<p><strong>ಖಾನಾಪುರ:</strong> ರಸ್ತೆ, ಸೇತುವೆ ಸೇರಿ ಮೂಲಸೌಲಭ್ಯ ವಂಚಿತ ತಾಲ್ಲೂಕಿನ ನೇರಸಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಗಳಾ ಗ್ರಾಮದ ನಿವಾಸಿ, ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಗ್ರಾಮಸ್ಥರು ಹೊತ್ತುಕೊಂಡು 8 ಕಿ.ಮೀ ನಡೆದಿದ್ದಾರೆ.</p>.<p>‘ಗ್ರಾಮದ ಸುತ್ತಲ ಕಾಡಿನಲ್ಲಿ ಕರಡಿ, ಹುಲಿ, ಚಿರತೆ ಸೇರಿ ವನ್ಯಮೃಗಗಳಿವೆ. ಈಗ ಬಿಟ್ಟೂಬಿಡದೇ ಮಳೆ ಆಗುತ್ತಿದೆ. ಕೊಂಗಳಾ ಗ್ರಾಮಕ್ಕೆ ತೆರಳುವ ರಸ್ತೆಯ ಮೇಲಿನ ಭಂಡೂರಿ ಹಳ್ಳ ಮತ್ತು ಮಹದಾಯಿ ನದಿಗಳಲ್ಲಿ ನೀರು ಪ್ರವಾಹೋಪಾದಿಯಲ್ಲಿ ಹರಿಯುತ್ತಿದೆ.</p>.<p>‘ಕುರ್ಚಿ, ಕಟ್ಟಿಗೆಯ ವ್ಯವಸ್ಥೆ ಮಾಡಿಕೊಂಡು ಗ್ರಾಮದ ವೆಂಕಟ ಗಾಂವಕರ ಅವರನ್ನು 6 ಮಂದಿ ಹೊತ್ತುಕೊಂಡು ಸಾಗಿದೆವು. ಮುಖ್ಯ ರಸ್ತೆ ತಲುಪಿದ ಬಳಿಕ, ಅಲ್ಲಿಂದ ವಾಹನದ ಮೂಲಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದೆವು’ ಎಂದು ಗ್ರಾಮಸ್ಥರು ತಿಳಿಸಿದರು.</p>.<p>‘ಕಳೆದ ವರ್ಷ ಭೀಮಗಡ ವನ್ಯಧಾಮದ ಅಮಗಾಂವ ಗ್ರಾಮದ ಮಹಿಳೆಯೊಬ್ಬರಿಗೆ ಅನಾರೋಗ್ಯ ಕಾಡಿದ್ದರಿಂದ ಹೀಗೇ ಹೊತ್ತುಕೊಂಡು 10 ಕಿ.ಮೀ ಸಾಗಿದ್ದೆವು’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ರಾಹೂತ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಖಾನಾಪುರ:</strong> ರಸ್ತೆ, ಸೇತುವೆ ಸೇರಿ ಮೂಲಸೌಲಭ್ಯ ವಂಚಿತ ತಾಲ್ಲೂಕಿನ ನೇರಸಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಗಳಾ ಗ್ರಾಮದ ನಿವಾಸಿ, ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಗ್ರಾಮಸ್ಥರು ಹೊತ್ತುಕೊಂಡು 8 ಕಿ.ಮೀ ನಡೆದಿದ್ದಾರೆ.</p>.<p>‘ಗ್ರಾಮದ ಸುತ್ತಲ ಕಾಡಿನಲ್ಲಿ ಕರಡಿ, ಹುಲಿ, ಚಿರತೆ ಸೇರಿ ವನ್ಯಮೃಗಗಳಿವೆ. ಈಗ ಬಿಟ್ಟೂಬಿಡದೇ ಮಳೆ ಆಗುತ್ತಿದೆ. ಕೊಂಗಳಾ ಗ್ರಾಮಕ್ಕೆ ತೆರಳುವ ರಸ್ತೆಯ ಮೇಲಿನ ಭಂಡೂರಿ ಹಳ್ಳ ಮತ್ತು ಮಹದಾಯಿ ನದಿಗಳಲ್ಲಿ ನೀರು ಪ್ರವಾಹೋಪಾದಿಯಲ್ಲಿ ಹರಿಯುತ್ತಿದೆ.</p>.<p>‘ಕುರ್ಚಿ, ಕಟ್ಟಿಗೆಯ ವ್ಯವಸ್ಥೆ ಮಾಡಿಕೊಂಡು ಗ್ರಾಮದ ವೆಂಕಟ ಗಾಂವಕರ ಅವರನ್ನು 6 ಮಂದಿ ಹೊತ್ತುಕೊಂಡು ಸಾಗಿದೆವು. ಮುಖ್ಯ ರಸ್ತೆ ತಲುಪಿದ ಬಳಿಕ, ಅಲ್ಲಿಂದ ವಾಹನದ ಮೂಲಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದೆವು’ ಎಂದು ಗ್ರಾಮಸ್ಥರು ತಿಳಿಸಿದರು.</p>.<p>‘ಕಳೆದ ವರ್ಷ ಭೀಮಗಡ ವನ್ಯಧಾಮದ ಅಮಗಾಂವ ಗ್ರಾಮದ ಮಹಿಳೆಯೊಬ್ಬರಿಗೆ ಅನಾರೋಗ್ಯ ಕಾಡಿದ್ದರಿಂದ ಹೀಗೇ ಹೊತ್ತುಕೊಂಡು 10 ಕಿ.ಮೀ ಸಾಗಿದ್ದೆವು’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ರಾಹೂತ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>