ನಾಗರಾಜ ತವರು ಮನೆಗೆ ಬಂದು ಜಗಳವಾಡುತ್ತಿದ್ದ. ಗೀತಾ ಅವರನ್ನು ತನ್ನ ಜೊತೆ ಕಳುಹಿಸಿಕೊಡಬೇಕೆಂದು ಒತ್ತಾಯಿಸುತ್ತಿದ್ದ. ಗೀತಾ ಕೆಲಸ ಮಾಡುತ್ತಿದ್ದ ಬ್ಯೂಟಿ ಪಾರ್ಲರ್ಗೆ ಹೋಗಿ, ಸಾರಾಯಿ ಕುಡಿಯಲು ಹಣ ನೀಡುವಂತೆ ಒತ್ತಾಯಿಸುತ್ತಿದ್ದ. 2016ರ ಮಾರ್ಚ್ 28ರಂದು ಹಣ ನೀಡದೇ ಇದ್ದಾಗ ಆಕ್ರೋಶಗೊಂಡ ನಾಗರಾಜ, ಹಿಂಡಾಲ್ಕೊ ಫ್ಯಾಕ್ಟರಿ ಬಳಿ ಎನ್.ಎಚ್ 4 ಸೇತುವೆ ಕೆಳಗಿನಿಂದ ಹಾದು ತನ್ನ ಬ್ಯೂಟಿ ಪಾರ್ಲರ್ ಕೆಲಸಕ್ಕೆ ಹೊರಟಿದ್ದ ಗೀತಾ ಅವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದರು. ತಲೆ, ಮುಖ ಹಾಗೂ ಕೈ ಮೇಲೆ ಹೊಡೆದು, ಹತ್ಯೆ ಮಾಡಿದ್ದರು.