ಪಾಲಿಕೆ ಆವರಣದಲ್ಲಿ ರಾಷ್ಟ್ರಧ್ವಜ ಹಾರಿಸಲಾಗುತ್ತಿದೆ. ಹೋರಾಟಗಾರರು ಕನ್ನಡ ಬಾವುಟವನ್ನು ರಾಷ್ಟ್ರಧ್ವಜಕ್ಕೆ ಸಮನಾಗಿ (ಎತ್ತರ) ಹಾರಿಸಿದ್ದರು. ತೆರವುಗೊಳಿಸದಂತೆ ಕಾಯುವುದಕ್ಕಾಗಿ ಸ್ಥಳದಲ್ಲೇ ಕಾದು ಕುಳಿತಿದ್ದರು. ಮಂಗಳವಾರ ತಡ ರಾತ್ರಿ ಗುಂಡಿ ತೋಡಿ ಸ್ತಂಭವನ್ನು ನೆಟ್ಟು, ಸುತ್ತಲೂ ಕಾಂಕ್ರೀಟ್ ಹಾಕಿ ಮತ್ತಷ್ಟು ಭದ್ರಪಡಿಸಿದ್ದಾರೆ. ಸಮೀಪದಲ್ಲೇ ಇರುವ ರಾಷ್ಟ್ರಧ್ವಜಕ್ಕಿಂತ ಕೆಳಮಟ್ಟದಲ್ಲಿ ಕನ್ನಡ ಬಾವುಟ ಹಾರಾಡುವಂತೆ ಮಾಡಿದ್ದಾರೆ. ಬಳಿಕ ಅಲ್ಲಿಂದ ತೆರಳಿದ್ದಾರೆ.