<p><strong>ಬೆಳಗಾವಿ:</strong> ನಗರದಲ್ಲಿ ಶುಕ್ರವಾರ ಇಡೀ ದಿನ ‘ಕರೆಯದೇ ಬಂದ ಕಾಡಿನ ಅತಿಥಿ’ಯದ್ದೇ ಮಾತು. ಜನವಸತಿ ಪ್ರದೇಶಕ್ಕೆ ನುಗ್ಗಿದ ಈ ವನ್ಯಮೃಗ ಭಯ ಹುಟ್ಟಿಸಿದ್ದು ನಿಜ. ಆದರೆ, ಪ್ರಾಣಿ ಪ್ರಿಯರಲ್ಲಿ ಇನ್ನಿಲ್ಲದ ಕೌತುಕ ಮೂಡುವಂತೆಯೂ ಮಾಡಿತು.</p>.<p>ಇಲ್ಲಿನ ಜಾಧವ ನಗರದ ಜನವಸತಿ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ದಿಢೀರ್ ಎಂದು ದರ್ಶನ ನೀಡಿದ ಚಿರತೆ ಹಲವು ಪ್ರಶ್ನೆಗಳನ್ನು ಹೊತ್ತು ತಂದಿದೆ. ಈ ವನ್ಯಮೃಗ ಯಾವ ಕಡೆಯಿಂದ ಬಂದಿದೆ? ಮಳೆಗಾಲದಲ್ಲಿ ಅರಣ್ಯದಲ್ಲಿ ಆಹಾರಕ್ಕೆ ಬೇಕಾದ ಪ್ರಾಣಿಗಳು ಇದ್ದಾಗಿಯೂ, ನಾಡಿನತ್ತ ನುಗ್ಗಲು ಕಾರಣವೇನು? ಚಿರತೆ ಸೆರೆ ಸಿಗದಿದ್ದರೆ ಮುಂದಿನ ದಾರಿ ಏನು... ಹೀಗೆ ಹಲವು ಪ್ರಶ್ನೆಗಳು ಜನರ ತಲೆಯಲ್ಲಿ ಹೂಂಕರಿಸುತ್ತಿವೆ.</p>.<p>ಈಚೆಗೆ ಸವದತ್ತಿ, ಚಿಕ್ಕೋಡಿ, ನಿಪ್ಪಾಣಿ ತಾಲ್ಲೂಕಿನ ಅಲ್ಲಲ್ಲಿ ಚಿರತೆಗಳು ಕಾಣಿಸಿಕೊಂಡಿದ್ದವು. ಅದಕ್ಕಾಗಿ ಇಟ್ಟ ಬಲೆಗಳು ಇನ್ನೂ ಖಾಲಿ ಇವೆ. ಆದರೆ, ಈಗ ಜನನಿಬಿಡ, ವಾಹನ ದಟ್ಟಣೆ ಇರುವ ನಗರದೊಳಗೆ ಬಂದಿದ್ದು ಅಚ್ಚರಿ ಮೂಡಿಸಿದೆ.</p>.<p>ಚಿರತೆಗೆ ನಾಯಿಗಳೇ ನೆಚ್ಚಿನ ಆಹಾರ. ಜನವಸತಿಯಲ್ಲಿ ನಾಯಿಗಳು ಹೆಚ್ಚಾದ ಸಂದರ್ಭದಲ್ಲಿ ಹೀಗೆ ಚಿರತೆಯೂ ಅತ್ತ ದಾಳಿ ಇಡುತ್ತದೆ ಎನ್ನುವುದು ಪರಿಸರ ತಜ್ಞರ ಅನುಭವ.</p>.<p class="Subhead">ಏನಾಯಿತು?: ಕಟ್ಟಡ ಕಾರ್ಮಿಕ, ಖನಗಾವ ಗ್ರಾಮದ ಸಿದರಾಯಿ ಲಕ್ಷ್ಮಣ ಮಿರಜಕರ್ (38) ಅವರಿಗೆ ಚಿರತೆ ದಾಳಿಯಿಂದ ಚಿಕ್ಕ ಗಾಯವಾಗಿದೆ. ಆದರೆ, ಪುತ್ರನ ಮೇಲೆ ಚಿರತೆ ದಾಳಿ ಮಾಡಿದೆ ಎಂಬ ಸುದ್ದಿ ಕೇಳಿದ ಅವರ ತಾಯಿ ಶಾಂತಾ ಮಿರಜಕರ್ (65) ಹೃದಯಾಘಾತದಿಂದ ಮೃತಟ್ಟರು.</p>.<p>ಹತ್ತಿರದ ಮನೆಯೊಂದರಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆ ಪೊದೆಯೊಳಗೆ ನುಗ್ಗುವುದು ಸ್ಪಷ್ಟವಾಗಿ ಕಾಣಿಸಿದೆ. ಇದರ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ<br />ಹರಿದಾಡಿದವು.</p>.<p>ಸದ್ಯ ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಜಾಧವ ನಗರದಲ್ಲಿ ಗಸ್ತು ನಡೆಸಿದ್ದಾರೆ. ಆದರೆ, ರಾತ್ರಿ 10.30ರವರೆಗೂ ಚಿರತೆ ಮತ್ತೆ ಯಾರ ಕಣ್ಣಿಗೂ ಬೀಳಲಿಲ್ಲ.</p>.<p class="Subhead">ಮುಂದೇನು?: ಪೊದೆಯಲ್ಲಿ ಅವಿತುಕೊಂಡ ಚಿರತೆ ಸೆರೆ ಹಿಡಿಯಲು ಗದಗದಿಂದ ಪರಿಣತರ ತಂಡವನ್ನು ಕರೆಸಲಾಗಿದೆ. ಈ ರೀತಿ ನಗರಕ್ಕೆ ನುಗ್ಗುವ ವನ್ಯಮೃಗಗಳನ್ನು ಸೆರೆ ಹಿಡಿಯುವ ಪರಿಣತ ಸಿಬ್ಬಂದಿ ಬೆಳಗಾವಿಯಲ್ಲಿ ಇಲ್ಲ. ಹೀಗಾಗಿ, ಗದಗದಿಂದ ವಿಶೇಷ ತಂಡವನ್ನು ಸಲಕರಣೆ ಸಮೇತ ಕರೆಸಲು ಅಧಿಕಾರಿಗಳು ಮುಂದಾದರು.</p>.<p>ಜಾಧವ ನಗರದ ಎರಡೂ ದಿಕ್ಕಿನಲ್ಲಿ ಜನರ ಓಡಾಟ ನಿರ್ಬಂಧಿಸಲಾಗಿದೆ. ಬ್ಯಾರಿಕೇಡ್ ಹಾಕಿ ವಾಹನ ಓಡಾಟ ನಿಲ್ಲಿಸಲಾಗಿದೆ. ಮನೆಯಿಂದ ಹೊರಬರದಂತೆ ಧ್ವನಿವರ್ಧಕದ ಮೂಲಕ ಸೂಚಿಸಲಾಗಿದೆ.</p>.<p>ಕೆಲವು ವರ್ಷಗಳ ಹಿಂದೆ ಇಂಡಾಲ್ ಪ್ರದೇಶದ ಹೊರವಲಯ ಹಾಗೂ ಭೂತರಾಮನ ಹಟ್ಟಿ ಕಾಡಂಚಿನಲ್ಲೂ ಚಿರತೆ ಪ್ರತ್ಯಕ್ಷವಾಗಿದ್ದವು. ಅರಣ್ಯಾಧಿಕಾರಿಗಳು ಆ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.</p>.<p>ಸದ್ಯ ಚಿರತೆ ಸೆರೆಗೆ ಕೈಗೊಂಡ ಕ್ರಮಗಳೇನು ಎಂದು ತಿಳಿಸಲು, ವಲಯ ಅರಣ್ಯಾಧಿಕಾರಿ ಶಿವಾನಂದ ಮಗದುಮ್ ಅವರು ಕರೆ ಸ್ವೀಕರಿಸಲಿಲ್ಲ.</p>.<p>*</p>.<p><strong>ವಾಯು ವಿಹಾರಕ್ಕೆ ಹೋಗಬೇಡಿ</strong></p>.<p>ಬೆಳಗಾವಿ ನಗರದಲ್ಲೇ ಚಿರತೆ ಓಡಾಡುತ್ತಿರುವ ಕಾರಣ ಬೆಳಿಗ್ಗೆ ಹಾಗೂ ಸಂಜೆ ವಾಯು ವಿಹಾರಕ್ಕೆ ಹೋಗುವುದನ್ನು ಕೆಲ ದಿನ ನಿಲ್ಲಸಬೇಕು. ಚಿರತೆ ಸೆರೆ ಸಿಗುವವರೆಗೂ ಎಚ್ಚರಿಕೆಯಿಂದ ಇರಬೇಕು ಎಂದು ನಗರ ಪೊಲೀಸ್ ಕಮಿಷನರ್ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ.</p>.<p>ಜಾಧವ ನಗರದ ಸುತ್ತಲಿನ ಪ್ರದೇಶದಲ್ಲಿ ಓಡಾಡಬಾರದು. ರಾತ್ರಿ ಹೊತ್ತಲ್ಲಿ ವಾಹನ ಚಲಾಯಿಸಬಾರದು. ಮಕ್ಕಳನ್ನು ರಸ್ತೆಗಳಲ್ಲಿ ಆಡಲು ಬಿಡಬಾರದು. ಮತ್ತೆ ಯಾರಿಗಾದರೂ ಚಿರತೆ ಕಾಣಿಸಿಕೊಂಡರೆ ತಕ್ಷಣ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದೂ ಕೋರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ನಗರದಲ್ಲಿ ಶುಕ್ರವಾರ ಇಡೀ ದಿನ ‘ಕರೆಯದೇ ಬಂದ ಕಾಡಿನ ಅತಿಥಿ’ಯದ್ದೇ ಮಾತು. ಜನವಸತಿ ಪ್ರದೇಶಕ್ಕೆ ನುಗ್ಗಿದ ಈ ವನ್ಯಮೃಗ ಭಯ ಹುಟ್ಟಿಸಿದ್ದು ನಿಜ. ಆದರೆ, ಪ್ರಾಣಿ ಪ್ರಿಯರಲ್ಲಿ ಇನ್ನಿಲ್ಲದ ಕೌತುಕ ಮೂಡುವಂತೆಯೂ ಮಾಡಿತು.</p>.<p>ಇಲ್ಲಿನ ಜಾಧವ ನಗರದ ಜನವಸತಿ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ದಿಢೀರ್ ಎಂದು ದರ್ಶನ ನೀಡಿದ ಚಿರತೆ ಹಲವು ಪ್ರಶ್ನೆಗಳನ್ನು ಹೊತ್ತು ತಂದಿದೆ. ಈ ವನ್ಯಮೃಗ ಯಾವ ಕಡೆಯಿಂದ ಬಂದಿದೆ? ಮಳೆಗಾಲದಲ್ಲಿ ಅರಣ್ಯದಲ್ಲಿ ಆಹಾರಕ್ಕೆ ಬೇಕಾದ ಪ್ರಾಣಿಗಳು ಇದ್ದಾಗಿಯೂ, ನಾಡಿನತ್ತ ನುಗ್ಗಲು ಕಾರಣವೇನು? ಚಿರತೆ ಸೆರೆ ಸಿಗದಿದ್ದರೆ ಮುಂದಿನ ದಾರಿ ಏನು... ಹೀಗೆ ಹಲವು ಪ್ರಶ್ನೆಗಳು ಜನರ ತಲೆಯಲ್ಲಿ ಹೂಂಕರಿಸುತ್ತಿವೆ.</p>.<p>ಈಚೆಗೆ ಸವದತ್ತಿ, ಚಿಕ್ಕೋಡಿ, ನಿಪ್ಪಾಣಿ ತಾಲ್ಲೂಕಿನ ಅಲ್ಲಲ್ಲಿ ಚಿರತೆಗಳು ಕಾಣಿಸಿಕೊಂಡಿದ್ದವು. ಅದಕ್ಕಾಗಿ ಇಟ್ಟ ಬಲೆಗಳು ಇನ್ನೂ ಖಾಲಿ ಇವೆ. ಆದರೆ, ಈಗ ಜನನಿಬಿಡ, ವಾಹನ ದಟ್ಟಣೆ ಇರುವ ನಗರದೊಳಗೆ ಬಂದಿದ್ದು ಅಚ್ಚರಿ ಮೂಡಿಸಿದೆ.</p>.<p>ಚಿರತೆಗೆ ನಾಯಿಗಳೇ ನೆಚ್ಚಿನ ಆಹಾರ. ಜನವಸತಿಯಲ್ಲಿ ನಾಯಿಗಳು ಹೆಚ್ಚಾದ ಸಂದರ್ಭದಲ್ಲಿ ಹೀಗೆ ಚಿರತೆಯೂ ಅತ್ತ ದಾಳಿ ಇಡುತ್ತದೆ ಎನ್ನುವುದು ಪರಿಸರ ತಜ್ಞರ ಅನುಭವ.</p>.<p class="Subhead">ಏನಾಯಿತು?: ಕಟ್ಟಡ ಕಾರ್ಮಿಕ, ಖನಗಾವ ಗ್ರಾಮದ ಸಿದರಾಯಿ ಲಕ್ಷ್ಮಣ ಮಿರಜಕರ್ (38) ಅವರಿಗೆ ಚಿರತೆ ದಾಳಿಯಿಂದ ಚಿಕ್ಕ ಗಾಯವಾಗಿದೆ. ಆದರೆ, ಪುತ್ರನ ಮೇಲೆ ಚಿರತೆ ದಾಳಿ ಮಾಡಿದೆ ಎಂಬ ಸುದ್ದಿ ಕೇಳಿದ ಅವರ ತಾಯಿ ಶಾಂತಾ ಮಿರಜಕರ್ (65) ಹೃದಯಾಘಾತದಿಂದ ಮೃತಟ್ಟರು.</p>.<p>ಹತ್ತಿರದ ಮನೆಯೊಂದರಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆ ಪೊದೆಯೊಳಗೆ ನುಗ್ಗುವುದು ಸ್ಪಷ್ಟವಾಗಿ ಕಾಣಿಸಿದೆ. ಇದರ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ<br />ಹರಿದಾಡಿದವು.</p>.<p>ಸದ್ಯ ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಜಾಧವ ನಗರದಲ್ಲಿ ಗಸ್ತು ನಡೆಸಿದ್ದಾರೆ. ಆದರೆ, ರಾತ್ರಿ 10.30ರವರೆಗೂ ಚಿರತೆ ಮತ್ತೆ ಯಾರ ಕಣ್ಣಿಗೂ ಬೀಳಲಿಲ್ಲ.</p>.<p class="Subhead">ಮುಂದೇನು?: ಪೊದೆಯಲ್ಲಿ ಅವಿತುಕೊಂಡ ಚಿರತೆ ಸೆರೆ ಹಿಡಿಯಲು ಗದಗದಿಂದ ಪರಿಣತರ ತಂಡವನ್ನು ಕರೆಸಲಾಗಿದೆ. ಈ ರೀತಿ ನಗರಕ್ಕೆ ನುಗ್ಗುವ ವನ್ಯಮೃಗಗಳನ್ನು ಸೆರೆ ಹಿಡಿಯುವ ಪರಿಣತ ಸಿಬ್ಬಂದಿ ಬೆಳಗಾವಿಯಲ್ಲಿ ಇಲ್ಲ. ಹೀಗಾಗಿ, ಗದಗದಿಂದ ವಿಶೇಷ ತಂಡವನ್ನು ಸಲಕರಣೆ ಸಮೇತ ಕರೆಸಲು ಅಧಿಕಾರಿಗಳು ಮುಂದಾದರು.</p>.<p>ಜಾಧವ ನಗರದ ಎರಡೂ ದಿಕ್ಕಿನಲ್ಲಿ ಜನರ ಓಡಾಟ ನಿರ್ಬಂಧಿಸಲಾಗಿದೆ. ಬ್ಯಾರಿಕೇಡ್ ಹಾಕಿ ವಾಹನ ಓಡಾಟ ನಿಲ್ಲಿಸಲಾಗಿದೆ. ಮನೆಯಿಂದ ಹೊರಬರದಂತೆ ಧ್ವನಿವರ್ಧಕದ ಮೂಲಕ ಸೂಚಿಸಲಾಗಿದೆ.</p>.<p>ಕೆಲವು ವರ್ಷಗಳ ಹಿಂದೆ ಇಂಡಾಲ್ ಪ್ರದೇಶದ ಹೊರವಲಯ ಹಾಗೂ ಭೂತರಾಮನ ಹಟ್ಟಿ ಕಾಡಂಚಿನಲ್ಲೂ ಚಿರತೆ ಪ್ರತ್ಯಕ್ಷವಾಗಿದ್ದವು. ಅರಣ್ಯಾಧಿಕಾರಿಗಳು ಆ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.</p>.<p>ಸದ್ಯ ಚಿರತೆ ಸೆರೆಗೆ ಕೈಗೊಂಡ ಕ್ರಮಗಳೇನು ಎಂದು ತಿಳಿಸಲು, ವಲಯ ಅರಣ್ಯಾಧಿಕಾರಿ ಶಿವಾನಂದ ಮಗದುಮ್ ಅವರು ಕರೆ ಸ್ವೀಕರಿಸಲಿಲ್ಲ.</p>.<p>*</p>.<p><strong>ವಾಯು ವಿಹಾರಕ್ಕೆ ಹೋಗಬೇಡಿ</strong></p>.<p>ಬೆಳಗಾವಿ ನಗರದಲ್ಲೇ ಚಿರತೆ ಓಡಾಡುತ್ತಿರುವ ಕಾರಣ ಬೆಳಿಗ್ಗೆ ಹಾಗೂ ಸಂಜೆ ವಾಯು ವಿಹಾರಕ್ಕೆ ಹೋಗುವುದನ್ನು ಕೆಲ ದಿನ ನಿಲ್ಲಸಬೇಕು. ಚಿರತೆ ಸೆರೆ ಸಿಗುವವರೆಗೂ ಎಚ್ಚರಿಕೆಯಿಂದ ಇರಬೇಕು ಎಂದು ನಗರ ಪೊಲೀಸ್ ಕಮಿಷನರ್ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ.</p>.<p>ಜಾಧವ ನಗರದ ಸುತ್ತಲಿನ ಪ್ರದೇಶದಲ್ಲಿ ಓಡಾಡಬಾರದು. ರಾತ್ರಿ ಹೊತ್ತಲ್ಲಿ ವಾಹನ ಚಲಾಯಿಸಬಾರದು. ಮಕ್ಕಳನ್ನು ರಸ್ತೆಗಳಲ್ಲಿ ಆಡಲು ಬಿಡಬಾರದು. ಮತ್ತೆ ಯಾರಿಗಾದರೂ ಚಿರತೆ ಕಾಣಿಸಿಕೊಂಡರೆ ತಕ್ಷಣ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದೂ ಕೋರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>