ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಹಾರೂಗೇರಿಯ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಸಾಗಿತು
ಕಣ್ಮನಸೆಳೆದ ಮೆರವಣಿಗೆ
ಕನ್ನಡ ಹಬ್ಬದ ಸಡಗರದಲ್ಲಿ ಇಡೀ ಹಾರೂಗೇರಿ ಪಟ್ಟಣ ಮಿಂದೆದ್ದಿತು. ಬೆಳಿಗ್ಗೆ ನಡೆದ ಸರ್ವಾಧ್ಯಕ್ಷರ ಮೆರವಣಿಗೆ ಕಣ್ಮನಸೆಳೆಯಿತು. ವಿವಿಧ ರೂಪಕಗಳು ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ತಂದವು. ಜಂಬಗಿ ಆಸ್ಪತ್ರೆಯಿಂದ ಹೊರಟ ಮೆರವಣಿಗೆ ಬಿ.ಆರ್.ಅಂಬೇಡ್ಕರ್ ವೃತ್ತ ವಿಶ್ವಕರ್ಮ ವೃತ್ತ ಸಂಗೊಳ್ಳಿ ರಾಯಣ್ಣ ವೃತ್ತ ಚನ್ನವೃಷಬೇಂದ್ರ ವೃತ್ತ ಮಾರ್ಗವಾಗಿ ಸಾಗಿ ಸಮ್ಮೇಳನದ ವೇದಿಕೆ ತಲುಪಿತು.