಡಿಯವರೆಗೆ ನಡೆಯಲಿದ್ದು, ವಾದ್ಯಮೇಳದೊಂದಿಗೆ ಅಂಬಲಿ ಕೊಡಗಳನ್ನು ತರಲಾಗುವುದು. ನಂತರ ಮಹಾಪ್ರಸಾದ ವಿತರಣೆ ನಡೆಯಲಿದೆ.</p>.<p>ಇಲ್ಲಿ ನೆಲೆಸಿರುವ ಕಾರ್ಮಿಕರು ಎಲ್ಲ ಜಾತಿ, ಜನಾಂಗದವರು ಈ ಜಾತ್ರಾ ಮಹೋತ್ಸವದಲ್ಲಿ ಶ್ರದ್ಧೆಯಿಂದ ಭಾವಗವಹಿಸುವ ಮೂಲಕ ಸೌಹಾರ್ದ ಮೆರೆಯುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಘಟಪ್ರಭಾ:</strong> ಸಮೀಪದ ಗೋಕಾಕ್ ಫಾಲ್ಸ್ನಲ್ಲಿ ಜಕಣಾಚಾರಿಯಿಂದ ನಿರ್ಮಿತವಾದ ತಡಸಲ ಮಹಾಲಿಂಗೇಶ್ವರನ ಜಾತ್ರೆಯು ಶಿವರಾತ್ರಿ ಅಂಗವಾಗಿ ಮಾರ್ಚ್ 7ರಿಂದ ಮೂರು ದಿನ ವೈಭೌವದಿಂದ ನಡೆಯಲಿದೆ.</p>.<p>ದೇವಸ್ಥಾನದ ಪರಿಸರವನ್ನು ಶುಚಿಗೊಳಿಸಿ, ಮನೆಯಂಗಳದೆದುರು ರಂಗೋಲಿ, ತೋರಣಗಳಿಂದ ಅಲಂಕರಿಸಲಾಗಿದೆ. ಮಾರ್ಚ್ 8ರ ಸಂಜೆ ವೈಭವ ರಥೋತ್ಸವ ವಾದ್ಯಮೇಳ ಹಾಗೂ ಜಯಘೋಷಗಳಿಂದ ಪ್ರತಿ ಮನೆಯ ಮುಂದೆ ಸಾಗುತ್ತದೆ ಮಂದಿರಕ್ಕೆ ಮರಳುತ್ತದೆ.</p>.<p>ಮಾರ್ಚ್ 7ರಂದು ಸಂಜೆ 6 ಗಂಟೆಗೆ ಯರಗಲ್ಮಠದ ಅಭಿನಂದನ ಸ್ವಾಮೀಜಿ ಜಾತ್ರಾ ಮಹೋತ್ಸವ ಉದ್ಘಾಟಿಸಲಿದ್ದಾರೆ.</p>.<p>8ರಂದು ಬೆಳಿಗ್ಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ನೈವೇದ್ಯ, ನಂತರ ಭಜನೆ ನಡೆಯಲಿದೆ. ಸಂಜೆ 4.30ಕ್ಕೆ ಮರಡಿಮಠದ ಪವಾಡೇಶ್ವರಸ್ವಾಮಿ ಸಾನ್ನಿಧ್ಯದಲ್ಲಿ ನಡೆಯುವ ರಥೋತ್ಸವಕ್ಕೆ ಶಾಸಕ ರಮೇಶ ಜಾರಕಿಹೊಳಿ ಚಾಲನೆ ನೀಡಲಿದ್ದಾರೆ.</p>.<p>9ರಂದು ಬೆಳಗ್ಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ನೈವೇದ್ಯ ನಂತರ ಭಜನೆ ಹಾಗೂ ಪಲ್ಲಕ್ಕಿ ಉತ್ಸವವು ಶ್ರೀರಾಮ ಮಂದಿರದಿಂದ ಮಹಾಲಿಂಗೇಶ್ವರ ಗುಡಿಯವರೆಗೆ ನಡೆಯಲಿದ್ದು, ವಾದ್ಯಮೇಳದೊಂದಿಗೆ ಅಂಬಲಿ ಕೊಡಗಳನ್ನು ತರಲಾಗುವುದು. ನಂತರ ಮಹಾಪ್ರಸಾದ ವಿತರಣೆ ನಡೆಯಲಿದೆ.</p>.<p>ಇಲ್ಲಿ ನೆಲೆಸಿರುವ ಕಾರ್ಮಿಕರು ಎಲ್ಲ ಜಾತಿ, ಜನಾಂಗದವರು ಈ ಜಾತ್ರಾ ಮಹೋತ್ಸವದಲ್ಲಿ ಶ್ರದ್ಧೆಯಿಂದ ಭಾವಗವಹಿಸುವ ಮೂಲಕ ಸೌಹಾರ್ದ ಮೆರೆಯುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>