‘ಕುರಿ ಮಾಂಸ, ಮಾಂಸದಿಂದ ತಯಾರಿಸಿದ ಖಾದ್ಯಗಳ ಮಾರಾಟ ನಮ್ಮ ಕಸುಬಾಗಿದೆ. ಹೀಗಾಗಿ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಮಾಂಸದ ಮಳಿಗೆ ಆರಂಭಿಸಲು ನೀಡಲಾಗುವ ಸಹಾಯಧನವನ್ನು ನಮ್ಮ ಸಮಾಜದವರಿಗೂ ವಿಸ್ತರಿಸಬೇಕು. ಕಾಟಿಕ, ಖಾಟಿಕ, ಕಟುಕ, ಕಟಕ ಎಂದು ಕರೆಯಲಾಗುವ ನಮ್ಮ ಸಮಾಜದವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಬೇಕು. ಅವರಿಗೆ ಸಿಗುವ ಎಲ್ಲ ಶೈಕ್ಷಣಿಕ, ಸಮಾಜಿಕ, ಆರ್ಥಿಕ, ರಾಜಕೀಯ ಸೌಲಭ್ಯಗಳನ್ನು ನಮಗೂ ಒದಗಿಸಬೇಕು’ ಎಂದು ಒತ್ತಾಯಿಸಿದರು.