‘ಮೊದಲ ಹಾಗೂ 2ನೇ ಹಂತದ ಟ್ರಯಲ್ನಲ್ಲಿ ಕೆಲವು ಸ್ವಯಂಸೇವಕರು ಹೊರ ಜಿಲ್ಲೆಗಳವರೂ ಇದ್ದರು. ಇದರಿಂದಾಗಿ ಕೆಲವು ಪರೀಕ್ಷೆಗಳ ಸಂದರ್ಭದಲ್ಲಿ ತೊಡಕಾಯಿತು. ಅವರು ಸಕಾಲಕ್ಕೆ ಬರುವುದು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, 3ನೇ ಹಂತದಲ್ಲಿ ಸ್ಥಳೀಯರನ್ನು ಟ್ರಯಲ್ಗೆ ಒಳಪಡಿಸಲಾಗುವುದು. ದೇಶದಾದ್ಯಂತ ಈ ಹಂತದಲ್ಲಿ 25 ಕೇಂದ್ರಗಳ 28 ಸಾವಿರ ಮಂದಿಯನ್ನು ಒಳಪಡಿಸಲು ಉದ್ದೇಶಿಸಲಾಗಿದೆ’ ಎಂದು ಮಾಹಿತಿ ನೀಡಿದರು.