<p>ಕೌಜಲಗಿ: ‘ಜಾನಪದ ಕಲಾವಿದರು ನಾಡಿನ ಸಾಂಸ್ಕೃತಿಕ ರಾಯಭಾರಿಗಳಾಗಿದ್ದಾರೆ. ಅವರು ಆರ್ಥಿಕವಾಗಿ ಬಡವರಾಗಿದ್ದರೂ ಕಲಾ ಶ್ರೀಮಂತರು’ ಎಂದು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಸಿ.ಕೆ. ನಾವಲಗಿ ಹೇಳಿದರು.</p>.<p>ಇಲ್ಲಿನ ಬಲಭೀಮ ದೇವಸ್ಥಾನ ಆವರಣದಲ್ಲಿ ಜಾನಪದ ಪರಿಷತ್ತಿನ ವತಿಯಿಂದ ಶುಕ್ರವಾರ ನಡೆದ ‘ಕೊರೊನಾ: ಜಾನಪದ ಕಲಾವಿದರ ಬದುಕು-ಒಂದು ಚಿಂತನೆ’ ಹಾಗೂ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಸರ್ಕಾರವು ಜಾನಪದ ಕಲಾವಿದರಿಗೆ ₹ 2ಸಾವಿರ ಸಹಾಯಧನ ಕೊಡುತ್ತಿದೆ. ಈಗಾಗಲೆ ಕೆಲವರು ಫಲಾನುಭವಿಗಳಾಗಿದ್ದಾರೆ. ಎಲ್ಲರಿಗೂ ಸಹಾಯಧನ ಬೇಗ ಬಿಡುಗಡೆ ಆಗಬೇಕು’ ಎಂದು ಒತ್ತಾಯಿಸಿದರು.</p>.<p>ಕೌಜಲಗಿ ನಿಂಗಮ್ಮ ಪ್ರತಿಷ್ಠಾನದ ಅಧ್ಯಕ್ಷ ಸುಭಾಸ ಕೌಜಲಗಿ ಮಾತನಾಡಿದರು.</p>.<p>ಗೋಕಾಕ ಪ್ರಭಾ ಶುಗರ್ಸ್ ನಿರ್ದೇಶಕ ಎಂ.ಆರ್. ಭೋವಿ ತಾಳ ನುಡಿಸಿ ಕಾರ್ಯಕ್ರಮ ಉದ್ಘಾಟಿಸಿದರು.</p>.<p>ಗ್ರಾಮ ಪಂಚಾಯಿತಿ ಸದಸ್ಯ ರವಿ ಪರುಶೆಟ್ಟಿ ಕಿಟ್ ವಿತರಿಸಿದರು. ಕೌಜಲಗಿ, ಬೆಟಗೇರಿ, ರಡ್ಡೇರಟ್ಟಿ, ಮನ್ನಿಕೇರಿ, ಗೋಸಬಾಳ, ಬುದ್ನಿ, ನುಗ್ಗಾನಟ್ಟಿ, ಅಕ್ಕಿಸಾಗರ ಗ್ರಾಮಗಳ 100 ಕಲಾವಿದರಿಗೆ ಕಿಟ್ ವಿತರಿಸಲಾಯಿತು.</p>.<p>ತಾಲ್ಲೂಕು ಪಂಚಾಯಿತಿ ಸದಸ್ಯ ಶಾಂತಪ್ಪ ಹಿರೇಮೇತ್ರಿ, ಪಿಕೆಪಿಎಸ್ ಅಧ್ಯಕ್ಷ ಗಂಗಾಧರ ಲೋಕನ್ನವರ, ವಿನುತಾ ಚನ್ನಬಸವ ನಾವಲಗಿ, ಮಂಗಲಾದೇವಿ ಈ. ಬೆಟಗೇರಿ, ಕಜಾಪ ಕಾರ್ಯದರ್ಶಿ ಈಶ್ವರಚಂದ್ರ ಬೆಟಗೇರಿ, ಕಾರ್ಯಕ್ರಮ ಸಂಯೋಜಕ ಪ್ರಕಾಶ ಕೋಟಿನತೋಟ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೌಜಲಗಿ: ‘ಜಾನಪದ ಕಲಾವಿದರು ನಾಡಿನ ಸಾಂಸ್ಕೃತಿಕ ರಾಯಭಾರಿಗಳಾಗಿದ್ದಾರೆ. ಅವರು ಆರ್ಥಿಕವಾಗಿ ಬಡವರಾಗಿದ್ದರೂ ಕಲಾ ಶ್ರೀಮಂತರು’ ಎಂದು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಸಿ.ಕೆ. ನಾವಲಗಿ ಹೇಳಿದರು.</p>.<p>ಇಲ್ಲಿನ ಬಲಭೀಮ ದೇವಸ್ಥಾನ ಆವರಣದಲ್ಲಿ ಜಾನಪದ ಪರಿಷತ್ತಿನ ವತಿಯಿಂದ ಶುಕ್ರವಾರ ನಡೆದ ‘ಕೊರೊನಾ: ಜಾನಪದ ಕಲಾವಿದರ ಬದುಕು-ಒಂದು ಚಿಂತನೆ’ ಹಾಗೂ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಸರ್ಕಾರವು ಜಾನಪದ ಕಲಾವಿದರಿಗೆ ₹ 2ಸಾವಿರ ಸಹಾಯಧನ ಕೊಡುತ್ತಿದೆ. ಈಗಾಗಲೆ ಕೆಲವರು ಫಲಾನುಭವಿಗಳಾಗಿದ್ದಾರೆ. ಎಲ್ಲರಿಗೂ ಸಹಾಯಧನ ಬೇಗ ಬಿಡುಗಡೆ ಆಗಬೇಕು’ ಎಂದು ಒತ್ತಾಯಿಸಿದರು.</p>.<p>ಕೌಜಲಗಿ ನಿಂಗಮ್ಮ ಪ್ರತಿಷ್ಠಾನದ ಅಧ್ಯಕ್ಷ ಸುಭಾಸ ಕೌಜಲಗಿ ಮಾತನಾಡಿದರು.</p>.<p>ಗೋಕಾಕ ಪ್ರಭಾ ಶುಗರ್ಸ್ ನಿರ್ದೇಶಕ ಎಂ.ಆರ್. ಭೋವಿ ತಾಳ ನುಡಿಸಿ ಕಾರ್ಯಕ್ರಮ ಉದ್ಘಾಟಿಸಿದರು.</p>.<p>ಗ್ರಾಮ ಪಂಚಾಯಿತಿ ಸದಸ್ಯ ರವಿ ಪರುಶೆಟ್ಟಿ ಕಿಟ್ ವಿತರಿಸಿದರು. ಕೌಜಲಗಿ, ಬೆಟಗೇರಿ, ರಡ್ಡೇರಟ್ಟಿ, ಮನ್ನಿಕೇರಿ, ಗೋಸಬಾಳ, ಬುದ್ನಿ, ನುಗ್ಗಾನಟ್ಟಿ, ಅಕ್ಕಿಸಾಗರ ಗ್ರಾಮಗಳ 100 ಕಲಾವಿದರಿಗೆ ಕಿಟ್ ವಿತರಿಸಲಾಯಿತು.</p>.<p>ತಾಲ್ಲೂಕು ಪಂಚಾಯಿತಿ ಸದಸ್ಯ ಶಾಂತಪ್ಪ ಹಿರೇಮೇತ್ರಿ, ಪಿಕೆಪಿಎಸ್ ಅಧ್ಯಕ್ಷ ಗಂಗಾಧರ ಲೋಕನ್ನವರ, ವಿನುತಾ ಚನ್ನಬಸವ ನಾವಲಗಿ, ಮಂಗಲಾದೇವಿ ಈ. ಬೆಟಗೇರಿ, ಕಜಾಪ ಕಾರ್ಯದರ್ಶಿ ಈಶ್ವರಚಂದ್ರ ಬೆಟಗೇರಿ, ಕಾರ್ಯಕ್ರಮ ಸಂಯೋಜಕ ಪ್ರಕಾಶ ಕೋಟಿನತೋಟ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>