ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿ | ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಠಳ್ಳಿ ಸ್ವಗ್ರಾಮದಲ್ಲಿಯೇ ಮತ ಯಾಚನೆಗೆ ವಿರೋಧ

Last Updated 1 ಡಿಸೆಂಬರ್ 2019, 11:17 IST
ಅಕ್ಷರ ಗಾತ್ರ

ತೆಲಸಂಗ (ಅಥಣಿ ತಾಲ್ಲೂಕು): ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಅವರು ಮತಯಾಚಿಸುವುದಕ್ಕೆ ಸ್ವಗ್ರಾಮ ತೆಲಸಂಗದಲ್ಲೇ ಭಾರಿ ವಿರೋಧ ವ್ಯಕ್ತವಾಗಿದೆ. ಅವರಿಗೆ ವಿರೋಧ ವ್ಯಕ್ತಪಡಿಸುವ ಫಲಕಗಳನ್ನುಗ್ರಾಮದ ಅಲ್ಲಲ್ಲಿ ಹಾಕಲಾಗಿದೆ.

‘ಅಥಣಿ ಶಿವಯೋಗಿಗಳ ಪುಣ್ಯಕ್ಷೇತ್ರ. ಇಲ್ಲಿ ಹಣಕ್ಕಾಗಿ ತಮ್ಮ ಶಾಸಕಸ್ಥಾನವನ್ನೇ ಮಾರಾಟ ಮಾಡಿಕೊಂಡ ಅನರ್ಹರಿಗೆ ಪ್ರವೇಶವಿಲ್ಲ’ ಎಂದು ದೊಡ್ಡ ಬೋರ್ಡ್‌ ಇಡಲಾಗಿದೆ.

‘ಪಕ್ಷಾಂತರ ಮಾಡಿದ ಅನರ್ಹ ಶಾಸಕರನ್ನು ತಮಿಳುನಾಡು, ಮಹಾರಾಷ್ಟ್ರ, ಗುಜರಾತಿನ ಜನ ಸೋಲಿಸಿದ್ದಾರೆ. ಕರ್ನಾಟಕದಲ್ಲೂ ಒಬ್ಬನೇ ಒಬ್ಬ ಅನರ್ಹ ಶಾಸಕ ಗೆದ್ದರೂ ಆ ಕ್ಷೇತ್ರದ ಮತದಾರ ತನ್ನನ್ನು ತಾನು ಹಣ, ಹೆಂಡಕ್ಕೆ ಅಡವಿಟ್ಟುಕೊಂಡಂತೆ’ ಎಂಬ ಹೇಳಿಕೆಯಿರುವ ಫ್ಲೆಕ್ಸ್‌ಗೆನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರ ಹೆಸರು ಹಾಗೂ ಫೋಟೊ ಅಳವಡಿಸಲಾಗಿದೆ.

ವಿಷಯ ತಿಳಿದು ಮಧ್ಯಾಹ್ನ ಗ್ರಾಮಕ್ಕೆ ಬಂದ ಪೊಲೀಸರು, ಫ್ಲೆಕ್ಸ್ ಮತ್ತುಬೋರ್ಡ್‌ಗಳನ್ನು ತೆರವುಗೊಳಿಸಿದರು.

ಗ್ರಾಮದಲ್ಲಿದ್ದ ಮತ್ತೊಂದು ಫಲಕ
ಗ್ರಾಮದಲ್ಲಿದ್ದ ಮತ್ತೊಂದು ಫಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT