ಎಸ್.ವಿ.ಎಂ ಪದವಿ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಗೋವಿಂದರೆಡ್ಡಿ ಅವರು ಕೆಎಎಸ್ ಪರೀಕ್ಷೆ ಪಾಸಾಗಿ ಉಪವಿಭಾಗಾಧಿಕಾರಿಯಾದದ್ದು ರಾಧಿಕಾ ಅವರಿಗೆ ಪ್ರೇರಣೆಯಾಯಿತು. ತಮ್ಮ ಈ ಸಾಧನೆಗೆ ತಂದೆ, ತಾಯಿ, ಅತ್ತೆ, ಮಾವ ಹಾಗೂ ಪತಿ ವಿಕಾಸ ಹಿರೇಮಠ ಅವರ ಪ್ರೋತ್ಸಾಹವೇ ಕಾರಣ. ಕೆಎಎಸ್ ಪರೀಕ್ಷೆಯ ಸಿದ್ಧತೆಗೆ ಎಲ್ಲರೂ ಸಹಕಾರ ನೀಡಿದರು ಎಂದು ಸ್ಮರಿಸಿಕೊಳ್ಳುತ್ತಾರೆ.