<p><strong>ಇಳಕಲ್:</strong> ಸತತ ಪ್ರಯತ್ನದ ಮೂಲಕ ಕೆಎಎಸ್ ಪಾಸಾಗಿ ಸಾರ್ವಜನಿಕ ಆಡಳಿತ ಸೇವೆಗೆ ಸೇರುವ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ ನಗರದ ರಾಧಿಕಾ ಘನಶ್ಯಾಮ ಧೂತ್.</p>.<p>ರಾಧಿಕಾ ಇಲ್ಲಿನ ಎಸ್.ವಿ.ಎಂ ವಿದ್ಯಾವರ್ಧಕ ಸಂಘದ ಬಿ.ಬಿ.ಜಹಗೀರದಾರ ಬಿಬಿಎ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.</p>.<p> ರಾಧಿಕಾ 'ಗ್ರಾಮೀಣ ಅಭಿವೃದ್ಧಿ' ಐಚ್ಛಿಕ ವಿಷಯವನ್ನು ಆಯ್ಕೆ ಮಾಡಿಕೊಂಡು ಕೆಎಎಸ್ ಪರೀಕ್ಷೆ ಬರೆದು ತಮ್ಮ ಎರಡನೇಪ್ರಯತ್ನದಲ್ಲಿ ಗುರಿ ತಲುಪಿದ್ದಾರೆ. </p>.<p>ವಾಣಿಜ್ಯ ತೆರಿಗೆ ನಿರೀಕ್ಷಕಿ (ಸಿಟಿಐ) ಯಾಗಿ ಗದಗದಲ್ಲಿ ಕೆಲಸ ಮಾಡುತ್ತಲೇ ಪರೀಕ್ಷೆ ಬರೆದರು. ಈಗ ಕೆಎಸ್ಎಸ್ ಪಾಸಾಗುವ ಮೂಲಕ ವಾಣಿಜ್ಯ ತೆರಿಗೆ ಇಲಾಖೆ ಆಧಿಕಾರಿ (ಸಿಟಿಓ) ಯಾಗಿ ಆಯ್ಕೆಯಾಗಿದ್ದಾರೆ.</p>.<p>ಎಸ್.ವಿ.ಎಂ ಪದವಿ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಗೋವಿಂದರೆಡ್ಡಿ ಅವರು ಕೆಎಎಸ್ ಪರೀಕ್ಷೆ ಪಾಸಾಗಿ ಉಪವಿಭಾಗಾಧಿಕಾರಿಯಾದದ್ದು ರಾಧಿಕಾ ಅವರಿಗೆ ಪ್ರೇರಣೆಯಾಯಿತು. ತಮ್ಮ ಈ ಸಾಧನೆಗೆ ತಂದೆ, ತಾಯಿ, ಅತ್ತೆ, ಮಾವ ಹಾಗೂ ಪತಿ ವಿಕಾಸ ಹಿರೇಮಠ ಅವರ ಪ್ರೋತ್ಸಾಹವೇ ಕಾರಣ. ಕೆಎಎಸ್ ಪರೀಕ್ಷೆಯ ಸಿದ್ಧತೆಗೆ ಎಲ್ಲರೂ ಸಹಕಾರ ನೀಡಿದರು ಎಂದು ಸ್ಮರಿಸಿಕೊಳ್ಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಳಕಲ್:</strong> ಸತತ ಪ್ರಯತ್ನದ ಮೂಲಕ ಕೆಎಎಸ್ ಪಾಸಾಗಿ ಸಾರ್ವಜನಿಕ ಆಡಳಿತ ಸೇವೆಗೆ ಸೇರುವ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ ನಗರದ ರಾಧಿಕಾ ಘನಶ್ಯಾಮ ಧೂತ್.</p>.<p>ರಾಧಿಕಾ ಇಲ್ಲಿನ ಎಸ್.ವಿ.ಎಂ ವಿದ್ಯಾವರ್ಧಕ ಸಂಘದ ಬಿ.ಬಿ.ಜಹಗೀರದಾರ ಬಿಬಿಎ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.</p>.<p> ರಾಧಿಕಾ 'ಗ್ರಾಮೀಣ ಅಭಿವೃದ್ಧಿ' ಐಚ್ಛಿಕ ವಿಷಯವನ್ನು ಆಯ್ಕೆ ಮಾಡಿಕೊಂಡು ಕೆಎಎಸ್ ಪರೀಕ್ಷೆ ಬರೆದು ತಮ್ಮ ಎರಡನೇಪ್ರಯತ್ನದಲ್ಲಿ ಗುರಿ ತಲುಪಿದ್ದಾರೆ. </p>.<p>ವಾಣಿಜ್ಯ ತೆರಿಗೆ ನಿರೀಕ್ಷಕಿ (ಸಿಟಿಐ) ಯಾಗಿ ಗದಗದಲ್ಲಿ ಕೆಲಸ ಮಾಡುತ್ತಲೇ ಪರೀಕ್ಷೆ ಬರೆದರು. ಈಗ ಕೆಎಸ್ಎಸ್ ಪಾಸಾಗುವ ಮೂಲಕ ವಾಣಿಜ್ಯ ತೆರಿಗೆ ಇಲಾಖೆ ಆಧಿಕಾರಿ (ಸಿಟಿಓ) ಯಾಗಿ ಆಯ್ಕೆಯಾಗಿದ್ದಾರೆ.</p>.<p>ಎಸ್.ವಿ.ಎಂ ಪದವಿ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಗೋವಿಂದರೆಡ್ಡಿ ಅವರು ಕೆಎಎಸ್ ಪರೀಕ್ಷೆ ಪಾಸಾಗಿ ಉಪವಿಭಾಗಾಧಿಕಾರಿಯಾದದ್ದು ರಾಧಿಕಾ ಅವರಿಗೆ ಪ್ರೇರಣೆಯಾಯಿತು. ತಮ್ಮ ಈ ಸಾಧನೆಗೆ ತಂದೆ, ತಾಯಿ, ಅತ್ತೆ, ಮಾವ ಹಾಗೂ ಪತಿ ವಿಕಾಸ ಹಿರೇಮಠ ಅವರ ಪ್ರೋತ್ಸಾಹವೇ ಕಾರಣ. ಕೆಎಎಸ್ ಪರೀಕ್ಷೆಯ ಸಿದ್ಧತೆಗೆ ಎಲ್ಲರೂ ಸಹಕಾರ ನೀಡಿದರು ಎಂದು ಸ್ಮರಿಸಿಕೊಳ್ಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>