ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಬೆಳಗಾವಿ ಲೋಕಸಭಾ ಕ್ಷೇತ್ರ: ಲೋಕತಂತ್ರ ವ್ಯವಸ್ಥೆಯ ‘ಸುಂದರಕಾಂಡ’

Published : 7 ಮೇ 2024, 5:47 IST
Last Updated : 7 ಮೇ 2024, 5:47 IST
ಫಾಲೋ ಮಾಡಿ
Comments
ಮೃಣಾಲ್‌ ಹೆಬ್ಬಾಳಕರ
ಮೃಣಾಲ್‌ ಹೆಬ್ಬಾಳಕರ
ಪ್ರಿಯಾಂಕಾ ಜಾರಕಿಹೊಳಿ
ಪ್ರಿಯಾಂಕಾ ಜಾರಕಿಹೊಳಿ
ಅಣ್ಣಾಸಾಹೇಬ ಜೊಲ್ಲೆ
ಅಣ್ಣಾಸಾಹೇಬ ಜೊಲ್ಲೆ
ಯುವಶಕ್ತಿಯೋ ಅನುಭವದ ಖನಿಯೋ
ಬೆಳಗಾವಿಯಲ್ಲಿ ಮೃಣಾಲ್‌ ಹೆಬ್ಬಾಳಕರ ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್‌ ಹೊಸ ಮನ್ವಂತರಕ್ಕೆ ನಾಂದಿ ಹಾಡಿತು. ಇದೀಗ ಹರೆಯಕ್ಕೆ ಬಂದ ಬಿಸಿರಕ್ತದ ಯುವಶಕ್ತಿಯನ್ನು ಹೋರಾಟಕ್ಕೆ ನಿಲ್ಲಿಸಿದ್ದು ಮತದಾರರನ್ನು ನಿಬ್ಬೆರಗು ಮಾಡಿತು. ಇದಕ್ಕೆ ತಕ್ಕನಾಗಿಯೇ ಬಿಜೆಪಿ ತನ್ನ ಅನುಭವದ ಖನಿಗಳನ್ನು ಕಣಕ್ಕಿಳಿಸಿತು. ಜಗದೀಶ ಶೆಟ್ಟರ್‌ ಅವರು ಬೆಳಗಾವಿ ರಾಜಕಾರಣಕ್ಕೆ ಪ್ರವೇಶ ಮಾಡಿದ್ದು ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಿತು. ಈ ಹೊಸ ಪ್ರಯೋಗ ಜಿಲ್ಲೆಯ ಮತದಾರನನ್ನು ಚಕಿತಗೊಳಿಸಿತು. ಸಹಕಾರ ಕ್ಷೇತ್ರದಲ್ಲಿ ಪಳಗಿರುವ ಅಣ್ಣಾಸಾಹೇಬ ಜೊಲ್ಲೆ ಈ ಚುನಾವಣೆಯನ್ನು ಹಗುರವಾಗೇನೂ ತೆಗೆದುಕೊಂಡಿಲ್ಲ. ಅವರ ಸ್ಪರ್ಧೆ ಪ್ರಿಯಾಂಕಾ ಬದಲಾಗಿ; ಸತೀಶ ಜಾರಕಿಹೊಳಿ ವಿರುದ್ಧ ಎಂಬಷ್ಟು ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ. ಈ ಬಾರಿ ಎರಡೂ ಕ್ಷೇತ್ರಗಳ ಚುನಾವಣೆ ‘ಅಕ್ಕಿ ಮೇಲೆ ಆಸೆ ನಂಟರ ಮೇಲೆ ಪ್ರೀತಿ’ ಎಂದು ಗಾದೆ ಮಾತು ಹೋಲುತ್ತವೆ. ಸದ್ಯಕ್ಕೆ ಗ್ಯಾರಂಟಿಗಳ ಮೇಲೆ ಆಸೆ ಮೋದಿ ಮೇಲೆ ಪ್ರೀತಿ ಎಂಬ ಅನಿಸಿಕೆ ಮತದಾರರದ್ದು. ಯುವಶಕ್ತಿಯೋ ಅನುಭವದ ಖನಿಯೋ... ಯಾರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂಬುದನ್ನು ಮಾತ್ರ ಮತದಾರ ಇನ್ನೂ ಬಿಟ್ಟುಕೊಟ್ಟಿಲ್ಲ.
ಯಾರ್‍ಯಾರು ಎಲ್ಲೆಲ್ಲಿ ನಿಂತಿದ್ದಾರೆ
ಬೆಳಗಾವಿಯಲ್ಲಿ 13 ಚಿಕ್ಕೊಡಿ ಕಣದಲ್ಲಿ 18 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಳಗಾವಿ: ಬಿಜೆಪಿಯ ಜಗದೀಶ ಶೆಟ್ಟರ್‌ ಕಾಂಗ್ರೆಸ್‌ನ ಮೃಣಾಲ್‌ ಹೆಬ್ಬಾಳಕರ ಉತ್ತಮ ಪ್ರಜಾಕೀಯ ಪಕ್ಷದ ಮಲ್ಲಪ್ಪ ಚೌಗಲಾ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಬಸಪ್ಪ ಕುಂಬಾರ ಬಹುಜನ ಸಮಾಜ ಪಕ್ಷದ ಅಶೋಕ ಅಪ್ಪುಗೋಳ ಸೋಷಿಯನ್‌ ಯೂನಿಟ್‌ ಸೆಂಟರ್‌ ಆಫ್‌ ಇಂಡಿಯಾ (ಕಮ್ಯೂನಿಷ್ಟ್‌)ದ ಲಕ್ಷ್ಮಣ ಜಡಗನ್ನವರ ಪಕ್ಷೇತರ ಅಭ್ಯರ್ಥಿಗಳಾದ ಅಶ್ಫಾಕ್‌ಅಹ್ಮದ್‌ ಉಸ್ತಾದ್‌ ಅಶೋಕ ಹಣಜಿ ನಿತಿನ್ ಎ.ಎಂ ಪುಂಡಲೀಕ ಇಟ್ನಾಳ ಮಹಾದೇವ ಪಾಟೀಲ ರವಿ ಪಡಸಲಗಿ ವಿಜಯ ಮೇತ್ರಾಣಿ. ಚಿಕ್ಕೋಡಿ: ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ಕಾಂಗ್ರೆಸ್‌ನ ಪ್ರಿಯಾಂಕಾ ಜಾರಕಿಹೊಳಿ ಸರ್ವ ಜನತಾ ಪಕ್ಷದಿಂದ ಅಪ್ಪಾಸಾಹೇಬ ಕುರಣೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಕುಮಾರ ಡೊಂಗರೆ ಬಹುಜನ ಭಾರತ ಪಾರ್ಟಿಯಿಂದ ಪವನಕುಮಾರ ಬಾಬುರಾವ ಮಾಳಗೆ ಭಾರತೀಯ ಜವಾನ ಕಿಸಾನ ಪಾರ್ಟಿಯಿಂದ ಸತ್ಯಪ್ಪ ದಶರಥ ಕಾಳೇಲಿ ಪಕ್ಷೇತರ ಅಭ್ಯರ್ಥಿಗಳಾದ ಕಾಡಯ್ಯ ಶಂಕರಯ್ಯ ಹಿರೇಮಠ ಕಾಶಿನಾಥ ಕುರಣಿ ಗಜಾನನ ಪೂಜಾರಿ ಜಿತೇಂದ್ರ ಸುಭಾಷ ನೇರ್ಲೆ ಭೀಮಸೇನ ಸನದಿ ಮಹೇಶ ಅಶೋಕ ಮೋಹನ ಮೊಟನ್ನವರ ಯಾಸೀನ್‌ ಶಿರಾಜುದ್ಧಿನ ಪಟಕಿ ವಿಲಾಸ ಮಣ್ಣೂರ ಶಂಭು ಕಲ್ಲೋಳಿಕರ ಶ್ರೀಣಿಕ ಅಣ್ಣಾಸಾಹೇಬ ಜಂಗಟೆ ಸಮ್ಮೇದ ಸರದಾರ ವರ್ಧಮಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT